ಕಾದಂಬರಿ/ಕಾವ್ಯ
ಕಾದಂಬರಿ/ಕಾವ್ಯ
ತನ್ನನ್ನು ಅವಿಚಿಕೊಂಡ ಅನ್ಯಾಯಗಳನ್ನು ಎತ್ತಿ ಎಸೆಯುವ ಭಾವಶಕ್ತಿ ಇಲ್ಲದ ಮನಸ್ಸು ತನ್ನನ್ನು ತಾನೇ ನಾಶಮಾಡಿಕೊಳ್ಳುವ ತನ್ನನ್ನು ಪ್ರೀತಿಸುವವರ ಮೇಲೆ ಕ್ರೌರ್ಯವನ್ನು ಮಸೆಯುವ ವಿಕೃತಿಗೆ ತಿರುಗಿರುವುದೇ ‘ ಅಂಚು’ವಿನ ವಸ್ತುವಾಗಿದೆ.ಜೀವನಪ್ರೀತಿ ಮತ್ತು ಸಾವಿನ ಪ್ರಪಾತಗಳ ಅಂಚಿನಲ್ಲಿ ನಿಂತಿರುವ ವ್ಯಕ್ತಿಯನ್ನು ತನ್ನತ್ತ ಸೆಳೆದುಕೊಳ್ಳಲು ಬೇಕಾದ ಪ್ರೀತಿಯು ಈ ಕ್ರೌರ್ಯಕ್ಕೆ ವಿರುದ್ದತೂಕವನ್ನು ಸೃಷ್ಟಿಸುತ್ತದೆ.ಈ ಸ್ಥೂಲವಸ್ತುವಿನ ಹಂದರದಲ್ಲಿ ಸ್ಪುಟವಾಗಿ ನಿಲ್ಲುವ ಪಾತ್ರಗಳು ಮಾನವಸನ್ನಿವೇಶಗಳು ಹಾಗೂ ಮನಃಪ್ರವೃತ್ತಿಯ ಗುಹ್ಯಸ್ಥಾನಗಳಿಗೆ ಟಾರ್ಚ್ ಹಾಕಿ ತೋರಿಸುವ ತಂತ್ರ ವಿಶ್ಲೇಷಣೆಗಳಿಂದ ಭೈರಪ್ಪನವರು ಈ ಕಾದಂಬರಿಯಲ್ಲಿ ಹೊಸ ದ್ರವ್ಯ ಹಾಗೂ ವಿಧಾನಗಳನ್ನು ಆವಿಷ್ಕರಿಸಿದ್ದಾರೆ...
Add to Cartಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...
Add to Cartಮಾಸ್ತಿ ವೆಂಕಟೇಶ ಅಯ್ಯಂಗಾರ್ (ಜೂನ್ 6, 1891 - ಜೂನ್ 7, 1986) ಅವರು ಕನ್ನಡದ ಅಣ್ಣ! ವಿನಾಯಕ ಕೃಷ್ಣ ಗೋಕಾಕರು ಮಾಸ್ತಿಯವರನ್ನು ಕನ್ನಡದ ಆಸ್ತಿ ಎಂದು ಕರೆದರು. ಕುವೆಂಪು ಅವರು ‘ಮಾಸ್ತಿಯವರ ಸಾಹಿತ್ಯ ದೊಡ್ಡದು; ಅವರು ಅದಕ್ಕಿಂತಲೂ ದೊಡ್ಡವರೆಂದು ನನ್ನ ಭಾವನೆ‘ ಎಂದಿರುವ ಮಾತು ಅಕ್ಷರಶಃ ನಿಜ. ಮಾಸ್ತಿಯವರು ಬದುಕಿದ್ದು 95 ವರ್ಷಗಳು! ಇದರಲ್ಲಿ 65 ವರ್ಷಗಳ ಕಾಲ ಅವರು ಕನ್ನಡದಲ್ಲಿ ಬರೆದರು! ಇತರ ಸಾಹಿತಿಗಳಿಂದ ಕನ್ನಡ ಸಾಹಿತ್ಯ ಕೃತಿಗಳನ್ನು ಬರೆಯಿಸಿದರು. ಅನೇಕ ಜನರ ಪುಸ್ತಕಗಳು ಪ್ರಕಟವಾಗಲು ಹಣ ಸಹಾಯ ಮಾಡಿದರು ಇಲ್ಲವೇ ತಮ್ಮ ಸ್ವಂತ ಹಣದಿಂದ ಪ್ರಕಟಿಸಿದರು. ‘ಜೀವನ‘ ದಂತಹ ಮಾಸಪತ್ರಿಕೆಯನ್ನು 21 ವರ್ಷಗಳ ಕಾಲ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಕರ್ನಾಟಕದಲ್ಲಿ ಕನ್ನಡ ಜಾಗೃತಿಯನ್ನುಂಟು ಮಾಡಿದರು. ಮಾಸ್ತಿಯವರು ಸುಮಾರು 15,000 ಪುಟಗಳ ಸಾಹಿತ್ಯವನ್ನು ಕನ್ನಡಿಗರಿಗೆ ಬಿಟ್ಟುಹೋಗಿದ್ದಾರೆ ಎಂದರೆ ಅವರ ಪ್ರತಿಭೆ ಎಂತಹ ದೈತ್ಯ ಸ್ವರೂಪದ್ದಾಗಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು. ಅವರ ಗದ್ಯ ಶೈಲಿ ಎಷ್ಟು ಸರಳವಾಗಿದೆ, ಎಷ್ಟು ಆಕರ್ಷಕವಾಗಿದೆ ಎಂದರೆ, ಅಂತಹ ಶೈಲಿಯನ್ನು ರೂಪಿಸಿಕೊಂಡ ಮತ್ತೊಬ್ಬ ಸಾಹಿತಿ ಅಪರೂಪ. ಮಾಸ್ತಿಯವರ ಬದುಕನ್ನು ಶ್ರೀ ಟಿ.ಎಸ್.ಗೋಪಾಲ್ ಅವರು ಈ ಪುಸ್ತಕದಲ್ಲಿ ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ...
Add to Cart‘ಅಗ್ನಿಮಿಳೇ ಪುರೋಹಿತಂ...ಯಜ್ಞಸ್ತದೇವಮೃತ್ವಿಜಂ|ಹೊರಾರಂ ರತ್ನಧಾತಮಂ||೧||’ಮನುಕುಲದ ಅತ್ಯಂತ ಪುರಾತನವಾದ ವೇದಗಳಲ್ಲಿ ಮೊದಲನೆಯದಾದ ಋಗ್ವೇದದ ಮೊಟ್ಟ ಮೊದಲ ಸಾಲು ‘ಅಗ್ನಿದೇವನೇ ನಿನ್ನನ್ನು ಪ್ರಾರ್ಥಿಸುತ್ತಿದ್ದೇವೆ. ಅಂಧಕಾಋಅವನ್ನ ಕರಗಿಸಿ ಬೆಳಕು ನೀಡುವವನೇ, ನಿನ್ನೆಡೆಗೆ ಅನುದಿನವು ಬರುತ್ತಿದ್ದೇವೆ. ಅತ್ಯಂತ ಭಕ್ತಿಪೂರ್ವಕವಾಗಿ ಕೃತಜ್ಞತಾಭಾವದಿಂದ ನಿನಗಿದೋ ವಂದನೆ.’ ಇದು ಸನಾತನ ಹಿಂದುಧರ್ಮಕ್ಕೆ ಭಾರತೀಯ ಸಂಸ್ಕೃತಿಗೆ ಹಿಡಿದ ಕನ್ನಡಿ. ಇದರಿಂದ ಪ್ರಭಾವಿತರಾದವರು ಅಸಂಖ್ಯಾತ ಮಹನೀಯರಲ್ಲಿ ಜರ್ಮನಿಯ ಪ್ರಖ್ಯಾತ ವಿದ್ವಾಂಸರಾದ ಮ್ಯಾಕ್ಸ್ ಮುಲ್ಲರ್ ಒಬ್ಬರು.ವಿದೇಶದಲ್ಲಿ ನೆಲೆಸಿದ ಕೃಷ್ಣಪ್ರಸಾದ್ ಅಗ್ನಿಹೋತ್ರಿ ತನ್ನ ಮಗನ ಮುಂದೆ ಪಠಿಸುತ್ತ ತನ್ನ ದೇಶದ ಹಿರಿಮೆಯನ್ನು ಒತ್ತಿ ಹೇಳಿ ತಾಯಿನಾಡಿಗೆ ಕಳಿಸಿದ್ದ ಶ್ಯಾಮ್ಪ್ರಸಾದ್ ಕಾದಂಬರಿಯಲ್ಲಿ ಮುಖ್ಯವಾಗುತ್ತಾನೆ...
Add to Cartಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಗಳಿಸಿದ್ದಾರೆ...
Add to Cartಇದು ಸುಧಾ ಮೂರ್ತಿಯವರ ಮೊದಲ ಕಾದಂಬರಿ. ಈ ಕಥೆ ಯಾವುದೇ ಒಂದು ವ್ಯಕ್ತಿಯನ್ನು ಕುರಿತಾಗಿ ಬರೆದಿಲ್ಲ. ಔದ್ಯೋಗೀಕರಣದಿಂದ ಭಾರತದ ಆರ್ಥಿಕ ನವೀನ ಪರಿಸರದಲ್ಲಿ ಮುಂಬಯಿಯಂತಹ ನಗರಗಳು ತಲೆ ಎತ್ತಿವೆ. ಪೂನಾ, ಬೆಂಗಳೂರು, ಮದ್ರಾಸು, ದಿಲ್ಲಿ ನಗರಗಳೂ ಈಗ ಅದೇ ದಿಶೆಯಲ್ಲಿ ಸಾಗುತ್ತಲಿವೆ. ಮಾನವದ ದೇಹದಲ್ಲಿ ಹೃದಯವಿದ್ದಂತೆ, ಈಗ ಮುಂಬೈ ನಗರವು ಔದ್ಯೋಗಿಕರಣದ ಕೇಂದ್ರಬಿಂದುವಾಗಿದೆ. ಈ ಹೊಸ ವಾತಾವರಣವು ಹಲವಾರು ಹೊಸ ಸಮಸ್ಯೆಗಳನ್ನು ತಂದು ಒಡ್ಡಿದೆ. ಮನುಷ್ಯ ಮನುಷ್ಯರಲ್ಲಿ ಅಧಿಕಾರದ ಸ್ಪರ್ಧೆಯೂ ಒಂದು ಯಶಸ್ಸಿನ ಮೆಟ್ಟಲನ್ನು ಬೇಗನೇ ಏರಲು ಪಡುವ ಆತುರ! ಅದಕ್ಕಾಗಿ ಎಷ್ಟೆಲ್ಲ ತಾಕಲಾಟ? ಯಶಸ್ಸೇ ಜೀವನದ ಪರಮೋನ್ನತಿ ಅದುವೇ ಬಾಳಗುರಿ ಎಂದು ತಿಳಿದು ಅದಕ್ಕಾಗಿ ತಮ್ಮ ಜೀವನವನ್ನೇ ಧಾರೆಯೆರೆದ, ಧಾರೆಯೆರೆಯುತ್ತಿರುವ ಜನರು ಇದ್ದಾರೆ, ಇರುತ್ತಾರೆ, ಆಗುತ್ತಲೂ ಇದ್ದಾರೆ. ಇಂಥವರ ಕೌಟುಂಬಿಕ ಸಮಸ್ಯೆಗಳಾವುವು? ಅದಕ್ಕೆ ಈ ಮಹತ್ವಾಕಾಂಕ್ಷಿ ಜನರು ಕೊಡುವ ಬೆಲೆ ಯಾವುದು? ಅಂಥವರ ಮನೆಯಲ್ಲಿರುವವರ ಜಗತು ಯಾವುದು? ಅವರ ಸುಭದ್ರವಾದ ಆರ್ಥಿಕ ಪರಿಸ್ಥಿತಿಯಿದ್ದರೂ ಮನಃಶಾಂತಿ ಯಾವುದು? ಅವರ ಪ್ರತಿಕ್ರಿಯೆ ಏನು? ಈ ತೀವ್ರತಮ ಸ್ಪರ್ಧೆಯಲ್ಲಿ ವ್ಯಾವಹಾರಿಕ ಜಗತ್ತಿನಲ್ಲಿ, ಮಾನವ ಮಾನವೀಯತೆಯನ್ನು ಕಳೆದುಕೊಂಡು ಕೇವಲ ಯಾಂತ್ರಿಕನಾಗುತ್ತಾನೆಯೇ? ಬದಲಾಗುತ್ತಿರುವ ಈ ಹೊಸ ಮೌಲ್ಯಗಳನ್ನು, ಹೊಸ ಪರಿಸರವನ್ನು ಹೊಂದದೇ ಅದರಲ್ಲಿ ಬಳಲುವ, ನಿಷ್ಕ್ರಿಯವಾದ, ನೀರಸ ಜೀವನವನ್ನು ನಡೆಯಿಸುತ್ತಿರುವವರ ಜೀವನದ ಬಗ್ಗೆ ಬರೆದ ಕಥೆಯಿದು...
Add to Cartಒಬ್ಬ ಸೂಫಿ ಸಂತನು ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದನು. ಆಗ ಕಪಿಯು ಒಂದು ತೆಂಗಿನಕಾಯಿಯನ್ನು ಸೂಫಿ ಸಂತನ ಮೇಲೆ ಎಸೆಯಿತು. ಸಂತನು ತೆಂಗಿನಕಾಯಿಯನ್ನು ತೆಗೆದುಕೊಂಡನು. ಒಳಗಿದ್ದ ನೀರನ್ನು ಕುಡಿದನು. ಕೊಬ್ಬರಿಯನ್ನು ತಿಂದನು. ಕರಟದಿಂದ ಭಿಕ್ಷಾಪಾತ್ರೆಯನ್ನು ರೂಪಿಸಿಕೊಂಡನು. ಟೀಕೆಯನ್ನು ನಾವು ಮುಕ್ತಮನಸ್ಸಿನಿಂದ ಸ್ವಾಗತಿಸಬೇಕಲ್ಲವೆ!ನಮ್ಮನ್ನು ಟೀಕಿಸುವವರು ಇದ್ದಾರೆ ಎಂದರೆ ನಾವು ಪ್ರಗತಿಯ ಹಾದಿಯಲ್ಲಿದ್ದೇವೆ ಎಂದರ್ಥವಲ್ಲವೇ!ನಮ್ಮ ಬುದ್ಧಿ ಹಾಗೂ ಹೃದಯವನ್ನು ಮುಕ್ತವಾಗಿಟ್ಟುಕೊಂಡರೆ ಟೀಕೆಗಳಿಂದ ಅಪಾರ ಲಾಭ ಪಡೆಯಬಹುದಲ್ಲವೆ!ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ, ನಮ್ಮನ್ನು ವಿಮರ್ಶಿಸುವ ಜನರನ್ನು ಸ್ವಾಗತಿಸಬೇಕಲ್ಲವೆ!ಹಂದಿಯು ಊರನ್ನು ಸ್ವಚ್ಚಗೊಳಿಸಿದರೆ, ನಿಂದಕರು ನಮ್ಮನ್ನು ಪರಿಶುದ್ಧರನ್ನಾಗಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾರೆ..!‘ಅನಂತದೆಡೆಗೆ...’ ಬದುಕಿನ ಬಗ್ಗೆ ಇಂತಹ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು ‘ಪೆಪ್ಪರ್ಮೆಂಟ್’ ಚಪ್ಪರಿಸುವ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು...
Add to Cartಹುಲಿ ಪತ್ರಿಕೆ ೧, ೨ಆಹುತಿ ಕಳ್ಬೆಟ್ಟದ ದರೋಡೆಕೋರರುಜೋಡ್ಪಾಲ ನೀನು ನಿನ್ನೊಳಗೆ ಖೈದಿ..
Add to Cartಈ ಸಂಕಲನದಲ್ಲಿ 19 ಕಥೆಗಳಿವೆ. ಕಥೆಗಳು ಬಹುತೇಕ ನಮ್ಮೊಳಗಿನ ಪಡಿಪಾಟಿಲಿನ ದಿವ್ಯ ರೂಪವೆಂದರೆ ಅಡ್ಡಿಯೇನಿಲ್ಲ. ಇಲ್ಲಿನ 'ಕಾಸು', 'ಅನ್ನದ ಋಣ', 'ಋಣಭಾರ' , 'ಸಂಧ್ಯಾರಾಗ', 'ಹುಣ್ಣಿಮೆಯ ನಗು', 'ಸಾಹುಕಾರ', 'ಕುರುಡು ಕಾಂಚಾಣ' ಕಥೆಗಳು ಮಾನವೀಯ ಸಂಬಂಧಗಳನ್ನು ಥಳುಕು ಹಾಕಿಕೊಂಡೇ ಸಾಗುತ್ತವೆ. ಒಂದೊಂದು ಕಥೆಗಳೊಳಗೂ ಅಂತದ್ದೊಂದು ಮೌನದ ಆಕ್ರಂದನಗಳು ಅನ್ನದ ಮುಂದೆ ಇನ್ನಿಲ್ಲ ಎನ್ನುವಂತೆ ಇದ್ದು ಬಿಡುತ್ತವೆ...
