ಕೃಷ್ಣ ಭಾರತ(ಗೋಪಾಲಕೃಷ್ಣ ಕುಂಟಿನಿ) - Krishna Bharatha(Gopalakrishna Kuntini)
- Product Code: XN-KRS-BHR-2Z6
- Availability: In Stock
- ₹200.00
₹180.00
ಮಹಾಭಾರತದ ನಾಯಕ ಯಾರೇ ಇರಬಹುದು, ಆದರೆ ನಿರ್ಣಾಯಕ ಖಂಡಿತಕ್ಕೂ ಕೃಷ್ಣನೇ. ಯಾವಾಗ ಕೃಷ್ಣ ಮಹಾಭಾರತದೊಳಗೆ ಬಂದನೋ ಆಮೇಲೆ ಅವನು ಮರಳಲಿಲ್ಲ. ಆತ ಜಗತ್ತಿನ ಮೊದಲ ರಾಜಕೀಯ ತಂತ್ರಗಾರ. ಭಾಗವತದಿಂದ ಭಾರತಕ್ಕೆ ಬಂದವನು, ಕೊಳಲು ಬಿಟ್ಟು ಚಕ್ರ ಹಿಡಿದವನು, ಎಂದೂ ಹಿಂತಿರುಗಿ ನೋಡದವನು, ಹೊರಟಲ್ಲಿಗೆ ಮತ್ತೆಂದೂ ಮರಳದವನು ಕೃಷ್ಣ. ಸಂಧಾನಕ್ಕೆ ಹೋದವನು, ಶಾಂತಿಯನ್ನು ಕೇಳಿದವನು, ಸಂಧಾನ ಮುರಿದು ಬಿದ್ದೊಡನೆ ಎದ್ದು ನಡೆದವನು, ಹಸ್ತಿನಾವತಿಯ ಗಡಿ ದಾಟುವ ಮುನ್ನವೇ ಪಾಂಡವರನ್ನೂ ಕೇಳದೇ ಮಹಾಯುದ್ಧಕ್ಕೆ ಮುಹೂರ್ತ ಇಟ್ಟ ಕೃಷ್ಣ ಶಾಂತಿ ಮತ್ತು ಸಂಘರ್ಷಗಳ ಬಿಂದು ಮಧ್ಯನಾಗಿ ನಿಂತ. ಆ ಬಿಂದುವಿನಲ್ಲೇ ಅವನ ವಿಶ್ವರೂಪವಿತ್ತು. ಅಂಥ ಕೃಷ್ಣನ ಕುರಿತ ನೋಟ ಇಲ್ಲಿದೆ. ಇದು ಭಕ್ತಿಸಾರವಲ್ಲ, ಭಾವನೆಯ ಹರಿವಲ್ಲ. ಯಥಾವತ್ತಾಗಿ ವ್ಯಾಸರು ತೋರಿಸಿದ ಕೃಷ್ಣನ ಮರು ನಿರೂಪಣೆ. ಇರುವುದೆಲ್ಲವಕ್ಕೂ ಕಾಲವೇ ಮೂಲ. ಕಾಲವೇ ಸರ್ವಜಗತ್ತಿನ ಬೀಜ. ಕಾಲವೇ ತಾನು ಬಯಸಿದಾಗ ಪುನಃ ಎಲ್ಲವನ್ನೂ ಹಿಂದೆ ಸೆಳೆದುಕೊಳ್ಳುತ್ತದೆ ಎಂಬ ಕೃಷ್ಣನ ಜೊತೆಗೆ ಕಾಲದ ಪಯಣ.