Add to Cartಈ ಕಾದಂಬರಿಯ ಪಾತ್ರಗಳು ತಮ್ಮ ತಮ್ಮ ಜೀವನವನ್ನು ಹುಡುಕಿಕೊಳ್ಳುವ ಪರಿಕ್ರಮದಲ್ಲಿ ‘ಗೃಹಭಂಗ’ದ ವಿಶ್ವನಾಥನ ಜೀವನವು ಓದುಗರಿಗೆ ಸ್ಪುಟವಾಗುತ್ತಾ ಹೋಗುತ್ತದೆ. ಅಲೆಮಾರಿಯಾಗಿ, ಹೋಟೆಲು ಕೆಲಸಗಾರನಾಗಿ, ಜಟಕಾ ಹೊಡೆಯುವವನಾಗಿ, ಪ್ರಿಯಕರನಾಗಿ, ಇನ್ನೂ ಹಲವು ರೀತಿಯಲ್ಲಿ ಅವನು ಸಾಗಿದ ದಾರಿಯಿಂದ ವಿವಿಧ ಪಾತ್ರಗಳು ಆಕರ್ಷಿತರಾಗುತ್ತಾರೆ; ತಮ್ಮನ್ನು ಅವನೊಡನೆ ಹೋಲಿಸಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಯಾರಿಗೂ ಅವನ ಜೀವನದ ಸಮಗ್ರ ಚಿತ್ರ ಕಾಣುವುದಿಲ್ಲ. ಈ ಕಾದಂಬರಿಯಲ್ಲಿ ಭೈರಪ್ಪನವರು ಸಾಧಿಸಿರುವ ತಂತ್ರಕೌಶಲ, ಜೀವನಗ್ರಹಿಕೆ ಬುದ್ಧಿಭಾವ, ಇಂದ್ರಿಯಾತ್ಮಕ ಚಿತ್ರಗಳ ಸಮರಸ ಹದವು ಕನ್ನಡ ಕಾದಂಬರೀಲೇಖನದಲ್ಲಿ ಒಂದು ಮುಖ್ಯ ಹಂತವಾಗಿ ನಿಂತಿದೆ...
Add to Cartಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಗಳಿಸಿದ್ದಾರೆ...
Add to Cartಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...
Add to Cartಪ್ರಕಾಶಕರು : ಸಾಹಿತ್ಯ ಭಂಡಾರ ಪುಸ್ತಕದ ಪ್ರಿ-ಆರ್ಡರ್, ಸೋಮವಾರ ೨೮-೦೧-೨೦೨೦ರ ನಂತರ ಕೈ ತಲುಪಲಿದೆ..
Add to Cart"ಏಕಕಾಲಕ್ಕೆ ಐವರು ಪ್ರೇಯಸಿಯರು ಇರಬೇಕು ಅಂತ ಆಸೆಪಟ್ಟೆ. ಒಬ್ಬಳು ಕೈ ಕೊಟ್ಟರೆ ಸಮಾಧಾನಿಸಲು ಮತ್ತೊಬ್ಬಳಾದರೂ ಇರುತ್ತಾಳೆ ಅನ್ನುವುದು ನನ್ನ ಲೆಕ್ಕಾಚಾರ ಆಗಿತ್ತು.ಇಂಥದ್ದೊಂದು ಇಮೋಷನಲ್ ಇನ್ಶೂರೆನ್ಸ್ ಪಾಲಿಸಿ ಇಲ್ಲದೇ ಬದುಕುವುದಾದರೂ ಹೇಗೆ?ಹಾಗಂತ ಬರೆದುಕೊಂಡ ಅಮೆರಿಕನ್ ನಟ ಮರ್ಲನ್ ಬ್ರಾಂಡೋನನ್ನು ಒಂದು ಮಧ್ಯಾಹ್ನ ನನಗೆ ಪರಿಚಯ ಮಾಡಿಕೊಟ್ಟವರು ಪಿ. ಲಂಕೇಶ್. ಆಮೇಲೆ ಅವನ ಜೀವನಚರಿತ್ರೆ ಓದಿದೆ. ಅವನು ಮುಟ್ಟಿದರೆ ಕರಗಿಹೋಗುವ ಮಂಜಿನ ಹನಿಯಂತಿದ್ದ. ಯಾವ ಹೆಣ್ಣನ್ನೂ ನಂಬುತ್ತಿರಲಿಲ್ಲ. ಅವರನ್ನು ದ್ವೇಷಿಸುತ್ತಲೇ ಪ್ರೀತಿಸುವಂತೆ ನಟಿಸುತ್ತಿದ್ದ. ನಟನೆಯೆಂಬುದು ಮತ್ತೊಬ್ಬರನ್ನು ನಂಬಿಸಲು ಹೆಣಗಾಡುವ ಮನುಷ್ಯನಿಗೆ ಸಿಕ್ಕ ಶಾಪ. ನಾವೆಷ್ಟೇ ಚೆನ್ನಾಗಿ ನಟಿಸಿದರೂ ಯಾರಲ್ಲೂ ನಂಬಿಕೆ ಹುಟ್ಟಿಸಲಾರೆವು. ಸಹಜ ಪ್ರತಿಕ್ರಿಯೆಗಳುನಟನೆಯಂತೆಯೂ ನಟನೆ ಸಹಜವಾಗಿಯೂ ಕಾಣುವ ಸನ್ನಿವೇಶದಲ್ಲಿ ಚಿರಂಜೀವಿಯಾದ ಅಶ್ವತ್ಥಾಮ ಸತ್ತ ಅನ್ನುವ ಸುದ್ದಿಯನ್ನು ದ್ರೋಣ ನಂಬುವುದು ಎಂಥ ದುರಂತ. ಪ್ರೀತಿಯೂ ಅಂಥದ್ದೇ. ಅದು ಸಾಯಿಸುತ್ತದೆ ಅಂತ ಗೊತ್ತಿದ್ದರೂ ನಮ್ಮ ಜೀವ ಕೊಟ್ಟು ಅದನ್ನು ಬದುಕಿಸುತ್ತಲೇ ಇರುತ್ತೇವೆ. ಈ ಕಾದಂಬರಿಯಲ್ಲಿ ಅಶ್ವತ್ಥಾಮ ಪ್ರೀತಿಗಾಗಿ ಹಂಬಲಿಸಿ ಸೋತ ಕ್ಷಣಗಳಿವೆ."..
Add to Cartಶುಕ್ರಾಚಾರ್ಯರ ಕುರಿತಾದ ಕನ್ನಡದ ಮೊದಲ ಪೌರಾಣಿಕ ಕಾದಂಬರಿ ಪ್ರಕಾಶಕರು : ಸಾಹಿತ್ಯ ಭಂಡಾರ..
Add to Cartಆಯತನ, ಒಳಗನ್ನಡಿ, ಗಗನಗೋಚರೀ ವಸುಂಧರಾ ,ಮೂರ್ಖನ ಮಾತುಗಳ : ಹತ್ತು ನಾಕು ಮೆಟ್ಟಿಲು, ಮೂರ್ಖನ ಮಾತುಗಳು - ದೇವ, ದೇಶ, ದೇಹ,ತಿರುಳು, ತೃಣಮಾತ್ರ, ಏಳು..
Sold outಪ್ರತಿಯೊಬ್ಬರೂ ಚಿನ್ನದ ಗಣಿಯೇ. ಆತ್ಮವಿಶ್ವಾಸ ಪ್ರೇರೇಪಣೆ. ಉತ್ತೇಜನಗಳ ಕೊರತೆಯಿಂದಾಗಿ ಅನೇಕರು ಕೀಳರಿಮೆಯಿಂದ ನರಳುತ್ತ ತಮ್ಮ ಸಾಮರ್ಥ್ಯವನ್ನು ಅರಿಯದೇ ಹೋಗುತ್ತಾರೆ. ಭಾವನೆಗಳನ್ನು, ಸಂಬಂಧಗಳನ್ನು ನಿರ್ವಹಿಸಿಕೊಳ್ಳಲು ಬರಗೆ ಪರದಾಡುತ್ತಾರೆ. ಟೀಕೆಗಳನ್ನು ಮತ್ತು ನಿರಾಶೆಗಳನ್ನು ಎದುರಿಸಲಾರದೆ ಖಿನ್ನರಾಗುತ್ತಾರೆ. ಇವೆಲ್ಲವೂ ಅನೇಕರನ್ನು ಸಾಧಕರಾಗುವ ದಾರಿ ತಪ್ಪಿಸಿ ಸಮಸ್ಯೆಗಳ ದಾರಿಯಲ್ಲಿ ಕರೆದೊಯ್ಯುತ್ತವೆ. ನಮ್ಮ ಕನಸುಗಳು, ನಮ್ಮಲ್ಲಿ ಹುದುಗಿರುವ ಕೌಶಲ್ಯ, ಸಾಮರ್ಥ್ಯಗಳು ನಮ್ಮ ಅಮೂಲ್ಯ ಆಸ್ತಿ. ಸೃಜನಶೀಲತೆ ನಮ್ಮ ಶಕ್ತಿ. ಇವುಗಳನ್ನು ಬಳಸಿಕೊಂಡರೆ ಸಾಧನೆ ಮಾಡುವುದು ಸಾಧ್ಯ. ಸಾಧಕರಾಗಲು ಅಡ್ಡಿ ಬರುವುದನ್ನು ನಿವಾರಿಸಿಕೊಂಡು, ಇರುವುದನ್ನು ಬಳಸಿಕೊಂಡು, ಅವಕಾಶಗಳನ್ನು ಕಲ್ಪಿಸಿಕೊಂಡು, ಛಲದಿಂದ ಮುನ್ನಡೆದರೆ ಯಾರು ಬೇಕಾದರೂ ಸಾಧಕರಾಗಬಹುದು.ಇದಕ್ಕೆ ಸೂಕ್ತ ಉಪಾಯಗಳು, ಸಲಹೆಗಳು ನಿಮಗೆ ಈ ಪುಸ್ತಕದಲ್ಲಿ ಲಭ್ಯ. ನೈಜ ದೃಷ್ಟಾಂತಗಳೊಂದಿಗೆ ಉತ್ತೇಜನ ನೀಡಬಲ್ಲ, ಸುಲಭವಾಗಿ ಓದುವಷ್ಟು ಚಿಕ್ಕದಾದ, ಅಧ್ಯಾಯಗಳು ಇದರಲ್ಲಿ ಇವೆ. ಮೊದಲಿನಿಂದ ಕೊನೆಯವರೆಗೂ ಓದಲೇಬೇಕು ಎಂಬ ನಿಯಮವಿಲ್ಲದೆ ಬೇಕಾದಾಗ ಬೇಕೆನಿಸಿದ ವಿಷಯವನ್ನು ಆರಿಸಿಕೊಂಡು ಓದಲು ನೆರವಾಗುವ ರೀತಿಯಲ್ಲಿ ಅಧ್ಯಾಯಗಳು ವರ್ಗೀಕರಿಸಲ್ಪಟ್ಟಿವೆ. ನಿಮ್ಮೊಳಗಿರುವ ಚಿನ್ನದ ಗಣಿಯನ್ನು ಹೊರತಂದು ನೆಮ್ಮದಿಯ ಜೀವನ ನಡೆಸಲು ಈ ಪುಸ್ತಕ ಖಂಡಿತ ನೆರವು ನೀಡಬಲ್ಲದು...
Add to Cartಕನ್ನಡ ಪುಸ್ತಕ ಲೋಕದಲ್ಲಿ ಓದಲು ಸಿಗುವ ವಿಷಯಗಳು ಹಲವಾರು. ಆದರೆ ಭಾರತದ ಮಟ್ಟಿಗೆ ಎಂದೂ ಮರೆಯಲಾಗದ, ಯಾವತ್ತೂ ಕಡೆಗಣಿಸಲಾಗದ ಸ್ವಾತಂತ್ರ್ಯ ಹೋರಾಟ ಮತ್ತು ದೇಶ ವಿಭಜನೆಯ ವಿಚಾರದ ರಾಜಕೀಯ ಆಯಾಮಗಳು ಇದುವರೆಗೂ ಪ್ರಕಟವಾಗಿಲ್ಲ ಮತ್ತು ಚರ್ಚೆಯೂ ಆಗದ ವಿಚಾರವಾಗಿದೆ. ಈ ಕುರಿತು ವಸ್ತುನಿಷ್ಟ ಬರಹವೊಂದರ ಅಗತ್ಯ ಮನಗಂಡು ಕನ್ನಡದ ಓದುಗರಿಗೆ ಅದನ್ನು ತಲುಪಿಸುವ ಜವಾಬ್ದಾರಿಯೊಂದಿಗೆ ಪ್ರಕಟಗೊಂಡಿರುವ ಪುಸ್ತಕ 'ಆಗಸ್ಟ್ - ಮಾಸದ ರಾಜಕೀಯ ಕಥನ'. ಇದು ದೇಶ ವಿದೇಶಗಳಿಂದ ಪುಸ್ತಕಗಳನ್ನು ತರಿಸಿ, ಮಾಹಿತಿಗಳನ್ನು ಕಲೆ ಹಾಕಿ ಸ್ಪಷ್ಟ ವಿಚಾರಗಳೊಂದಿಗೆ ಬರೆದ ಪುಸ್ತಕವಾಗಿದ್ದು ಸ್ವಾತಂತ್ರ್ಯ ಮತ್ತು ದೇಶ ವಿಭಜನೆಯ ಸಂದರ್ಭದ ರಾಜಕೀಯವನ್ನು ಬಹಳ ಆಪ್ತವಾಗಿ ಕಟ್ಟಿಕೊಡಲಾಗಿದೆ...
Add to Cartಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...
Add to Cartಇದು ಭೈರಪ್ಪನವರ ಎರಡನೆಯ ಐತಿಹಾಸಿಕ ಕಾದಂಬರಿ . ಎಂಟನೆಯ ಶತಮಾನದ ಸಂಧಿಕಾಲದ ಅಂತಸ್ಸತ್ತ್ವವನ್ನು ‘ಸಾರ್ಥ’ದಲ್ಲಿ ಕಾದಂಬರಿಯ ರೂಪದಲ್ಲಿ ಆವಿಷ್ಕರಿಸಿದ್ದಾರೆ. ’ಆವರಣ’ ದಲ್ಲಿ ‘ಸಾರ್ಥ’ ದ ಕಾಲದ ಆನಂತರದ ಸತ್ಯವನ್ನು ಚಿತ್ರಿಸುವ ಪ್ರಯತ್ನಮಾಡಿದ್ದಾರೆ….. ಸಂವಹನ ಪ್ರಕ್ರಿಯೆಯಲ್ಲಿ ಹುಟ್ಟುವ ಸಮಸ್ಯೆಗಳನ್ನು ಪರಿಹರಿಕೊಳ್ಳುವ ವಿಧಾನಗಳನ್ನು ತಂತ್ರವೆಂದು ಕರೆಯಬಹುದು. ಇತಿಹಾಸ ಮತ್ತು ಇತಿಹಾಸಕಾರ ಇಬ್ಬರನ್ನೂ ‘ ಆವರಣ ‘ವು ಒಳಗೊಳ್ಳುತ್ತದೆ...
Add to Cartಇದು ಭೈರಪ್ಪನವರ ಎರಡನೆಯ ಐತಿಹಾಸಿಕ ಕಾದಂಬರಿ . ಎಂಟನೆಯ ಶತಮಾನದ ಸಂಧಿಕಾಲದ ಅಂತಸ್ಸತ್ತ್ವವನ್ನು ‘ಸಾರ್ಥ’ದಲ್ಲಿ ಕಾದಂಬರಿಯ ರೂಪದಲ್ಲಿ ಆವಿಷ್ಕರಿಸಿದ್ದಾರೆ. ’ಆವರಣ’ ದಲ್ಲಿ ‘ಸಾರ್ಥ’ ದ ಕಾಲದ ಆನಂತರದ ಸತ್ಯವನ್ನು ಚಿತ್ರಿಸುವ ಪ್ರಯತ್ನಮಾಡಿದ್ದಾರೆ….. ಸಂವಹನ ಪ್ರಕ್ರಿಯೆಯಲ್ಲಿ ಹುಟ್ಟುವ ಸಮಸ್ಯೆಗಳನ್ನು ಪರಿಹರಿಕೊಳ್ಳುವ ವಿಧಾನಗಳನ್ನು ತಂತ್ರವೆಂದು ಕರೆಯಬಹುದು. ಇತಿಹಾಸ ಮತ್ತು ಇತಿಹಾಸಕಾರ ಇಬ್ಬರನ್ನೂ ‘ ಆವರಣ ‘ವು ಒಳಗೊಳ್ಳುತ್ತದೆ...
Add to Cartಶ್ರೀಮತಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಡಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರರಾಗಿ ಪರಿಚಿತರು. ಇವರ ‘ಬದುಕು ಬದಲಿಸಬಹುದು ಭಾಗ ೧,೨,೩‘, ‘ಪೆರುವಿನ ಪವಿತ್ರ ಕಣಿವೆಯಲ್ಲಿ‘, ‘ಯಾದ್ ವಶೇಮ್‘, ‘ದುಡಿವ ಹಾದಿಯಲಿ ಜೊತೆಯಾಗಿ‘, ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು‘, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು‘ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ...
Add to Cartಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...
Add to Cartನಲವತ್ತು ವರ್ಷಗಳ ಹಿಂದೆ ‘ಪರ್ವ’ದಲ್ಲಿ ದ್ರೌಪದಿ, ಕುಂತಿ, ಗಾಂಧಾರಿಯರನ್ನು ಚಿತ್ರಿಸಿದ ಭೈರಪ್ಪನವರು ಇಲ್ಲಿ ರಾಮಕಥೆ ಯನ್ನು ಸೀತೆಯ ಅನುಭವ ಮತ್ತು ಚಿಂತನೆಯ ಮೂಲಕ ಮೂಡಿಸಿದ್ದಾರೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಸೀತಾ ಪರಿತ್ಯಾಗವು ಉತ್ತರ ಕಾಂಡದಲ್ಲಿ ಬರುತ್ತದೆ.‘ಜೋಡಿ ಹಕ್ಕಿಗಳಲ್ಲಿ ಬೇಡನು ಒಂದನ್ನು ಹೊಡೆದು ಅಗಲಿಸಿದ ನೋವಿನ ಭಾವವನ್ನು ವ್ಯಕ್ತಪಡಿಸಲು ನಾನು ರಾಮ ಸೀತೆಯರ ಜೀವನವನ್ನು ಬಳಸಿಕೊಂಡೆ. ಇದನ್ನಾದರೂ ಸುಖಾಂತ್ಯ ಮಾಡಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕವಿಯು ಏನನ್ನು ತಾನೆ ಬದಲಿಸಬಲ್ಲ? ಎಂಬ ವೈಫಲ್ಯ ಬಾಧಿಸುತ್ತಿದೆ,’ ಎಂದು ವಾಲ್ಮೀಕಿಮಹರ್ಷಿಗಳು ಶೋಕದಲ್ಲಿ ಮುಳುಗುತ್ತಾರೆ...
Add to Cartನಲವತ್ತು ವರ್ಷಗಳ ಹಿಂದೆ ‘ಪರ್ವ’ದಲ್ಲಿ ದ್ರೌಪದಿ, ಕುಂತಿ, ಗಾಂಧಾರಿಯರನ್ನು ಚಿತ್ರಿಸಿದ ಭೈರಪ್ಪನವರು ಇಲ್ಲಿ ರಾಮಕಥೆ ಯನ್ನು ಸೀತೆಯ ಅನುಭವ ಮತ್ತು ಚಿಂತನೆಯ ಮೂಲಕ ಮೂಡಿಸಿದ್ದಾರೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಸೀತಾ ಪರಿತ್ಯಾಗವು ಉತ್ತರ ಕಾಂಡದಲ್ಲಿ ಬರುತ್ತದೆ.‘ಜೋಡಿ ಹಕ್ಕಿಗಳಲ್ಲಿ ಬೇಡನು ಒಂದನ್ನು ಹೊಡೆದು ಅಗಲಿಸಿದ ನೋವಿನ ಭಾವವನ್ನು ವ್ಯಕ್ತಪಡಿಸಲು ನಾನು ರಾಮ ಸೀತೆಯರ ಜೀವನವನ್ನು ಬಳಸಿಕೊಂಡೆ. ಇದನ್ನಾದರೂ ಸುಖಾಂತ್ಯ ಮಾಡಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕವಿಯು ಏನನ್ನು ತಾನೆ ಬದಲಿಸಬಲ್ಲ? ಎಂಬ ವೈಫಲ್ಯ ಬಾಧಿಸುತ್ತಿದೆ,’ ಎಂದು ವಾಲ್ಮೀಕಿಮಹರ್ಷಿಗಳು ಶೋಕದಲ್ಲಿ ಮುಳುಗುತ್ತಾರೆ...
Add to Cartಭಾರತದ ಕೆಲವು ರಾಜ್ಯಗಳಲ್ಲಿನ ಸಾಮಾಜಿಕ ಅಭಿವೃದ್ದಿ ಉಳಿದ ರಾಜ್ಯಗಳಿಗಿಂತ ಏಕೆ ಅಷ್ಟೊಂದು ಹೆಚ್ಚಿದೆ? ಈ ಅಂತರಕ್ಕೆ ಒಂದು ರಾಜ್ಯದ ಅಸ್ಮಿತೆ ಅಥವಾ ಅಲ್ಲಿನ ಪ್ರಜೆಗಳು ಒಟ್ಟಾರೆಯಾಗಿ ಹಂಚಿಕೊಂಡಿರುವ ’ನಮ್ಮತನ’ದ ಭಾವನೆಯ ಪ್ರಮಾಣದಲ್ಲಿ ವ್ಯತ್ಯಾಸವೇ ಕಾರಣ ಅನ್ನುತ್ತಾರೆ ಪ್ರೇರಣಾ ಸಿಂಗ್. ಉಪರಾಷ್ಟ್ರೀಯತೆಯ ರಾಜಕೀಯ ಹಾಗೂ ಸಾಮುದಾಯಿಕ ಭಾವನೆಯು ತುಂಬಾ ಬಲವಾಗಿರುವ ರಾಜ್ಯಗಳಲ್ಲಿ ಪ್ರಜೆಗಳು ವೈಯಕ್ತಿಕ ಕ್ಷೇಮಕ್ಕಿಂತ ಸಾಮೂಹಿಕ ಒಳಿತಿಗೆ ಆದ್ಯತೆ ನೀಡುತ್ತಾರೆ ಮತ್ತು ಪ್ರಗತಿಪರ ಸಾಮಾಜಿಕ ನೀತಿಗಳನ್ನು ಬೆಂಬಲಿಸುತ್ತಾರೆ. ಹಾಗಾಗಿ, ಅಂತಹ ರಾಜ್ಯಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಗಣನೀಯವಾಗಿ ಸುಧಾರಣೆಗೊಂಡಿವೆ. ಉದಾಹರಣೆಗೆ ಕೇರಳ ಮತ್ತು ತಮಿಳುನಾಡನ್ನು ಗಮನಿಸಬಹುದು. ಆದರೆ ಉಪರಾಷ್ಟ್ರೀಯತೆಯ ಐಕ್ಯತೆಯ ಭಾವನೆ ಬಲವಾಗಿಲ್ಲದ ರಾಜ್ಯಗಳಲ್ಲಿ ಸುಧಾರಣೆಯನ್ನು ಉದ್ದೀಪಿಸುವ ಸಮಾನ ಅಂಶವಿರುವುದಿಲ್ಲ. ಈ ಕಾರಣದಿಂದ, ಅಂತಹ ರಾಜ್ಯಗಳಲ್ಲಿ ಸಾರ್ವಜನಿಕ ನೀತಿಗಳು ನಿರೀಕ್ಷಿತ ಫಲ ನೀಡಿಲ್ಲ. ಈ ಪರಿಸ್ಥಿತಿ ಉತ್ತರಪ್ರದೇಶ ಮತ್ತು ರಾಜಸ್ತಾನದಲ್ಲಿ ೧೯೯೦ರವರೆಗೂ, ಬಿಹಾರದಲ್ಲಿ ೨೦೦೦ ಇಸವಿಯ ಮಧ್ಯಭಾಗದವರೆಗೂ ಇದ್ದಿತ್ತೆಂಬುದನ್ನು ನಾವು ಗಮನಿಸಬಹುದು. ಇದೊಂದು, ಹೊಸ ಮತ್ತು ಬಹಳ ಮುಖ್ಯವಾದ ವಾದ. ಇದನ್ನು ಸಮರ್ಥಿಸುವಂತಹ ಅನೇಕಾನೇಕ ಪರಿಮಾಣಾತ್ಮಕ ಹಾಗೂ ಗುಣಾತ್ಮಕ ಪುರಾವೆಗಳು ಲಭ್ಯವಿವೆ. ಈ ಕೃತಿಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಮಾಜ ಕಲ್ಯಾಣದ ಮೂಲವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಲಿದ್ದು, ಉಪರಾಷ್ಟ್ರೀಯತೆಯಂತಹ ಸಾಮುದಾಯಿಕ ಪ್ರಜ್ಞೆಯು ರಾಜ್ಯದ ಬೆಳವಣಿಗೆಗೆ ಮಾರಕ ಎಂದು ಕಾಣುವ ಪ್ರವೃತ್ತಿಗೆ ಒಂದು ಸ್ವಾಗತಾರ್ಹ ಪ್ರತ್ಯುತ್ತರವಾಗಿದೆ...
Add to Cart‘ಋಣ’ ಕಾದಂಬರಿ ಈಗಾಗಲೇ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬೇರೆ ಬೇರೆ ಹೆಸರಿನಲ್ಲಿ ಪ್ರಕಟಗೊಂಡು ಅತ್ಯಂತ ಜನಪ್ರಿಯ ಶಬ್ದವಾಗಿದೆ. ಸದ್ಯದ ಆಧುನಿಕ ಪರಿಸ್ಥಿತಿಯಲ್ಲಿ ‘ಋಣ’ ಎನ್ನುವುದು ಮರೆತುಹೋದ ಶಬ್ದವಾಗಬಹುದು. ಆದರೆ ಸಹೃದಯರಲ್ಲಿ ಋಣ ಅತ್ಯಂತ ಅವಶ್ಯವಾದ ಜೀವನಾಡಿಯಾಗಿದೆ. ಮಹಾನ್ ವ್ಯಕ್ತಿಯಾದ ಸಿದ್ಧಾರ್ಥ ಗೌತಮ ಬೋಧಿವೃಕ್ಷದ ಕೆಳಗೆ ಕುಳಿತು ಬುದ್ಧನಾದ ಮೇಲೆ ಮೊದಲು ತನಗೆ ಜ್ಞಾನವನ್ನು ಕರುಣಿಸಿದ ವೃಕ್ಷಕ್ಕೆ ಕೃತಜ್ಞತೆಯನ್ನು ಅರ್ಪಿಸಿ ‘ಋಣ’ ಸಂದಾಯವನ್ನು ಮಾಡಿದನಂತೆ. ಋಣದ ಭಾವವಿಲ್ಲದ ಜೀವನ ಕೇವಲ ಕಾಗದದ ಹೂವಿನಂತೆ...
Add to Cartಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...
Add to Cartಪ್ರಕಾಶಕರು : ಪ್ರಜೋದಯ ಪ್ರಕಾಶನಕನ್ನಡಪ್ರಭ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುವ ಕಾವೇರಿ ಎಸ್ ಎಸ್ ಅವರ ಲೇಖನಗಳ ಸಂಗ್ರಹ 'ಒಡಲ ಖಾಲಿ ಪುಟ'...
Add to Cartತದ್ರೂಪಿ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದ್ದ ವಿಜ್ಞಾನಿಯೊಬ್ಬನು ತನ್ನ ಹಾಗೇ ಇರುವ ಒಂದು ಡಜನ್ ತದ್ರೂಪಿಗಳನ್ನು ಸೃಷ್ಠಿಮಾಡಿ, ಸಾವನ್ನು ಗೆಲ್ಲುವೆನೆಂಬ ಅಹಂಕಾರದಿಂದ ಬೀಗುತ್ತಿದ್ದನು. ವಿಜ್ಞಾನಿಯ ಅಂತ್ಯಕಾಲ ಸಮೀಪಿಸಿದಾಗ, ಅವನ ಜೀವನವನ್ನು ಕೊಂಡೊಯ್ಯಲು ಸ್ವಯಂ ಯಮಧರ್ಮನೇ ಬಂದಾಗ, ಅಲ್ಲಿ 13 ಜನರಿದ್ದರು. ಅವರಲ್ಲಿ ನಿಜವಾದ ವಿಜ್ಞಾನಿ ಯಾರು ಎಂದು ತಿಳಿಯದೆ ಯಮನು ಗೊಂದಲದಲ್ಲಿ ಬಿದ್ದನು. ಮನುಷ್ಯರ ಸ್ವಭಾಅವನ್ನು ಚೆನ್ನಾಗಿ ತಿಳಿದಿದ್ದ ಯಮಧರ್ಮನು ನಸುನಗುತ್ತಾ 13 ವಿಜ್ಞಾನಿಗಳ ಕಡೆಗೆ ಬಂದನು. ಎಲ್ಲರ ಕಡೆಯೂ ನೋಡುತ್ತಾ “ಹುಂ! ಅದ್ಭುತ ತದ್ರೂಪಿ ತಂತ್ರಜ್ಞಾನ! ಅಭಿನಂದನೆಗಳು!! ಆದರೆ ಮನುಷ್ಯ ಎಂದಿಗೂ ಬ್ರಹ್ಮನಾಗಲಾರ. ಈ ತದ್ರೂಪಿ ಸೃಷ್ಠಿಯಲ್ಲಿ ಒಂದೇ ಒಂದು ಸಣ್ಣ ದೋಷವಿದೆ. ಜನಸಾಮಾನ್ಯರ ಕಣ್ಣಿಗೆ ಕಾಣದಂತಹ ದೋಷ. ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದನು.“ಸಾಧ್ಯವೇ ಇಲ್ಲ. ನಾನು ನೂರಕ್ಕೆ ನೂರರಷ್ಟು ನಿಖರವಾಗಿರುವ ತದ್ರೂಪಿಗಳನ್ನು ರೂಪಿಸಿದ್ದೇನೆ” ಎಂದು ವಿಜ್ಞಾನಿಯು ಎದ್ದು ನುಡಿಯುತ್ತಿರುವಂತೆಯೇ ಯಮಧರ್ಮನು ಅವನ ಕೊರಳಿಗೆ ಉರುಳನ್ನು ಬೀಸಿ “ಇದುವೇ ನಾನು ಹೇಳಿದ ಆ ಕೊರತೆ!...” ಎಂದೆನ್ನುತ್ತಾ ವಿಜ್ಞಾನಿಯನ್ನು ಕರೆದುಕೊಂಡು ಹೊರಟೇಬಿಟ್ಟನುಏನಿದು ಈ ಅಹಂಕಾರ!? ನನಗೇಗೆ ಅಹಂಕಾರ ಬರುತ್ತದೆ?ವಿಶ್ವಾಸವು, ಯಾವಾಗ ಅಂಧ ವಿಶ್ವಾಸವಾಗಿ, ಅಹಂಕಾರಕ್ಕೆ ಎಡೆಕೊಡುತ್ತದೆ?ಪ್ರಕೃತಿ ಮಾತ್ರ ಪರಿಪೂರ್ಣ. ಮನುಷ್ಯನು ಸದಾ ಕಾಲಕ್ಕೂ ಅಪೂರ್ಣನಲ್ಲವೆ!?ಅಹಂಕಾರವು ಆತ್ಮವಿನಾಶಕ್ಕೆ ಕಾರಣವಾಗುವುದನ್ನು ನಾನೇಕೆ ತಿಳಿಯುವುದಿಲ್ಲ?ಮನುಷ್ಯನು ತನ್ನ ಮೂಲಕಭೂತ ಸ್ವಭಾವಗಳನ್ನು ಎಂದಿಗೆ ಗೆಲ್ಲುತ್ತಾನೆ?‘ಓ...ನನ್ನ ಚೇತನ!...’ ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು ‘ಪೆಪ್ಪರ್ಮೆಂಟ್’ ಚಪ್ಪರಿಸಿದ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು.ಒಬ್ಬ ಸೂಫಿ ಸಂತನು ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದನು. ಆಗ ಕಪಿಯು ಒಂದು ತೆಂಗಿನಕಾಯಿಯನ್ನು ಸೂಫಿ ಸಂತನ ಮೇಲೆ ಎಸೆಯಿತು. ಸಂತನು ತೆಂಗಿನಕಾಯಿಯನ್ನು ತೆಗೆದುಕೊಂಡನು. ಒಳಗಿದ್ದ ನೀರನ್ನು ಕುಡಿದನು. ಕೊಬ್ಬರಿಯನ್ನು ತಿಂದನು. ಕರಟದಿಂದ ಭಿಕ್ಷಾಪಾತ್ರೆಯನ್ನು ರೂಪಿಸಿಕೊಂಡನು. ಟೀಕೆಯನ್ನು ನಾವು ಮುಕ್ತಮನಸ್ಸಿನಿಂದ ಸ್ವಾಗತಿಸಬೇಕಲ್ಲವೆ!ನಮ್ಮನ್ನು ಟೀಕಿಸುವವರು ಇದ್ದಾರೆ ಎಂದರೆ ನಾವು ಪ್ರಗತಿಯ ಹಾದಿಯಲ್ಲಿದ್ದೇವೆ ಎಂದರ್ಥವಲ್ಲವೇ!ನಮ್ಮ ಬುದ್ಧಿ ಹಾಗೂ ಹೃದಯವನ್ನು ಮುಕ್ತವಾಗಿಟ್ಟುಕೊಂಡರೆ ಟೀಕೆಗಳಿಂದ ಅಪಾರ ಲಾಭ ಪಡೆಯಬಹುದಲ್ಲವೆ!ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ, ನಮ್ಮನ್ನು ವಿಮರ್ಶಿಸುವ ಜನರನ್ನು ಸ್ವಾಗತಿಸಬೇಕಲ್ಲವೆ!ಹಂದಿಯು ಊರನ್ನು ಸ್ವಚ್ಚಗೊಳಿಸಿದರೆ, ನಿಂದಕರು ನಮ್ಮನ್ನು ಪರಿಶುದ್ಧರನ್ನಾಗಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾರೆ..!‘ಅನಂತದೆಡೆಗೆ...’ ಬದುಕಿನ ಬಗ್ಗೆ ಇಂತಹ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು ‘ಪೆಪ್ಪರ್ಮೆಂಟ್’ ಚಪ್ಪರಿಸುವ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು.ಒಬ್ಬ ಸೂಫಿ ಸಂತನು ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದನು. ಆಗ ಕಪಿಯು ಒಂದು ತೆಂಗಿನಕಾಯಿಯನ್ನು ಸೂಫಿ ಸಂತನ ಮೇಲೆ ಎಸೆಯಿತು. ಸಂತನು ತೆಂಗಿನಕಾಯಿಯನ್ನು ತೆಗೆದುಕೊಂಡನು. ಒಳಗಿದ್ದ ನೀರನ್ನು ಕುಡಿದನು. ಕೊಬ್ಬರಿಯನ್ನು ತಿಂದನು. ಕರಟದಿಂದ ಭಿಕ್ಷಾಪಾತ್ರೆಯನ್ನು ರೂಪಿಸಿಕೊಂಡನು. ಟೀಕೆಯನ್ನು ನಾವು ಮುಕ್ತಮನಸ್ಸಿನಿಂದ ಸ್ವಾಗತಿಸಬೇಕಲ್ಲವೆ! ನಮ್ಮನ್ನು ಟೀಕಿಸುವವರು ಇದ್ದಾರೆ ಎಂದರೆ ನಾವು ಪ್ರಗತಿಯ ಹಾದಿಯಲ್ಲಿದ್ದೇವೆ ಎಂದರ್ಥವಲ್ಲವೇ! ನಮ್ಮ ಬುದ್ಧಿ ಹಾಗೂ ಹೃದಯವನ್ನು ಮುಕ್ತವಾಗಿಟ್ಟುಕೊಂಡರೆ ಟೀಕೆಗಳಿಂದ ಅಪಾರ ಲಾಭ ಪಡೆಯಬಹುದಲ್ಲವೆ! ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ, ನಮ್ಮನ್ನು ವಿಮರ್ಶಿಸುವ ಜನರನ್ನು ಸ್ವಾಗತಿಸಬೇಕಲ್ಲವೆ! ಹಂದಿಯು ಊರನ್ನು ಸ್ವಚ್ಚಗೊಳಿಸಿದರೆ, ನಿಂದಕರು ನಮ್ಮನ್ನು ಪರಿಶುದ್ಧರನ್ನಾಗಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾರೆ..! ‘ಅನಂತದೆಡೆಗೆ...’ ಬದುಕಿನ ಬಗ್ಗೆ ಇಂತಹ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು ‘ಪೆಪ್ಪರ್ಮೆಂಟ್’ ಚಪ್ಪರಿಸುವ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು...
Add to Cartತದ್ರೂಪಿ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದ್ದ ವಿಜ್ಞಾನಿಯೊಬ್ಬನು ತನ್ನ ಹಾಗೇ ಇರುವ ಒಂದು ಡಜನ್ ತದ್ರೂಪಿಗಳನ್ನು ಸೃಷ್ಠಿಮಾಡಿ, ಸಾವನ್ನು ಗೆಲ್ಲುವೆನೆಂಬ ಅಹಂಕಾರದಿಂದ ಬೀಗುತ್ತಿದ್ದನು. ವಿಜ್ಞಾನಿಯ ಅಂತ್ಯಕಾಲ ಸಮೀಪಿಸಿದಾಗ, ಅವನ ಜೀವನವನ್ನು ಕೊಂಡೊಯ್ಯಲು ಸ್ವಯಂ ಯಮಧರ್ಮನೇ ಬಂದಾಗ, ಅಲ್ಲಿ 13 ಜನರಿದ್ದರು. ಅವರಲ್ಲಿ ನಿಜವಾದ ವಿಜ್ಞಾನಿ ಯಾರು ಎಂದು ತಿಳಿಯದೆ ಯಮನು ಗೊಂದಲದಲ್ಲಿ ಬಿದ್ದನು. ಮನುಷ್ಯರ ಸ್ವಭಾಅವನ್ನು ಚೆನ್ನಾಗಿ ತಿಳಿದಿದ್ದ ಯಮಧರ್ಮನು ನಸುನಗುತ್ತಾ 13 ವಿಜ್ಞಾನಿಗಳ ಕಡೆಗೆ ಬಂದನು. ಎಲ್ಲರ ಕಡೆಯೂ ನೋಡುತ್ತಾ “ಹುಂ! ಅದ್ಭುತ ತದ್ರೂಪಿ ತಂತ್ರಜ್ಞಾನ! ಅಭಿನಂದನೆಗಳು!! ಆದರೆ ಮನುಷ್ಯ ಎಂದಿಗೂ ಬ್ರಹ್ಮನಾಗಲಾರ. ಈ ತದ್ರೂಪಿ ಸೃಷ್ಠಿಯಲ್ಲಿ ಒಂದೇ ಒಂದು ಸಣ್ಣ ದೋಷವಿದೆ. ಜನಸಾಮಾನ್ಯರ ಕಣ್ಣಿಗೆ ಕಾಣದಂತಹ ದೋಷ. ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದನು.“ಸಾಧ್ಯವೇ ಇಲ್ಲ. ನಾನು ನೂರಕ್ಕೆ ನೂರರಷ್ಟು ನಿಖರವಾಗಿರುವ ತದ್ರೂಪಿಗಳನ್ನು ರೂಪಿಸಿದ್ದೇನೆ” ಎಂದು ವಿಜ್ಞಾನಿಯು ಎದ್ದು ನುಡಿಯುತ್ತಿರುವಂತೆಯೇ ಯಮಧರ್ಮನು ಅವನ ಕೊರಳಿಗೆ ಉರುಳನ್ನು ಬೀಸಿ “ಇದುವೇ ನಾನು ಹೇಳಿದ ಆ ಕೊರತೆ!...” ಎಂದೆನ್ನುತ್ತಾ ವಿಜ್ಞಾನಿಯನ್ನು ಕರೆದುಕೊಂಡು ಹೊರಟೇಬಿಟ್ಟನುಏನಿದು ಈ ಅಹಂಕಾರ!? ನನಗೇಗೆ ಅಹಂಕಾರ ಬರುತ್ತದೆ?ವಿಶ್ವಾಸವು, ಯಾವಾಗ ಅಂಧ ವಿಶ್ವಾಸವಾಗಿ, ಅಹಂಕಾರಕ್ಕೆ ಎಡೆಕೊಡುತ್ತದೆ?ಪ್ರಕೃತಿ ಮಾತ್ರ ಪರಿಪೂರ್ಣ. ಮನುಷ್ಯನು ಸದಾ ಕಾಲಕ್ಕೂ ಅಪೂರ್ಣನಲ್ಲವೆ!?ಅಹಂಕಾರವು ಆತ್ಮವಿನಾಶಕ್ಕೆ ಕಾರಣವಾಗುವುದನ್ನು ನಾನೇಕೆ ತಿಳಿಯುವುದಿಲ್ಲ?ಮನುಷ್ಯನು ತನ್ನ ಮೂಲಕಭೂತ ಸ್ವಭಾವಗಳನ್ನು ಎಂದಿಗೆ ಗೆಲ್ಲುತ್ತಾನೆ?‘ಓ...ನನ್ನ ಚೇತನ!...’ ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು ‘ಪೆಪ್ಪರ್ಮೆಂಟ್’ ಚಪ್ಪರಿಸಿದ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು...
Add to Cartಈ ರೀತಿಯ ವಿಮರ್ಶಾ ಮಾರ್ಗ ಕನ್ನಡಕ್ಕೆ ಅಗತ್ಯವಿದೆ. ಒಂದು ಪುಸ್ತಕ ಹೀಗೆಯೇ ಇರಬೇಕು ಎನ್ನುವ ಸ್ಥಾಪಿತ ಸಿದ್ಧಾಂತದ ಮೂಲಕ ನೋಡುವ ವಿಮರ್ಶಾ ಕ್ರಮಕ್ಕಿಂತ ಭಿನ್ನವಾದ ಕ್ರಮವಿದು. ಒಂದು ಪುಸ್ತಕ ಹೇಗಿದೆಯೋ ಹಾಗೆಯೇ ಅದನ್ನು ಸ್ವೀಕರಿಸುವುದು ಇಲ್ಲಿ ಕಾಣಿಸುವ ‘ಓದುಗ ದೃಷ್ಟಿ’. ಆ ಮೂಲಕ ಪುಸ್ತಕ ಹೇಗಿದ್ದರೆ ಓದುಗರ ಅನುಭವದೊಂದಿಗೆ ಒಂದಾಗಿ ಬೆಳೆಯುತ್ತದೆ ಎನ್ನುವುದನ್ನು ಹೇಳುವ ಮೂಲಕ ದೀಪಾ ಅವರು ಲೇಖಕರಿಗೆ ಹೆಚ್ಚು ಸಾಧ್ಯತೆಗಳನ್ನು ತೆರೆದಿಡುತ್ತಾರೆ. ತಾನು ಓದುವ ಲೇಖಕ/ಲೇಖಿಕೆಯರ ಸ್ವಾತಂತ್ರ್ಯವನ್ನು ರಕ್ಷಿಸುವುದರಲ್ಲಿ ದೀಪಾ ಅವರದು ಎತ್ತಿದ ಕೈ. ಆದ್ದರಿಂದ ದೀಪಾ ಅವರ ಬರೆಹಗಳನ್ನು ಸಮಾಜಮುಖಿ ಎನ್ನುವುದಕ್ಕಿಂತ ಜೀವನ್ಮುಖಿ ಎನ್ನುವುದು ನನಗೆ ಪ್ರಿಯವೆನಿಸುತ್ತದೆ. ಸಾಕ್ಷಿ ಬೇಕಾದರೆ ‘ನೆನಪೇ ಸಂಗೀತ’ದ ಬಗ್ಗೆ ಬರೆಯುತ್ತಾ, ‘ದಾಂಪತ್ಯ ಮತ್ತು ಸನ್ಯಾಸ’ ಎರಡೂ ವ್ಯಕ್ತಿ ತನ್ನ ವೈಯಕ್ತಿಕ ಗುರುತನ್ನು ಕಳೆದುಕೊಳ್ಳುವ ಸುಂದರವಾದ ದಾರಿಗಳು” ಎಂಬ ಮಾತನ್ನು ಗಮನಿಸಿ...
Sold outದೀಪಾವಳಿಗೆ ಪಟಾಕಿ ಸಿಡಿಸಬೇಡಿ, ನಾಗರಪಂಚಮಿಯಲ್ಲಿ ಹಾಲೆರೆಯಬೇಡಿ, ದೇವಸ್ಥಾನದಲ್ಲಿ ಚಿನ್ನದ ರಥ ಮಾಡಿಸುವ ಬದಲು ಬಡವರಿಗೆ ಆಸ್ಪತ್ರೆ ಕಟ್ಟಿಸಿ, ಬ್ರಾಹ್ಮಣಶಾಹಿಯನ್ನು ಪ್ರೋತ್ಸಾಹಿಸುವ ಮನುಸ್ಮೃತಿಯನ್ನು ಸುಟ್ಟುಹಾಕಿ ಎಂದೆಲ್ಲ ದಿನಬೆಳಗಾದರೆ ಕರೆ ಕೊಡುವ ಬುದ್ಧಿಜೀವಿಗಳನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಅವರ ವಾದದಲ್ಲಿ ಹುರುಳಿದೆಯೇ, ವಿಚಾರವಾದಿಗಳ ವಿಚಾರದಲ್ಲಿ ಕಾಳೆಷ್ಟು ಜೊಳ್ಳೆಷ್ಟು? ಈ ಪ್ರಗತಿಪರ ಜೀವಪರ ಚಿಂತಕರ ಬಣ್ಣ ಬಯಲುಮಾಡುವುದು ಹೇಗೆ? ಇದನ್ನೆಲ್ಲ ತಿಳಿಯಬೇಕಾದರೆ 'ಓಪನ್ ಚಾಲೆಂಜ್' ಓದಲೇಬೇಕು. ಪ್ರವೀಣ್ ಕುಮಾರ್ ಮಾವಿನಕಾಡು ಅವರ ಶೈಲಿಯೇ ವಿಶಿಷ್ಟ. ಅವರ ಹರಿತ ವ್ಯಂಗ್ಯ, ತರ್ಕಬದ್ಧ ವಿಚಾರಸರಣಿ, ವಾದ ಕಟ್ಟುವ ಶೈಲಿ ಇವನ್ನೆಲ್ಲ ಸವಿಯಬೇಕಾದರೆ 'ಓಪನ್ ಚಾಲೆಂಜ್' ಕೈಗೆತ್ತಿಕೊಳ್ಳಿ...
Add to Cartಪ್ರಕಾಶಕರು : ಕಾನ್ಕೇವ್ ಮೀಡಿಯಾಕತ್ತಲು ಇರುವಾಗ ಕಂದೀಲು ಬೇಕು. ಕಂದೀಲು ಇರುವಲ್ಲಿ ಕತ್ತಲು ಇರುವುದಿಲ್ಲ. ಈ ವಿಪರ್ಯಾಸವನ್ನು ಒಡಲಲ್ಲಿ ಇಟ್ಟುಕೊಂಡು ಹುಟ್ಟಿರುವ ಸೋಮು ರೆಡ್ಡಿಯವರ ಕಾದಂಬರಿ ಒಂದು ಹಳ್ಳಿಯ ಮನಸ್ಸನ್ನು ಬಿಚ್ಚಿಡುತ್ತಾ ಹೋಗುತ್ತದೆ. ಕುಸುಮಳ ಅಂತರಂಗದ ಕಂದೀಲಿನ ಬೆಳಕು, ಜ್ವಾಲೆಯಾಗಿ ಬದಲಾಗುವ ಕ್ಷಣ ನಮ್ಮನ್ನು ಬೆಚ್ಚಿ ಬೀಳಿಸುವ ಹಾಗೆಯೇ, ಆ ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸುವ ಊರು ದಿಗ್ಭ್ರಮೆಗೊಳಿಸುತ್ತದೆ...
Add to Cartಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರ ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹುಟ್ಟಿದ್ದು ನವೆಂಬರ್ ೧೬. ೧೯೬೫. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ, ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರಸ್ತುತ ಪುರವಣಿ ಸಂಪಾದಕರಾಗಿದ್ದಾರೆ...
Add to Cartನೆರೆ ಮನೆಯಲ್ಲಿ, ಬಸ್ಸಿನಲ್ಲಿ, ಬೆಂಗಳೂರಿನ ಜಂಜಾಟದಲ್ಲಿ ಹುಟ್ಟಿದ ಕೆಲವು ಪ್ರಸಂಗಗಳನ್ನಾಧರಿಸಿ ಮೂಡಿದ ಕವನಗಳುಪ್ರಕಾಶಕರು : ಹೆಗ್ಗದ್ದೆ ಪ್ರಕಾಶನ ..
Add to Cartಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...
Add to Cart"ಸರ್ ಬಹಳ ದಿನಗಳಿಂದ ಈ ಪ್ರಶ್ನೆಯನ್ನು ಕೇಳ್ಬೇಕು ಅಂತ ಇದ್ದೆ. ಜೊತೆಗಿದು ನನ್ನ ಪರ್ಸನಲ್ ಪ್ರಶ್ನೆ ಕೂಡ 'ಎಂದು ಸಣ್ಣಗೆ ನಕ್ಕ ಶೀತಲ್ ತನ್ನ ಮಾತನ್ನು ಮುಂದುವರೆಸಿನಿಮ್ಮ ಈ ಹಿಂದಿನ ಪ್ರತಿ ಕಾದಂಬರಿಗಳಲ್ಲಿ ಮಿನಿಮಮ್ ಎಂದರೂ ನಾಲೈದು ಕೊಲೆಗಳಾಗಿರುತ್ತವೆ. ಆ ಕೊಲೆಗಳನ್ನು ನೀವು ಸೃಷ್ಟಿಸಿರುವ ಪಾತ್ರಗಳೇ ಮಾಡುತ್ತಿದ್ದರೂ ಆ ಸನ್ನಿವೇಶವನ್ನು ಸೃಷ್ಟಿಸೋದು ನೀವೇ ಆಗಿರ್ತಿರ, ಸೋ ನಿಮಗೇನಾದ್ರು ಇದುವರೆಗೆ ಯಾರನ್ನಾದರೂ ಕೊಲೆ ಮಾಡಬೇಕೆಂದು ಅನಿಸಿದೆಯಾ?? ಅಕಸ್ಮಾತ್ ಅನಿಸಿದ್ರೆ ಯಾರನ್ನು?? "ಎಂದು TV 10ನ ನಿರೂಪಕಿ ಶೀತಲ್ ಕುತೂಹಲದಿಂದ ತನ್ನೆದುರಿಗಿದ್ದ ಖ್ಯಾತ ಥ್ರಿಲ್ಲರ್ ಕಾದ೦ಬರಿಕಾರ ವಿವೇಕ್ ಚಕ್ರವರ್ತಿ ಯನ್ನು ಕೇಳುತ್ತಿದ್ದಂತೆ;"ನೋಡಿ ಶೀತಲ್ ಹೊರ ಜಗತ್ತಿಗೆ ನಾನು ನಾರ್ಮಲ್ ವ್ಯಕ್ತಿಯ ಹಾಗೆ ಕಾಣಿಸುತ್ತೇನಾದರೂ, ನನಗೂ ಬಹಳಷ್ಟು ಸಲ ಕೊಲೆ ಮಾಡಬೇಕೆಂದು ಅನಿಸಿದೆ. ಅದಕ್ಕಾಗಿ ಪ್ಲಾನ್ ಕೂಡ ಮಾಡಿದ್ದೆ!!"ಎಂದು ತಣ್ಣನೆಯ ದನಿಯಲ್ಲಿ ಉತ್ತರಿಸಿದ. ಎದೆಯಾಳದಲ್ಲಿ ಅಪಾರವಾದ ನೋವಿತ್ತು...
Add to Cart‘ಕರಿಮಾಯಿ’ ಕೇವಲ ತನ್ನ ಕಥನ ಸ್ವರೂಪದಲ್ಲಿ ಆಧುನಿಕ ಓದುಗರನ್ನು ಮೆಚ್ಚಿಸಬಯಸುವ ಕೃತಿಯಲ್ಲ. ಅದು ಅನೇಕ ಮುಖ್ಯ ಸಂಗತಿಗಳನ್ನು ತನ್ನ ಮೈಮೇಲೆ ಹಾಕಿಕೊಂಡಿರುವ ಮಹ್ತ್ವಾಕಾಂಕ್ಷಿ ರಚನೆ. ಹೊಸ ಮೌಲ್ಯಗಳ ಪ್ರವೇಶದಿಂದ ಒಂದು ನಂಬಿಕೆಗಳ ಲೋಕ ಕಂಪಿಸುವ, ಸಮುದಾಯ ಪ್ರಜ್ಞೆ ಆಘಾತಕ್ಕೆ ಒಳಗಾಗುವ, ಹೊಸದೊಂದು ಆರ್ಥಿಕ ಸಾಮಾಜಿಕ ಜೀವನ ಕ್ರಮದ ಮುನ್ಸೂಚನೆ ಕಾಣಿಸುವ ಚಿತ್ರಗಳನ್ನು ಅದು ದಟ್ಟವಾಗಿ ಆದರೆ ತನಗೇ ಅನನ್ಯವೆನ್ನಿಸುವ ಕಾಮಿಕ್ ಧಾಟಿಯಲ್ಲಿ ಕಟ್ಟಿಕೊಡುತ್ತದೆ. ಹಳೆಯ ವ್ಯವಸ್ಥೆ ಅದೆಷ್ಟೇ ಸುಂದರವಾಗಿ ತೋರುತ್ತಿರಲಿ, ಹೊಸ ವ್ಯವಸ್ಥೆ ಎಷ್ಟೇ ಭಯಾನಕವಾಗಿ ಕಾಣಿಸುತ್ತಿರಲಿ ಅಥವಾ ಅದರ ಬಗ್ಗೆ ವಿರೋಧವಿರಲಿ, ಚಲನೆ ಅನಿವಾರ್ಯವೆಂಬ ಸತ್ಯವನ್ನು ಒಂದು ನಿರ್ಣಾಯಕ ಐತಿಹಾಸಿಕ ಸಂದರ್ಭದ ಹಿನ್ನೆಲೆಯಲ್ಲಿ ಕಾದಂಬರಿ ಧ್ವನಿಸುತ್ತದೆ...
Add to Cartಪ್ರಕಾಶಕರು : ಸಾಹಿತ್ಯ ಭಂಡಾರ, Sahitya Bhandaraಕರಿಸಿರಿಯಾನ - ಪುಸ್ತಕ ವಿಮರ್ಶೆ..
Add to Cartಪ್ರತಿ ಸಾಲನ್ನೂ ಅನುಭಾವದ ಕುಂಚದಲ್ಲಿ ಅದ್ದಿ ಚಿತ್ರಿಸಿದಂತಿರುವ ಪರಮ್ ಭಾರದ್ವಾಜ್ ಅವರ ಕಾದಂಬರಿ-ಕರ್ಣ ಕುಂಡಲಧಾರಿಣಿ. ತನ್ನ ವಿನೂತನ ಕತಾ ನಿರೂಪಣೆಯಿಂದ ಓದುಗರನ್ನು ಸೆಳೆಯುತ್ತದೆ. ಕೃತಿಗೆ ಆಶಯ ನುಡಿ ಬರೆದಿರುವ ಚಲನಚಿತ್ರ ನಿರ್ದೇಶಕ ಸುಧೀರ್ ಶಾನುಭಾಗ್ ಅವರು “ಕಥಾ ನಾಯಕ ಕರ್ಣನ ಸೋಲು, ಗೆಲುವು, ಸುಖ, ದುಃಖ, ಕಣ್ಣೀರು, ನಗು ಎಲ್ಲವನ್ನೂ ಗೆಳೆಯನೆಂಬ ಪಾತ್ರದ ಮೂಲಕ ಬಿಂಬಿಸಿರುವ ಈ ಕಥಾನಕ ಗೆಳೆತನದ ಅವಶ್ಯಕತೆಯನ್ನು ಹೇಳುವ ವಿಶಿಷ್ಟ ಬಗೆಯ ನಿರೂಪಣಾ ಶೈಲಿ ಹೊಂದಿರುವ ಕಿರು ಕಾದಂಬರಿ. ಸಾಮಾನ್ಯವಾಗಿ ಸಿನೆಮಾಗಳಲ್ಲಿರುವಂತಹ ಫ್ಲಾಷ್ಬ್ಯಾಕ್ ತಂತ್ರವನ್ನು ಕಥಾ ನಿರೂಪಣೆಯಲ್ಲಿ ಬಳಸಲಾಗಿದೆ. ಈ ತಂತ್ರ ಕಥೆಯನ್ನು ಕುತೂಹಲಕಾರಿಯಾಗಿ ಸಾಗಿಸುವಲ್ಲಿ ಯಶಸ್ವಿಯಾಗಿದೆ” ಎಂದು ಶ್ಲಾಘಿಸಿದ್ದಾರೆ...
Add to Cartನಗರ ಜೀವನದ ಅಭದ್ರ ಭಾವಸ್ಥಿತಿಯಿಂದ ಒಮ್ಮೆಲೆ ತಂದೆಯ ಸಾವಿನ ನಂತರದ ಕಾರ್ಯದಲ್ಲಿ ತೊಡಗುವ ಟೆಕ್ಕಿಯ ಮೂಲಕ ಕಥೆ ಹರಡುಕೊಳ್ಳುತ್ತದೆ. ನಂತರದ ಹದಿನೈದು ದಿನಗಳಲ್ಲಿ ಆತನಲ್ಲಾಗುವ ನಂಬಿಕೆ ಮತ್ತು ಶ್ರದ್ಧೆಯ ನಡುವಿನ ತೊಳಲಾಟ ಮತ್ತು ಸ್ಥಿತ್ಯಂತರದ ಯಾನವೇ ‘ಕರ್ಮ'..
Add to Cartಕರ್ವಾಲೊ ಕಥೆ ಕಗ್ಗಾಡಿನ ಹಳ್ಳಿ ಕೊಂಪೆಯೊಂದರಲ್ಲಿ ನಡೆಯುವ ಘಟನೆ. ಹಳ್ಳಿಯ ಮಂದಣ್ಣ, ಪ್ರಭಾಕರ, ಎಂಗ್ಟ, ಕರಿಯಪ್ಪ ಮುಂತಾದವರೊಡನೆ ಬೆರೆತು ವಿಜ್ಞಾನಿ ಕರ್ವಾಲೋ ಕಾಲಜ್ಞಾನಿಯಾಗಿ ರೂಪುಗೊಳ್ಳುವ ಅಚ್ಚರಿಯ ಕಥೆ! ಧರ್ಮ, ಧ್ಯಾನ, ತಪಸ್ಯೆಗಳಂತೆಯೇ ವಿಜ್ಞಾನವೂ ಸಾಕ್ಷಾತ್ಕಾರದ ದಾರಿ ಎಂದು ಪ್ರತಿಪಾದಿಸುವ ಈ ಕೃತಿ ಕನ್ನಡದ ಎಲ್ಲ ಕಾದಂಬರಿಗಳಿಗಿಂತ ಸಂಪೂರ್ಣ ಭಿನ್ನವಾದ ಕೃತಿ. ಈವರೆಗೆ ಕನ್ನಡದಲ್ಲಿ ಮೂವತ್ತೆರಡು ಮುದ್ರಣಗಳನ್ನು ಕಂಡಿರುವ ಈ ಕಾದಂಬರಿ ಇಂಗ್ಲಿಷ್, ಹಿಂದಿ, ಮರಾಠಿ, ಮಲಯಾಳಂ ಮತ್ತು ಜಪಾನೀ ಭಾಷೆಗಳಲ್ಲಿ ಪ್ರಕಟವಾಗಿದೆ...
Add to Cartಕಾನಿಸ್ಟೇಬಲ್ ನಂಜುಂಡೇ ಗೌಡ ಮುಗುಳ್ನಕ್ಕ. ಹಳ್ಳಿಯ ಅಭ್ಯಾಸದ ಅವನ ನಗೆಯಲ್ಲಿ ಮುಗುಳು ಮತ್ತು ಗಟ್ಟಿ ನಗೆಗಳ ವ್ಯತ್ಯಾಸ ಹೆಚ್ಚು ಗೊತ್ತಾಗಲಿಲ್ಲ. ‘ಯಾಕೆ ನಗ್ತೀರ ?’ ಕಂಬಿಗಳ ಒಳಗಿದ್ದ, ಬಿ.ಇ. ಓದಿ ಉದ್ಯಮಪತಿಯಾದ ಇವನು ಕೇಳಿದ. ‘ಓದಿದ ಗಂಡಸರೆಲ್ಲ ಎಂಗಸರಾಯ್ತಾರೆ. ಓದಿದ ಎಂಗಸರೆಲ್ಲ ಗಂಡಸರಾಯ್ತಾರೆ.’ ಎಂದು ಅವನು ಈಗ ಗಟ್ಟಿಯಾಗಿ ನಕ್ಕ.* * *‘ಯು ಆರ್ ಮೈ ಕಸಿನ್,’ ಬೆಂಗಳೂರಿನ ಅವಳು ಹಳ್ಳಿ ಮನೆಯ ಹಿತ್ತಲಿನ ಪರಂಗಿ ಗಿಡದ ಹತ್ತಿರ ಅವನನ್ನು ಮಾತನಾಡಿಸಿದಳು.‘ನಿನಗೆ ಯಾರು ಇಂಗ್ಲಿಷ್ ಹೇಳಿಕೊಟ್ಟೋರು?’ ಅವನು ಒರಟಾಗಿ ಕೇಳಿದ, ಅವಳ ಸ್ಕೂಲಿನ ಯಾವ ಮಿಸ್ಸಿಗೂ ಇಲ್ಲದ ಒರಟಿನಿಂದ. ಇವನೇನು ನನಗೆ ಟೀಚರಾ ಎಂದು ಅವಳಿಗೆ ರೇಗಿತು.‘ನನ್ನ ಮಿಸ್ಸು.ನನ್ನ ಮಮ್ಮಿ. ನನ್ನ ಮಮ್ಮಿ ಇಂಗ್ಲಿಷ್ ರೀಡರ್.’‘ಸರಿಯಾಗಿ ತಿಳಕ. ನಾನು ನಿನಗೆ ಕಸಿನ್ ಅಲ್ಲ. ಬ್ರದರ್. ಅಂದರೆ ಅಣ್ಣ . ನೀನು ನನಗೆ ಸಿಸ್ಟರ್. ಅಂದರೆ ತಂಗಿ,’ ಎಂದ.‘ಆದರೆ ನನ್ನ ಡ್ಯಾಡಿ ಮಮ್ಮಿ ಬೇರೆ. ನಿನ್ನ ಅಪ್ಪ ಅಮ್ಮ ಬೇರೆ,’ ಅವಳ ಅನುಮಾನ ಬಗೆಹರಿಯಲಿಲ್ಲ.‘ಬೇರೆ ಆದರೇನು? ನಿನ್ನಪ್ಪ ನಮ್ಮಪ್ಪನಿಗೆ ಅಣ್ಣ. ನೀನು ನನಗಿಂತ ಚಿಕ್ಕೋಳು. ಆದ್ದರಿಂದ ನಾನು ನಿನಗೆ ಅಣ್ಣ. ನಿನಗೆ ಇಂಗ್ಲಿಷ್ ಹೇಳಿಕೊಟ್ಟೋರಿಗೆ ಬುದ್ದಿ ಇಲ್ಲ,’ ಅವನು ಮೇಷ್ಟರಗಿರಿ ಮಾಡಿದ.***ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು...
Add to Cartಕಾನಿಸ್ಟೇಬಲ್ ನಂಜುಂಡೇ ಗೌಡ ಮುಗುಳ್ನಕ್ಕ. ಹಳ್ಳಿಯ ಅಭ್ಯಾಸದ ಅವನ ನಗೆಯಲ್ಲಿ ಮುಗುಳು ಮತ್ತು ಗಟ್ಟಿ ನಗೆಗಳ ವ್ಯತ್ಯಾಸ ಹೆಚ್ಚು ಗೊತ್ತಾಗಲಿಲ್ಲ. ‘ಯಾಕೆ ನಗ್ತೀರ ?’ ಕಂಬಿಗಳ ಒಳಗಿದ್ದ, ಬಿ.ಇ. ಓದಿ ಉದ್ಯಮಪತಿಯಾದ ಇವನು ಕೇಳಿದ. ‘ಓದಿದ ಗಂಡಸರೆಲ್ಲ ಎಂಗಸರಾಯ್ತಾರೆ. ಓದಿದ ಎಂಗಸರೆಲ್ಲ ಗಂಡಸರಾಯ್ತಾರೆ.’ ಎಂದು ಅವನು ಈಗ ಗಟ್ಟಿಯಾಗಿ ನಕ್ಕ.* * *‘ಯು ಆರ್ ಮೈ ಕಸಿನ್,’ ಬೆಂಗಳೂರಿನ ಅವಳು ಹಳ್ಳಿ ಮನೆಯ ಹಿತ್ತಲಿನ ಪರಂಗಿ ಗಿಡದ ಹತ್ತಿರ ಅವನನ್ನು ಮಾತನಾಡಿಸಿದಳು.‘ನಿನಗೆ ಯಾರು ಇಂಗ್ಲಿಷ್ ಹೇಳಿಕೊಟ್ಟೋರು?’ ಅವನು ಒರಟಾಗಿ ಕೇಳಿದ, ಅವಳ ಸ್ಕೂಲಿನ ಯಾವ ಮಿಸ್ಸಿಗೂ ಇಲ್ಲದ ಒರಟಿನಿಂದ. ಇವನೇನು ನನಗೆ ಟೀಚರಾ ಎಂದು ಅವಳಿಗೆ ರೇಗಿತು.‘ನನ್ನ ಮಿಸ್ಸು.ನನ್ನ ಮಮ್ಮಿ. ನನ್ನ ಮಮ್ಮಿ ಇಂಗ್ಲಿಷ್ ರೀಡರ್.’‘ಸರಿಯಾಗಿ ತಿಳಕ. ನಾನು ನಿನಗೆ ಕಸಿನ್ ಅಲ್ಲ. ಬ್ರದರ್. ಅಂದರೆ ಅಣ್ಣ . ನೀನು ನನಗೆ ಸಿಸ್ಟರ್. ಅಂದರೆ ತಂಗಿ,’ ಎಂದ.‘ಆದರೆ ನನ್ನ ಡ್ಯಾಡಿ ಮಮ್ಮಿ ಬೇರೆ. ನಿನ್ನ ಅಪ್ಪ ಅಮ್ಮ ಬೇರೆ,’ ಅವಳ ಅನುಮಾನ ಬಗೆಹರಿಯಲಿಲ್ಲ.‘ಬೇರೆ ಆದರೇನು? ನಿನ್ನಪ್ಪ ನಮ್ಮಪ್ಪನಿಗೆ ಅಣ್ಣ. ನೀನು ನನಗಿಂತ ಚಿಕ್ಕೋಳು. ಆದ್ದರಿಂದ ನಾನು ನಿನಗೆ ಅಣ್ಣ. ನಿನಗೆ ಇಂಗ್ಲಿಷ್ ಹೇಳಿಕೊಟ್ಟೋರಿಗೆ ಬುದ್ದಿ ಇಲ್ಲ,’ ಅವನು ಮೇಷ್ಟರಗಿರಿ ಮಾಡಿದ.***ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು...
Add to Cartಮಲೆನಾಡು ಅಂದ, ಚಂದ, ಸುಂದರ, ಸುಮಧುರ, ಮೋಹಕ, ಮನಮೋಹಕ ಹೀಗೆ ವರ್ಣನೆಯ ಮಳೆಗಯ್ಯುತ್ತಾ ಹೋದರೆ ಪದಗಳಿಗೂ ಬಹುಶಃ ಬೇಜಾರಾಗುವುದಿಲ್ಲ. ಹೌದು ಆ ಚೆಲುವು , ಪ್ರೌಢಿಮೆ, ಹೊಗಳಿಕೆ ಮಲೆನಾಡಿಗೆ ಸಲ್ಲತಕ್ಕದ್ದೆ. ಮಲೆನಾಡಿನ ವರ್ಣನೆ, ಸಂಸ್ಕೃತಿ, ಜೀವನಶೈಲಿಯ ಬಗ್ಗೆ ಈಗಾಗಲೇ ಸಾಕಷ್ಟು ಓದಿಕೊಂಡಿದ್ದೇವೆ; ತಿಳಿದುಕೊಂಡಿದ್ದೇವೆ. ಆದರೆ ಇತ್ತೀಚಿನ ಮಲೆನಾಡು, ಬದಲಾಗುತ್ತಿರುವ ಮಲೆನಾಡು, ಬದಲಾದ ಮಲೆನಾಡು ನಿಜಕ್ಕೂ ಅಷ್ಟೊಂದು ಮನಮೋಹಕವಾಗಿದೆಯೇ? ಹಸಿರಿದೆ, ಮಳೆಯಿದೆ, ತೊರೆಯಿದೆ, ನೆರೆಯಿದೆ. ಆದರೂ ಕಳೆದುಕೊಂಡದ್ದೇನು ಎಂಬುದನ್ನು ಹುಡುಕುವ ತುಡಿತ ಇಲ್ಲವಾಗಿದೆ. ನಾನು ಚಿಕ್ಕಂದಿನಲ್ಲಿ ಕಂಡ ಮಲೆನಾಡು ಈಗಿಲ್ಲ. ಮುಂದೆ ಇರುವುದೂ ಇಲ್ಲ. “ಕಾಡಿನ ನೆಂಟರು” ಹಿಂದಿನ, ಇಂದಿನ ಮಲೆನಾಡಿನ ಏರಿಳಿತದ ಹಲವು ಮಾಹಿತಿಗಳನ್ನ ಸಣ್ಣ ಕತೆಗಳ ಮೂಲಕ ಬರೆಸಿಕೊಂಡಿದೆ. ಇಲ್ಲಿ ಅದೇ ಮಲೆನಾಡಿನ ಕಾಡು, ನದಿ, ಸಂಸ್ಕೃತಿ, ಬದಲಾದ ಜೀವನ ಎಲ್ಲವೂ ಇದೆ. ಹಸಿರನ್ನು ಉಳಿಸಬೇಕೆಂಬ ಒಕ್ಕೊರಲ ಕೂಗಿದೆ. ಉಳಿಸಿಕೊಳ್ಳುವ ಮಾತನ್ನು ಯಾಕೆ ಆಡುತ್ತಿದ್ದೀನಿ ಎಂದರೆ ಅದಾಗಲೇ ನಾವು ಎಡವಿ ಬಿದ್ದಾಗಿದೆ. ಈ ಹಿಂದಿನಿಂದ ನೋಡುತ್ತಾ ಬಂದರೆ ಮಲೆನಾಡಿಗೆ ಬಂದ ಯೋಜನೆಗಳೆಷ್ಟು? ಆ ಯೋಜನೆಗಳಿಂದಾದ ಪರಿಣಾಮಗಳೇನು? ಏರಿಳಿತಗಳೆಷ್ಟು? ಇವೆಲ್ಲಾ ವಿಷಯಗಳ ಬಗ್ಗೆ ಅವಲೋಕನ ಮಾಡಿ ಮುಂದೆ ಸಾಗಲೇಬೇಕಾದ ಸಮಯ ಇದು. ನನಗನ್ನಿಸಿದ ಹಾಗೆ ನಾವೀಗ ಅರಣ್ಯಗಳನ್ನ ಬಳಸಿಕೊಂಡ ರೀತಿಗೆ ಸಂಪೂರ್ಣವಾಗಿ ಸುಂಕ ಕಟ್ಟುವ ಕಾಲ ಕೂಡ ದೂರ ಇಲ್ಲ. ಮುಂದಿನ ದಿನಗಳಲ್ಲಿ ಮಲೆನಾಡಿನಲ್ಲೇ ಅರಣ್ಯ ಬೆಳೆಸಲು, ಗಿಡಗಳನ್ನು ನೆಡುವ ದೊಡ್ಡ ಉದ್ಯೋಗ ಸೃಷ್ಟಿಯ ಕ್ರಾಂತಿಯಾಗುವುದೇನೋ! ಯಾಕೆಂದರೆ ಹಸಿರು ಉಳಿಸಿದಾಗ ಮಾತ್ರವೇ ಉಸಿರಾಡಬಹುದು. “ಈ ಕೃತಿಯಲ್ಲಿರುವ ಸಂಗತಿಗಳು, ಪಾತ್ರಗಳು ಮಲೆನಾಡ ನೆಲದಲ್ಲಿ ನಾವು ಸೃಷ್ಟಿ ಮಾಡಿಕೊಂಡಿರುವುದೇ ಹೊರತು ಅವಾಗೆ ಜನ್ಮ ತಾಳಿದ್ದಲ್ಲ. ಅವುಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಕೆಲವು ಕಾಲ್ಪನಿಕ ಸಂಗತಿಗಳಿದ್ದರೂ ವಾಸ್ತವದ ಎದೆ ಬಡಿತಕ್ಕೆ ಸ್ಪಂದಿಸುತ್ತವೆ..
Add to Cartಕಾದಂಬರಿ ಕರತಲ ರಂಗಭೂಮಿ. ಅಂಗೈಮೇಲಣ ನಾಟಕಶಾಲೆ. ಆದ್ದರಿಂದ ಕಾದಂಬರಿಯನ್ನು ಓದುವ ವಾಚಕರು ನಾಟಕವನ್ನು ನೋಡುವ ಪ್ರೇಕ್ಷಕರೂ ಆಗಬೇಕಾಗುತ್ತದೆ. ಈ ಕಾದಂಬರಿಯನ್ನು ಓದುವವರಲ್ಲಿ ಒಂದು ವಿಜ್ಞಾಪನೆ. ಇದನ್ನು ಕಥೆಯ ಕೋಲಾಹಲಕ್ಕಾಗಿ ಓದಬೇಡಿ. ಸಾವಧಾನವಾಗಿ ಸಚಿತ್ರವಾಗಿ ಸಜೀವವಾಗಿ ಓದಿ. ಇಲ್ಲಿ ಚಿತ್ರಿತವಾಗಿರುವುದು ಮಲೆನಾಡಿನ ಬಾಳಿನ ಕಡಲಿನಲ್ಲಿ ಒಂದು ಹನಿ. ಅನೇಕರಿಗೆ ಅದು ಸಂಪೂರ್ಣವಾಗಿ ಹೊಸ ಪ್ರಪಂಚವಾಗುತ್ತದೆ. ಹೊಸ ಊರಿಗೆ ಹೋಗುವವರು ಅಲ್ಲಿಯ ಜನ ಮತ್ತು ಜೀವನದ ವಿಚಾರಕ್ಕಾಗಿ ತಟಕ್ಕನೆ ಯಾವ ನಿರ್ಣಯಗಳನ್ನೂ ಮಾಡಿಕೊಳ್ಳದೆ ಸ್ವಲ್ಪಕಾಲ ತಾಳ್ಮೆಯಿಂದಿದ್ದು ಕ್ರಮೇಣ ಬಳಕೆಯಿಂದ ಜನರನ್ನೂ ಜೀವನವನ್ನೂ ಪರಿಚಯ ಮಾಡಿಕೊಳ್ಳುವಂತೆ ಈ ಕಾದಂಬರಿಯ ಅರಣ್ಯಜಗತ್ತನ್ನು ಪ್ರವೇಶಿಸುವ ವಾಚಕರು ವರ್ತಿಸಬೇಕಾಗುತ್ತದೆ. ಎಂದರೆ, ಮೊದಲನೆಯ ಸಾರಿ ಓದಿದೊಡನೆ ಎಲ್ಲವನ್ನೂ ಪೂರೈಸಿದೆವು ಎಂದುಕೊಳ್ಳುವವರು, ಮೋಟಾರಿನಲ್ಲಿ ಕುಳಿತು ಒಂದೂರಿನ ಪೂರ್ವದ್ವಾರದಿಂದ ಒಳನುಗ್ಗಿ, ಅದರ ಬೀದಿಗಳಲ್ಲಿ ಸರ್ರನೆ ಸಂಚರಿಸಿ, ಪಶ್ಚಿಮ ದ್ವಾರದಿಂದ ಹೊರಹೊರಟು, ಆ ಊರಿನ ಪೂರ್ಣಪರಿಚಯ ಮಾಡಿಕೊಂಡಿದ್ದೇವೆ ಎನ್ನುವವರಂತೆ ಹಾಸ್ಯಾಸ್ಪದರಾಗುತ್ತಾರೆ. ಈ ಕಾದಂಬರಿಯನ್ನು ರಚಿಸುವಾಗಲೂ, ತರುವಾಯ ಮತ್ತೆ ಮತ್ತೆ ಓದುವಾಗಲೂ ಬಹುವಾಗಿ ಬಂದಿರುವ ರಸಸುಖದಲ್ಲಿ ಒಂದಿನಿತನ್ನಾದರೂ ಇದನ್ನು ಓದುವವರು ಸವಿಯುತ್ತಾರೆಂದು ಗೊತ್ತಾದರೆ ಈ ಕೃತಿ ಸಾರ್ಥಕವಾಗುತ್ತದೆ...
Add to Cartರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು ಹುಟ್ಟಿದ್ದು ೧೯೨೬ರಲ್ಲಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ. ಅಲ್ಲಿಯೇ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ. ೧೯೫೩ರಲ್ಲಿ ಮೈಸೂರು ವಿಶ್ವದ್ಯಾನಿಲಯದಿಂದ ಮೂರು ಚಿನ್ನದ ಪದಕಗಳೊಡನೆ ಎಂ.ಎ. ಪದವಿ; ೧೯೬೫ರಲ್ಲಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ `ಸೌಂದರ್ಯ ಸಮೀಕ್ಷೆ` ಪ್ರೌಢಪ್ರಬಂಧಕ್ಕಾಗಿ ಡಾಕ್ಟೊರೇಟ್ ಪದವಿ. ೧೯೪೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಭಾಷೆಯ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಶಿವರುದ್ರಪ್ಪನವರು ೧೯೬೩ರಿಂದ ೧೯೬೬ರ ವರೆಗೆ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ರೀಡರ್ ಆಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು; ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ನಂತರ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ನಿವೃತ್ತರಾದರು. ಶಿವರುದ್ರಪ್ಪನವರು ಕನ್ನಡದ ಅಗ್ರಶ್ರೇಣಿಯ ಕವಿಗಳಲ್ಲಿ ಒಬ್ಬರಾಗಿ ಮನೆಮಾತಾಗಿರುವವರು. ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದ ಹೆಜ್ಜೆ, ಅನಾವರಣ, ಗೋಡೆ, ಕಾರ್ತೀಕ, ಪ್ರೀತಿ ಇಲ್ಲದ ಮೇಲೆ, ಹೀಗೆ ಅವರ ೧೩ಕ್ಕೂ ಹೆಚ್ಚು ಕವನ ಸಂಕಲನಗಳು ಪ್ರಕಟವಾಗಿವೆ. ಪರಿಶೀಲನ, ವಿಮರ್ಶೆಯ ಪೂರ್ವ ಪಶ್ಚಿಮ, ಸೌಂದರ್ಯ ಸಮೀಕ್ಷೆ, ಕಾವ್ಯಾರ್ಥ ಚಿಂತನ, ಮಹಾಕಾವ್ಯ ಸ್ವರೂಪ, ಅನುರಣನ, ಕನ್ನಡ ಕವಿಗಳ ಕಾವ್ಯಕಲ್ಪನೆ, ಅವರ ವಿಮರ್ಶಾ ಕೃತಿಗಳಲ್ಲಿ ಮುಖ್ಯವಾದುವು. ಮಾಸ್ಕೋದಲ್ಲಿ ೨೨ ದಿನ, ಇಂಗ್ಲೆಂಡಿನಲ್ಲಿ ಚಾತುರ್ಮಾಸ, ಅಮೆರಿಕದಲ್ಲಿ ಕನ್ನಡಿಗ, ಗಂಗೆಯ ಶಿಖರಗಳಲ್ಲಿ ಪ್ರವಾಸ ಕಥನಗಳು. ಶಿವರುದ್ರಪ್ಪನವರು ಪಡೆದಿರುವ ಅನೇಕಾನೇಕ ಪ್ರಶಸ್ತಿ, ಪುರಸ್ಕಾರಗಳಲ್ಲಿ ಕರ್ನಾಟಕದ ರಾಷ್ಟ್ರಕವಿ ಗೌರವ (೨೦೦೬), ಸೋವಿಯೆಟ್ ಲ್ಯಾಂಡ್ ನೆಹರೂ ಪ್ರಶಸ್ತಿ (೧೯೭೩), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೪), ಪಂಪ ಪ್ರಶಸ್ತಿ (೧೯೯೮), ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೮೨), ಸಾಹಿತ್ಯ ಕಲಾ ಕೌಸ್ತುಭ ಪ್ರಶಸ್ತಿ (೨೦೧೦) ಮುಖ್ಯವಾದುವು. ದಾವಣಗೆರೆಯಲ್ಲಿ ನಡೆದ ೬೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದ ಶಿವರುದ್ರಪ್ಪನವರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಹಾಗೂ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೊರೇಟ್ ಪ್ರಶಸ್ತಿಗಳೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ `ನಾಡೋಜ` ಪ್ರಶಸ್ತಿಯೂ ಲಭಿಸಿವೆ...
Add to Cartಕನ್ನಡದ ಪ್ರಸಿದ್ಧ ಕಾದಂಬರಿಕಾರರಾದ ಪೂರ್ಣಚಂದ್ರ ತೇಜಸ್ವಿಯವರು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬರೆದ ನಾಲ್ಕು ಪ್ರಖ್ಯಾತ ಕತೆಗಳ ಸಂಕಲನ ಇದು. ಮೊದಲನೆಯ ಕತೆಯಾದ “ಕಿರಗೂರಿನ ಗಯ್ಯಾಳಿಗಳು” ಕತೆಯ ನಾಟಕದ ರೂಪಾಂತರ ಈಗಾಗಲೇ ಅನೇಕ ಬಾರಿ ರಂಗಸ್ಥಳದ ಮೇಲೆ ಪ್ರದರ್ಶಿತವಾಗಿದೆ. “ಮಾಯಾಮೃಗ” ಕತೆಗೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಬಂದ ರಾಷ್ಟ್ರದ ಅತ್ಯುತ್ತಮ ಹತ್ತು ಕತೆಗಳಲ್ಲಿ ಒಂದೆಂದು ಪರಿಗಣಿಸಿ “ಕಥಾ ರಾಷ್ಟ್ರೀಯ ಪ್ರಶಸ್ತಿ” ಕೊಡಲಾಗಿದೆ. “ಕೃಷ್ಣೇಗೌಡನ ಆನೆ” ಕತೆ ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಮಲಯಾಳಿ ಭಾಷೆಗಳಿಗೆ ತರ್ಜುಮೆ ಮಾಡಲಾಗಿದೆ...
Add to Cartಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...
Add to Cartಬೇಸಿಗೆಯಲ್ಲಿ ಅಂಟಾರ್ಟಿಕಾ ಮೈಯನ್ನು ಮರಗಟ್ಟಿಸುತ್ತದೆ. ಚಳಿಗಾಲದಲ್ಲಿ ಮೂಗುಜ್ಜಿಕೊಂಡರೆ ಚರ್ಮ ಸುಲಿದಿರುವುದು ಕನ್ನಡಿಯನ್ನು ನೋಡಿಕೊಂಡಾಗಲೇ, ಚಳಿಯ ಪರಮಾವಧಿಗೆ ಅಲ್ಲಿ ಸಿಲುಕಿದವರ ಮೈ ವೈಬ್ರೇಟರ್ ಮೋಡ್ನಲ್ಲಿರುವ ಮೊಬೈಲ್ನಂತೆ ನಡುಗುತ್ತಿರುತ್ತದೆ. ಹವಾಮಾನ ಹೀಗಿರುವಾಗ ಕೊಲೆಗಾರನೊಬ್ಬನು ಸನಿಹದಲ್ಲಿಯೇ ಇದ್ದಾನೆಂಬ ಭಯದಿಂದ ಮೂಡಿದ ಚಳಿಯೂ ಸೇರಿದರೆ… ಊಹೆಗೆ ನಿಲುಕದ ತನು-ಮನಥಂಡಿ!ಟೆನ್ಅಲಿಸ್ಟರ್ ಮ್ಯಾಕ್ಲೀನ್ ಆಂಗ್ಲದ ಸಾರ್ವಕಾಲಿಕ ಶ್ರೇಷ್ಠ ಬರಹಗಾರರ ಪೈಕಿ ಅಗ್ರಪಂಕ್ತಿಯಲ್ಲಿರುವವನು. ಮ್ಯಾಕ್ಲೀನಿನ ‘ಗನ್ ಆಫ್ ನವರೋನ್’, ನವರೋನ್” ಮುಂತಾದ ಕೃತಿಗಳು ಚಲನಚಿತ್ರಗಳಾಗಿಯೂ ವಿಶ್ವವಿಖ್ಯಾತವಾಗಿವೆ. ಆತನ ಇಂಗ್ಲಿಷ್ ಭಾಷಾ ಪ್ರಯೋಗದಲ್ಲಿ ಕ್ಲಿಷ್ಟತಮ ನಾವೀನ್ಯತೆ ಇರುತ್ತದೆ. ವಿಷಯಮಂಡಣೆಗೆ ಮುನ್ನ ಆಳವಾದ ಅಧ್ಯಯನವಿರುತ್ತದೆ. ಈ ಕೃತಿಯ ಅನುವಾದಕ್ಕೆ ವಸ್ತುವಾದ ‘ನೈಟ್ ವಿತೌಟ್ ಎಂಡ್’ ಚಳಿಗಾಲದ ಧ್ರುವಪ್ರದೇಶದ ಜೀವನದ ಚಿತ್ರಣವನ್ನು ಕಟ್ಟಿಕೊಡುತ್ತಲೇ ಹಲವಾರು ವೈಜ್ಞಾನಿಕ ಸತ್ಯಗಳನ್ನೂ, ಕಲ್ಪನೆಗಳನ್ನೂ ಹದವಾಗಿ ಹೆಣೆದು ಕೊಟ್ಟಿದೆ. ಈ ಪರಿಪಕ್ವ ಪಾಕವನ್ನು ಗೆಳೆಯ ನಾಗೇಶ್ ಕುಮಾರ್ ‘ಕೊನೆಗಾಣದ ರಾತ್ರಿ’ ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡಿಗರಿಗೆ ಸೊಗಸಾಗಿ ಉಣಬಡಿಸಿದ್ದಾರೆ. ಮೂಲ ಕೃತಿಗೆ ನಿಷ್ಠವಾಗಿರುವ ಈ ಕೃತಿಯು ಗೂಢಚಯ್ಯ, ನಿಗೂಢತೆಗಳನ್ನು ಇಷ್ಟಪಡುವ ಓದುಗರ ಮನೆಯ ಕಪಾಟಿಗೆ ಶೋಭೆ ತರುವುದು ಸುನಿಶ್ಚಿತ...
Add to Cartತಂಗಾಳಿ ಬೀಸಿದಾಗ ಒಂಥರಾ ಖುಷಿ. ಮಳೆಯ ಮೊದಲ ಹನಿ ಬಿದ್ದಾಗ ಇನ್ನೊಂಥರಾ ಖುಷಿ. ಎಲೆಯ ಮೇಲೆ ಬಿದ್ದ ಮಂಜಿನ ಹನಿಗೆ ಸೂರ್ಯಕಿರಣ ಮುತ್ತಿಟ್ಟಾಗ ಮತ್ತೊಂಥರಾ ಆನಂದ. ಜೀವನವನ್ನು ಬೆಂಗಳೂರು ಎಂದು ನಾವು ಭಾವಿಸಿದರೆ ಖುಷಿ ಎಂಬುದು ಮೆಜೆಸ್ಟಿಕ್ ಇದ್ದಂತೆ. ನಾವು ಈ ಖುಷಿಯಿಂದಲೇ ನಮ್ಮ ನಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತೇವೆ. ಪ್ರಯಾಣ ಬೇರೆ ಬೇರೆ ದಿಕ್ಕುಗಳಲ್ಲಿ ಸಾಗುತ್ತದೆ. ಆಮೇಲೆ ಮತ್ತೆ ನಾವೆಲ್ಲ ಹುಡುಕುವುದು ಖುಷಿಯನ್ನೇ ಅಲ್ಲವೇ? ಎಲ್ಲೇ ಹೋದರೂ ಮೆಜೆಸ್ಟಿಕ್ಗೆ ತಾನೇ ಬರಬೇಕು? ಖುಷಿಯಿಂದ ನಾವು ಹುಟ್ಟುತ್ತೇವೆ. ಖುಷಿಯಿಂದ ಬೀಗುತ್ತಲೇ ಬೆಳೆಯುತ್ತೇವೆ. ಅದೇ ಖುಷಿ ನಮ್ಮ ಕಣಕಣಗಳಲ್ಲಿ ಮನೆ ಮಾಡುತ್ತದೆ. ಇಂಥ ಖುಷಿಯೇ ದೇವರು ಎಂದು ಉಪನಿಷತ್ ಹೇಳುತ್ತದೆ. ಆದರೆ ನಾವೀಗ ಎಲ್ಲಿದ್ದೇವೆ? ನಮ್ಮ ಕೆಲಸ, ಬದುಕು ನಮಗೆ ಖುಷಿ ಕೊಡುತ್ತಾ? ನಾವಾಡುವ ಮಾತು ಬೇರೆಯವರಿಗೆ ಬಿಡಿ, ಕನಿಷ್ಠ ನಮಗಾದ್ರೂ ಖುಷಿ ಕೊಡುತ್ತಾ? ನಮ್ಮ ಬದುಕಿನ ಜಂಜಾಟದಲ್ಲಿ ಮೈ ತುರಿಸಿಕೊಳ್ಳುವ ಖುಷಿಯಾದರೂ ನಮಗೆ ಉಳಿದಿದೆಯೇ? ನಮ್ಮ ಆನಂದವನ್ನು ಲಾಲ್ಲ್ಬಾಗ್ನಲ್ಲೋ ಊಟಿಯಲ್ಲೋ ಶಿಮ್ಲಾದಲ್ಲೋ ಸ್ವಿಟ್ಜರ್ಲ್ಯಾಂಡಿನಲ್ಲೋ ಹುಡುಕಲು ಹೋಗಿ ಅಲ್ಲಿ ಅದು ಸಿಕ್ಕಾಗ ಅದನ್ನು ಅಲ್ಲೇ ಬಿಟ್ಟು ಬಂದಿದ್ದೇವಾ? ಈ ಪ್ರಶ್ನೆಗಳು ಜೀವನದ ವಾಸ್ತವಕ್ಕೆ ನಮ್ಮನ್ನು ಕರೆತರುತ್ತವೆ. ಇಲ್ಲಿಂದ ಒಂದು ಸಣ್ಣ ಪ್ರಯತ್ನ ಮೌನವಾಗಿ ಪ್ರಾರಂಭವಾಗುತ್ತದೆ. ನಮ್ಮ ಹೆಜ್ಜೆಗಳನ್ನು ನಾವೇ ನೋಡಿಕೊಳ್ಳುತ್ತೇವೆ. ಸರಿ ತಪ್ಪುಗಳಿಗಿಂತ ಹೆಚ್ಚಾಗಿ ನಾವು ಮಾಡಬೇಕಾದುದು ಯಾವುದು ಎಂಬ ಅರಿವು ಮೂಡುತ್ತದೆ. ನಾವೆಲ್ಲ ಇದೇ ಹಾದಿಯಲ್ಲಿದ್ದೇವೆ. ಇದೇ ಮರೆತ ಹಾದಿಯ ಮೆಲುಕು...
Add to Cartಅವನಿಗೆ ಕ್ಯಾನ್ಸರ್ ಆಗಿತ್ತು. ಬದುಕಿದರೆ ಆರು ತಿಂಗಳು ಅಷ್ಟೆ ಎಂದರು ವೈದ್ಯರು. ಆರು ತಿಂಗಳೇ? ಬೇಕಾದಷ್ಟಾಯಿತು! ಎಂದ ಅವನು. ನಾಲ್ಕು ಟೈಮ್ಜೋನ್ಗಳಷ್ಟು ವಿಸ್ತಾರಕ್ಕೆ ಹರಡಿಕೊಂಡಿರುವ ದೇಶದ ಪೂರ್ವದಿಂದ ಪಶ್ಚಿಮದವರೆಗೆ ಮ್ಯಾರಥಾನ್ ಓಡಿಬಿಟ್ಟ ಆ ಪುಣ್ಯಾತ್ಮ! ಆಕೆಯ ಮೇಲೆ ಐವತ್ತಾರು ಬರ್ಬರ ಗಾಯಗಳಾಗಿದ್ದವು. ಚಾಕುವಿನ ಬರೆ, ರಕ್ತದ ಕೋಡಿ, ಎಂದೆಂದೂ ಮಾಯದ ಆಳವಾದ ಗೀರು. ವಿರೂಪವಾದ್ದಕ್ಕೆ ಕೊರಗುತ್ತ ಕತ್ತಲೆ ಕೋಣೆಯಲ್ಲಿ ಬದುಕು ಮುಗಿಸುವ ಬದಲು ಆಕೆ ಜಗತ್ತಿಗೆಲ್ಲ ಮುಖ ತೋರುವ ಗಟ್ಟಿ ನಿರ್ಧಾರ ಮಾಡಿದಳು. ರಾಜಮಹಾರಾಜರೇ ಈಕೆಯ ಗಾಯನವನ್ನು ಕಿವಿ ತುಂಬಿಸಿಕೊಳ್ಳಬೇಕೆಂದು ಕಾತರಿಸುವಂಥ ಮಹಾನ್ ಗಾಯಕಿಯಾಗಿಬಿಟ್ಟಳು! ಗಾಯದ ನೋವನ್ನು ಗಾಯನದಲ್ಲಿ ಮರೆತಳು! ಇದ್ದೊಬ್ಬ ಪತಿಯಿಂದ ದೂರವಾಗಿ, ಮೈಯನ್ನೇ ಮುಳುಗಿಸುವಷ್ಟು ಸಾಲ ಮಾಡಿಕೊಂಡು ಹೈರಾಣಾದವಳು ಕೇವಲ ಐವತ್ತು ಪೈಸೆಯ ರೀಫಿಲ್ಲನ್ನು ನಂಬಿಕೊಂಡು ಕೋಟ್ಯಂತರ ರುಪಾಯಿಗಳ ಸಾಮ್ರಾಜ್ಯ ಕಟ್ಟಿದ ಕತೆ, ಊಟಕ್ಕಿಲ್ಲದೆ ಕೊನೆಗೆ ತನ್ನ ನಾಯಿಯನ್ನೂ ದುಡ್ಡಿಗೆ ಮಾರಾಟ ಮಾಡಿದ ಕಲಾವಿದ ಹಾಲಿವುಡ್ನ ಹೆಸರಾಂತ ನಟನಾಗಿ ಬದುಕು ಬಂಗಾರ ಮಾಡಿಕೊಂಡ ಕತೆ, ವಿಚ್ಛೇದನವೆಂಬ ಕಂಗಾಲು ಘಟನೆಯನ್ನೇ ತನ್ನ ಬದುಕಿಗೆ ತಿರುವು ಕೊಡುವ ಅವಕಾಶವನ್ನಾಗಿ ಪರಿವರ್ತಿಸಿಕೊಂಡವನ ಕತೆ... ಹೀಗೆ ಈ ಹೊತ್ತಗೆಯ ಪುಟ ಪುಟದಲ್ಲೂ ಸ್ಫೂರ್ತಿದೇವತೆಗಳ ತೋರಣ."ಗಂಧದ ಮಾಲೆಯನ್ನು ಪರಿಮಳದಲ್ಲಿ ಮಾಡುತ್ತಾರೆ" - ಎಂಬುದು ಹತ್ತು ವರ್ಷದ ಎಳೆ ಹುಡುಗ ಪೂರ್ಣಪ್ರಜ್ಞ ಬರೆದ ಕವಿತೆಯ ಸಾಲು. ಆ ಹುಡುಗ ಈಗ ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಆತನ ಕವಿತೆಗಳು "ಗಂಧದ ಮಾಲೆ" ಕೃತಿಯಲ್ಲಿ ಬಂದಿವೆ, ಆತನ ವ್ಯಕ್ತಿ ಪರಿಚಯದ ಜೊತೆ. ಈ ಕೃತಿಯಲ್ಲಿ ರಾಕ್ಷಸ ಸರಕಾರಗಳ ಕೈಯಲ್ಲಿ ನಲುಗಿ ನರಕದ ಅನುಭವವನ್ನು ಕಂಡುಂಡು ಬಂದವರ ದಾರುಣ ಕತೆಗಳಿವೆ, ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಕರೆಸಿಕೊಂಡೂ ಬದುಕನ್ನು ಅಸಹನೀಯವಾಗಿಸಿಕೊಂಡವರ ದುಃಖದ ಕತೆಗಳೂ ಇವೆ. ಮಹಾತ್ಮರಾಗಲು ಬೇಕಾದ ಚೈತನ್ಯ ಅಂತಸ್ಥವಾಗಿರುವವರು ಜಗತ್ತಿನ ಪ್ರತಿಯೊಬ್ಬರೂ. ಆದರೆ ನಿಜಕ್ಕೂ ಮಹಾತ್ಮರ ಸಾಲಿಗೇರುವ ಮಂದಿ ಬೆರಳೆಣಿಕೆಯಷ್ಟೆ! ಯಾಕೆ ಹಾಗೆ? ಈ ಹೊತ್ತಗೆಯ ಕತೆಗಳಲ್ಲಿ ಅದಕ್ಕೆ ಉತ್ತರ ಸಿಗಬಹುದೇನೋ ಓದುಗರಿಗೆ...
Add to Cartಸುಬ್ಬಯ್ಯ ನಾಯ್ಡು ಕುಟುಂಬದ ಸೊಸೆ, ಗಿರಿಜಾ ಲೋಕೇಶ್ ಅವರ ಜೀವನ ಕಥನ ಬರೆಯುತ್ತಾ ಬರೆಯುತ್ತಾ ನಾನು ಚಿಕ್ಕವನಿದ್ದಾಗ ನಮ್ಮೂರಿಗೆ ಬರುತ್ತಿದ್ದ ವೃತ್ತಿರಂಗಭೂಮಿ ನಾಟಕ ತಂಡಗಳ ಕಲಾವಿದರು ನೆನಪಾದರು. ಎಷ್ಟೊಂದು ವೈವಿಧ್ಯ ಅನುಭವಗಳು, ಎಷ್ಟೊಂದು ನಲಿವು-ನೋವುಗಳು! ಅವನ್ನೆಲ್ಲ ಸ್ಥಿತಪ್ರಜ್ಞರಂತೆ ಸ್ನೀಕರಿಸಿ, ಯಾವ ಕಷ್ಟವೂ ಕಷ್ಟವೇ ಅಲ್ಲ ಎಂಬಂತೆ ಅವನ್ನೆಲ್ಲ ಹಾದುಬಂದಿರುವ ಗಿರಿಜಾ ಲೋಕೇಶ್ ಜೀವನ ಚರಿತ್ರೆ..
Add to Cartತಿರುಪತಿಗೆ ಕೇವಲ 30ಕಿ.ಮೀ ದೂರದಲ್ಲಿರುವ ಅತ್ಯಂತ ಪುರಾತನವಾದ ದೇವಾಲಯದ ಲಿಂಗದ ಮೇಲೆ ಇರುವ ಕೆತ್ತನೆ ಒಬ್ಬ ಬೇಡನ ಪ್ರತಿರೂಪವೆ? ಹಾಗಿದ್ದಲ್ಲಿ ಆ ಲಿಂಗಕ್ಕೂ ಆ ಬೇಡನಿಗೂ ಯಾವ ಸಂಬಂಧ?ಮೆಹರ್ಗಂಜ್ನ ಬಲ್ಗಾಡಿಯ ಅರಮನೆಯನ್ನು ರಾಜ ತನ್ನ ಪ್ರೇಯಸಿಗೆ ಕಟ್ಟಿಸಿದ್ದು ಎಂದು ಹೇಳಲಾಗುತ್ತದೆ. ಆದರೆ ಆಕೆ ಏಕೆ ಅಲ್ಲಿ ನೆಲೆಸಲಿಲ್ಲ?ಪಶ್ಚಿಮ ಬಂಗಾಳದ ಮಾಲ್ಡದ ಬಳಿ ಆಳುತ್ತಿದ್ದ ರಾಜ ಗಣೇಶ್ಗೆ ಮುಸ್ಲಿಮ್ ರಾಜಕುವರ ಇರಲು ಹೇಗೆ ಸಾಧ್ಯ? ಆತ ಕಟ್ಟಿಸಿದ ಎನ್ನಲಾದ ಮುಸೋಲಿಯಮ್ನ ಮೂರು ಸಮಾಧಿಗಳಲ್ಲಿ ಒಂದು ಹಿಂದೂ ರಾಜನದ್ದೆ? ಆತ ಸಾಯುವ ಮುನ್ನವೆ ಏಕೆ ಅದನ್ನು ಕಟ್ಟಲಾಯಿತು? ಇತ್ತೀಚೆಗೆ ಎರಡನೆ ಮಹಾಯುದ್ಧದ ಪರಿಣಿತರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಪಂಚದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ, ಆ ಇಡೀ ಮಹಾಯುದ್ಧದಲ್ಲಿಯೇ ಅತೀ ಭೀಕರ ಕಾಳಗ ನಡೆದದ್ದು ಭಾರತದ ಈಶಾನ್ಯದಲ್ಲಿ ಎಂದು ತೀರ್ಮಾನಿಸಲಾಯಿತು. ಹಾಗಾದರೆ ಆ ಕಾಳಗ ನಡೆದದ್ದಾದರೂ ಎಲ್ಲಿ? ಏಕೆ? ಯಾರ ನಡುವೆ? ಇದರ ಪರಿಣಾಮಗಳ ಅರಿವು ನಮಗಿದೆಯೆ?ಇಂತಹ ಕುತೂಹಲಕರ ಚಾರಿತ್ರಿಕ ವಿಷಯಗಳ ಸುತ್ತ ಡಾ. ಗಣೇಶಯ್ಯ ಹೆಣೆದ ಕತೆಗಳ ಸಂಗ್ರಹ ಗುಡಿಮಲ್ಲಮ್...
Add to Cartಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’. ಯಾವುದೇ ಸಿದ್ಧಾಂತದ ವ್ಯಾಖ್ಯೆಗೂ ನಿಲುಕದ ಬದುಕಿನ ಒಳನೋಟಗಳ ಸಂಕೀರ್ಣ ವಿನ್ಯಾಸಗಳ ದರ್ಶನ ಮಾಡಿಸುವ ಈ ಕಾದಂಬರಿ, ಬದುಕಿಗೆ ಬದುಕೇ ಬರೆದ ಭಾಷ್ಯ.‘ಗೃಹಭಂಗ’ ಭಾರತದ ಎಲ್ಲ ಭಾಷೆಗಳಿಗೂ ಅನುವಾದವಾಗಿ ಎಲ್ಲ ಭಾಷೆಗಳ ಓದುಗರನ್ನು ಸೆರೆಹಿಡಿದು, ಸಮಕಾಲೀನ ಭಾರತೀಯ ಕಾದಂಬರಿಗಳಲ್ಲಿ ಅಗ್ರಮಾನ್ಯತೆ ಪಡೆದಿದೆ...
Add to Cartಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’. ಯಾವುದೇ ಸಿದ್ಧಾಂತದ ವ್ಯಾಖ್ಯೆಗೂ ನಿಲುಕದ ಬದುಕಿನ ಒಳನೋಟಗಳ ಸಂಕೀರ್ಣ ವಿನ್ಯಾಸಗಳ ದರ್ಶನ ಮಾಡಿಸುವ ಈ ಕಾದಂಬರಿ, ಬದುಕಿಗೆ ಬದುಕೇ ಬರೆದ ಭಾಷ್ಯ.‘ಗೃಹಭಂಗ’ ಭಾರತದ ಎಲ್ಲ ಭಾಷೆಗಳಿಗೂ ಅನುವಾದವಾಗಿ ಎಲ್ಲ ಭಾಷೆಗಳ ಓದುಗರನ್ನು ಸೆರೆಹಿಡಿದು, ಸಮಕಾಲೀನ ಭಾರತೀಯ ಕಾದಂಬರಿಗಳಲ್ಲಿ ಅಗ್ರಮಾನ್ಯತೆ ಪಡೆದಿದೆ...
Add to Cartಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...
Add to Cartಸಿನಿಮಾ ಬರಹಗಳೆಂದರೆ ಅದು ಸಾಹಿತ್ಯವಲ್ಲ, ಕೇವಲ ವರ್ಣರಂಜಿತ ಸುದ್ದಿಗಳು ಎನ್ನುವ ಭಾವನೆ ತುಂಬಾ ಹಿಂದಿನಿಂದಲೂ ಇದೆ. ಸಿನಿಮಾ ಮಾಧ್ಯಮ ಕೂಡ ಮೇಲೂ ನೋಟಕ್ಕೆ ಹಾಗೆ ಅನಿಸಿದರೂ ಕಥೆ, ಕವನ, ಕಾದಂಬರಿ ಅಥವಾ ಆತ್ಮ ಕಥೆಗಳ ಮೂಲಕ ಗಂಭೀರವಾದ ಸಾಹಿತ್ಯವೊಂದು ಕಟ್ಟಿಕೊಡುವ ಬದುಕಿನ ಅನುಭೂತಿ, ಸಿನಿಮಾದಲ್ಲೂ ಸಾಧ್ಯ ಎಂಬುದನ್ನು ‘ಗೇಟ್ ಕೀಪರ್’ ಪುಸ್ತಕ ಹೇಳುತ್ತದೆ. ಈ ಕೃತಿಯಲ್ಲಿ ಜಗತ್ತಿನ ಹತ್ತಾರು ಭಾಷೆ, ನೂರಾರು ಬದುಕಿನ ಒಳ ಚಿತ್ರಣಗಳ ಕಥನಾಗಳು ಇವೆ. ಅಂಥ ಕಥನಗಳ ಜತೆಗೆ ನಮ್ಮ ಸಿನಿಮಾ- ಬದುಕನ್ನೂ ಸಹ ಪಕ್ಕದಲ್ಲಿಟ್ಟು ನೋಡುವ ಸ್ಮೂಕ್ಷ್ಮ ಸಂವೇದನೆಯ ಪ್ರಯತ್ನವೂ ಇಲ್ಲಿದೆ. ಕನ್ನಡದ ಜತೆಗೆ ಬೆಂಗಾಲಿ, ಹಿಂದಿ, ಮರಾಠಿ, ಗುಜರಾತಿ, ಮಲಯಾಳಂ, ಇರಾನ್, ಕೊರಿಯಾ, ಫ್ರೆಂಚ್, ಇಟಲಿ, ಚೈನಾ, ಜಪಾನ್, ಬ್ರೆಜಿಲ್... ಹೀಗೆ ಜಗತ್ತಿನ ಹಲವು ಕ್ಲಾಸಿಕ್ ಚಿತ್ರಗಳ ಒಳ ನೋಟಗಳು ಇಲ್ಲಿವೆ. ಓದುವ ಅಭಿರುಚಿ ಹೊಂದಿದ ಓದುಗನೊಬ್ಬ ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಷ್ಟು ಕುತೂಹಲ, ರೋಚಕತೆ, ಅಭಿರುಚಿ ಮೂಡಿಸುವ ಸಿನಿಮಾ ಸಾಹಿತ್ಯ ಕೃತಿಯಿದು. ತೆರೆಯಲ್ಲಿ ಒಂದು ಸಿನಿಮಾ ಬಣ್ಣಗಳ ಮೂಲಕವೋ, ಸುಂದರವಾದ ಲೊಕೇಷನ್ ಮೂಲಕವೋ, ಭಾವನೆಗಳನ್ನು ಮೀಟುವ ಹಾಡುಗಳ ಮೂಲಕವೋ, ಮನಸ್ಸಿನ ಮೇಲೆ ಸವಾರಿ ಮಾಡುವಷ್ಟು ಚುರುಕಾದ ಸಂಭಾಷಣೆಗಳ ಮೂಲಕವೋ ಪ್ರೇಕ್ಷಕನನ್ನು ಹಿಡಿದಿಟ್ಟುಕೊಂಡು ಕೊನೆ ತನಕ ಸಾಗುವ ಹಾಗೆ ಕೃತಿಯ ಪ್ರತಿಯೊಂದು ಅಧ್ಯಾಯವೂ ಅಂತಹದ್ದೇ ಕುತೂಹಲ, ರೋಚಕತೆಯೊಂದಿಗೆ ಸಾಗುತ್ತವೆ ಎಂಬುದು ‘ಗೇಟ್ ಕೀಪರ್’ ಕೃತಿಯ ಹೆಚ್ಚುಗಾರಿಕೆ. ಸಿನಿಮಾ ಪ್ರೇಮಿಗಳಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ, ಜಗತ್ತಿನ ಕ್ಲಾಸಿಕ್ ಸಿನಿಮಾಗಳ ಮೋಡಿ ಒಳಗಾದವರಿಗೆ, ಈಗಷ್ಟೆ ಸಿನಿಮಾ ಕನಸು ಕಟ್ಟಿಕೊಂಡು, ಸಿನಿಮಾ ಕತೆಗಳ ಕಟ್ಟುವ ದಾರಿಯಲ್ಲಿರುವ ಉತ್ಸಾಹಿ ಸಿನಿ ಕೃಷಿಕರಿಗೆ ಈ ಪುಸ್ತಕ ಸದಾ ಜತೆಯಾಗಿರುವ ಅರ್ಹತೆಯನ್ನು ಹೊಂದಿದೆ...
Add to Cartಪ್ರಕಾಶಕರು : ನಿಮ್ಮ ಪುಸ್ತಕ ಪಬ್ಲಿಕೇಶನ್ಸ್ಪ್ರಕೃತಿಯ ಮಡಿಲಲ್ಲಿ ಬದುಕುವ ಮನುಷ್ಯ ತನ್ನ ಸುತ್ತಲಿನ ಪ್ರಕೃತಿಯ ಜೊತೆಗೆ ಒಂದು ರೀತಿಯ ಆದರ, ಪ್ರೀತಿ ಹೊಂದಿರುತ್ತಾನೆ. ತನ್ನ ಜೀವನಕ್ಕೆ ಸಹಾಯಕಾರಿಯಾಗುವ ದನ, ಎಮ್ಮೆ, ನಾಯಿ.. ಅಷ್ಟೇ ಏಕೆ ಮರಗಳ ಮೇಲೆಯೂ ಅಕ್ಕರೆ ಹೊಂದುತ್ತಾನೆ. ಪರಸ್ಪರ ಅವಲಂಬನದಿಂದ ಒಂದು ರೀತಿಯ ಅವಿನಾಭಾವ ಸಂಬಂಧ ಮೂಡುತ್ತದೆ. ಗಡಿನಾಡು ಕುಂಬಳೆಯ, ೧೯೮೦ ರ ದಶಕದ ಗ್ರಾಮೀಣ ಚಿತ್ರಣದೊಂದಿಗೆ, ಇಂತಹ ಸಂಬಂಧವನ್ನು ಪುಷ್ಟೀಕರಿಸುವ ಹಲವಾರು ಸತ್ಯಘಟನೆಗಳ ಆಧಾರಿತ ಚಿತ್ರಣವೇ ಈ ಕಥಾ ಸರಣಿ . ಓದಿರಿ, ಎಳೆಯನೊಬ್ಬನ ದೃಷ್ಟಿಕೋನದೊಂದಿಗೆ ಮೂಡಿದ ಸರಳ ಭಾಷೆಯ, ಗ್ರಾಮೀಣ ಸೊಗಡಿನ , ತಿಳಿ ಹಾಸ್ಯ ಲೇಪಿತ ಕಥಾ ಸರಣಿ "ಗೋವು, ಮಹಿಷಿ ಮತ್ತು ಮಹಾವೃಕ್ಷ "..
Add to Cartಸಮಾಜ, ಸಂಸಾರ, ವಿಜ್ಞಾನ, ವೇದಾಂತ, ಬಂಧನ, ಭಾವ ತೀವ್ರತೆ ಇವೆಲ್ಲವುಗಳಿಂದ ಆವರಿಸಲ್ಪಟ್ಟ ಕಥಾನಾಯಕ ಇವೆಲ್ಲವುಗಳಿಂದಾಚೆಗೆ ಜೀವನದ ಮೂಲ ಮತ್ತು ಗುರಿಯನ್ನು ಹುಡುಕುವ ಪಯಣವನ್ನುಗ್ರಸ್ತ ಕಾದಂಬರಿ ಕಟ್ಟಿಕೊಡುತ್ತದೆ. ಕರ್ಮ ಮತ್ತು ನನ್ನಿ ಕಾದಂಬರಿಯ ಮೂಲಕ ಜನಪ್ರಿಯರಾಗಿರುವ ಕರಣಂ ಪವನ್ ಪ್ರಸಾದ್ ಅವರ ಮೂರನೇ ಕಾದಂಬರಿ ಇದಾಗಿದೆ. ..
Add to Cartಗ್ರಹಣ, ಅಸತ್ಯವು ಸತ್ಯವನ್ನು ಆವರಿಸುವ ಕ್ರಿಯೆ. ಸಮಾಜೋದ್ಧಾರಕ್ಕೆ ಅಗತ್ಯವಾದುದು ವ್ಯಕ್ತಿಯ ವರ್ಚಸ್ಸೊ ಅಥವಾ ಸಂಘಟನೆಯ ಧ್ಯೇಯವೊ? ನಾಮರೂಪಾತ್ಮಕ ಪ್ರಪಂಚದ ಉಪಾಧಿಗಳು ಆತ್ಮೋನ್ನತಿಗೆ ತಡೆಗಳಾದರೆ ಅದೇ ಉಪಾಧಿಗಳು ಸಮಾಜೋದ್ದಾರದ ಸಾದನಗಳಾತ್ತವೆಯೆ?ಹೀಗೆ ಸನ್ಯಾಸಿಯ ಸತ್ಯಾನ್ವೇಷಣೆ ಮತ್ತು ಸಮಾಜದಲ್ಲಿ ಸ್ಥಾಪಿತವಾಗಿರುವ ನಂಬಿಕೆಗಳ ನಡುವೆ ಏರ್ಪಡುವ ಮೌಲ್ಯ ಸಂಘರ್ಷದ ವಿವಿಧ ಮಜಲುಗಳನ್ನು ಪರಾಮರ್ಶಿಸುವ ಕಾದಂಬರಿ ಗ್ರಹಣ...
Add to Cartಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು...
Add to Cartಸಮಕಾಲೀನ ಪ್ರಸ್ತುತತೆಯ ಸೋಗು ಅಥವಾ ಸ್ಲೋಗನ್ನುಗಳನ್ನು ಹಾಕದೆ ಕಂಬಾರರ ‘ಚಕೋರಿ’ ಒಂದು ದೊಡ್ಡ ಸಮಕಾಲೀನ ಅಗತ್ಯವನ್ನು ಪೂರೈಸುತ್ತದೆ. ಕಂಬಾರರ ಮಿಥಿಕ ದೃಷ್ಟಿ ನೈಜೀರಿಯಾದ ವೊಲೆ ಶೋಯಂಕಾನ ಮಿಥಿಕ ದೃಷ್ಟಿಯನ್ನು ಹಲವು ರೀತಿಯಲ್ಲಿ ಹೋಲುವಂಥದು. ಶೋಯಂಕಾ ತನ್ನ ಯರೂಬಾ ಬಣದ ಸ್ಮೃತಿಗಳನ್ನು ಆಧರಿಸಿ ಇವತ್ತಿನ ಜಾಗತಿಕ ಅನುಭವದ ಸ್ಥಿರಬಿಂದುಗಳನ್ನು ತನ್ನ ಕೃತಿಯ ಮುಖೇನ ಯುರೋಪಿನ ಮೇಲುಸಂಸ್ಕೃತಿಗಳ ಕಥನಕ್ಕೆ ಪ್ರತಿಯಾಗಿ ಕಟ್ಟಿದ್ದಾನೆ. ಕಂಬಾರರ ಮಿಥಿಕ ದೃಷ್ಟಿ ಯುರೋಪಿನ ಮೇಲುಸಂಸ್ಕೃತಿಗಳಿಗಿಂತ ಭಿನ್ನವಾಗಿರುವುದಲ್ಲದೆ ಭಾರತದ ಅಫಿಷಿಯಲ್ ಸಂಸ್ಕೃತಿ (ರಾಮಾಯಣ, ಮಹಾಭಾರತ ಇತ್ಯಾದಿ)ಗಳ ಅಂಚಿನ ದ್ರವ್ಯಗಳಿಂದ ನಿರ್ಮಾಣವಾದುದು. ಹೀಗೆ ಮೇಲು ಪರಂಪರೆಯ ಹಿಡಿತದಿಂದ ಪೂರ್ತಿ ಬಿಡಿಸಿಕೊಂಡ ಕವಿಗಳು ಈ ಶತಮಾನದಲ್ಲಿ ಇನ್ಯಾರೂ ನೆನಪಾಗುತಿಲ್ಲ. ಒಂದು ವಿಚಿತ್ರ ರೀತಿಯಲ್ಲಿ ಕಂಬಾರರು ಹರಿಹರ, ಚಾಮರಸ ಮತ್ತು ಜನಪದ ಕಾವ್ಯಗಳ ಪರಂಪರೆಯನ್ನು ಇನ್ನೊಂದು ಕಲಾತ್ಮಕ ಎತ್ತರಕ್ಕೆ ಒಯ್ದಿದ್ದಾರೆ. ಆದ್ದರಿಂದಲೇ ‘ಚಕೋರಿ’ಯ ಸಾಂಸ್ಕೃತಿಕ ಮೌಲ್ಯ ಅದರ ಕಾವ್ಯಾತ್ಮಕ ಮೌಲ್ಯದಷ್ಟೇ ಅಗ್ಗಳವಾದುದು. ಕನ್ನಡ ಕಾವ್ಯ ಪರಂಪರೆಗಳ ಅಪೂರ್ವಸಿದ್ಧಿಯಾಗಿ ಈ ಕೃತಿ ನಮ್ಮ ಮುಂದಿದೆ...
Add to Cartಇವು ಅಲ್ಲಲ್ಲಿ, ಆಗಾಗ ಬರೆದ ಬರಹಗಳ ಸಂಗ್ರಹ. ಪತ್ರಕರ್ತನಾದವನು ಇಂಥ ಬರಹಗಳನ್ನು ಸಂಗ್ರಹಿಸಿ ಇಡದಿದ್ದರೆ ಕೈಗೆ ಸಿಗದ ಪಾತರಗಿತ್ತಿಗಳಂತೆ ಹಾರಿಹೋಗುತ್ತವೆ. ಪ್ರತಿದಿನ ಬರೆದ ಎಲ್ಲ ಬರಹಗಳನ್ನು ಸಂಗ್ರಹಿಸಿಡಲು ಸಾಧವಿಲ್ಲ. ಎಲ್ಲ ಬರಹಗಳನ್ನು ಸಂಗ್ರಹಿಸಿಡುವ ಅಗತ್ಯವೂ ಇರುವುದಿಲ್ಲ. ಬರೆಯುವುದರ ಜತೆಗೆ ಸಂಗ್ರಹಕಾರನ ಕೆಲಸವನ್ನೂ ಮಾಡಬೇಕಾಗುತ್ತದೆ. ಇವು ಮಹತ್ತರ ಬರಹಗಳೆಂಬ ಯಾವುದೇ ಡೌಲು ನನ್ನಲ್ಲಿ ಇಲ್ಲ.ವಿಶೇಷ ಸಂಚಿಕೆಗಳಿಗೆ ಬರೆದ ಲಘು ಧಾಟಿಯ ಸಂಪಾದಕೀಯಗಳಿವು. ಸಂಪಾದಕೀಯ ಅಂದ ಕೂಡಲೇ ಹಠಾತ್ತನೆ ಗಂಭೀರವದನರಾಗಬೇಕಿಲ್ಲ. ಹಾಗಂತ ಇದು ಜಾಲಿ ಮೂಡಿನ ಬರಹಗಳೂ ಅಲ್ಲ. ಯಾವುದೇ ಪ್ರಕಾರದ ಬರಹಗಳಿರಲಿ, ಸಂಪಾದಕೀಯವೋ, ದಂತವೈದ್ಯವೋ, ಜ್ಯೋತಿಷ್ಯವೋ, ಅದು ಓದುಗನನ್ನು ಆವರಿಸಿಕೊಂಡು ಓದಿಸಿಕೊಳ್ಳಬೇಕು. ಅದು ಯಾವುದೇ ಬರಹದ ಮೂಲದ್ರವ್ಯ. ಆ ಹಿನ್ನೆಲೆಯಲ್ಲಿ ಮೂಡಿದ ಬರಹಗಳಿವು ಎಂಬ ಪ್ರವೇಶನುಡಿ ಸಾಕು. ಉಳಿದಂತೆ ಅನ್ನ ಬೆಂದಿದೆಯೋ, ಇಲ್ಲವೋ ಎಂಬುದನ್ನು ಹಿಚುಕಿನೋಡಲು ನೀವು ಇದ್ದೇ ಇದ್ದೀರಿ.ಎಲ್ಲೆಲ್ಲೋ ಚರುದಿಹೋದ ಮೋಡಗಳೆಲ್ಲ ಒಂದೆಡೆ ಸೇರಿದಾಗಲೇ ಮಳೆಯಾಗೋದು. ಚದುರಿಹೋಗುತ್ತಿದ್ದ ಬರಹಗಳೆಲ್ಲ ಇಲ್ಲಿ ಸೇರಿ ಪುಸ್ತಕವಾಗಿದೆ. ಒಂದಕ್ಕೊಂದು ಸಂಬಂಧವಿರದ ಲೇಖನಗಳಿವು. ಹೀಗಾಗಿ ಇವುಗಳನ್ನು ಆರಂಭದಿಂದ ಒಂದು ಕ್ರಮದಲ್ಲಿ ಓದಬೇಕೆಂದಿಲ್ಲ. ಯಾವ ಅಧ್ಯಾಯದಿಂದ ಬೇಕಾದರೂ ಓದಬಹುದು..
Add to Cartಹೊಡೆದಾಟ, ಸಾವು, ಬೆದರಿಕೆ, ಜಾತಿ ವೈಷಮ್ಯ, ದೆವ್ವ ಭೂತಗಳು, ಸುಲಿಗೆ, ಹಾದರ, ಹೀಗೇ ಜನಪ್ರಿಯ ಸಾಹಿತ್ಯದ ಎಲ್ಲ ಅಂಶಗಳನ್ನೂ, ಲಘು ಸಾಹಿತ್ಯದ ಹಾಸ್ಯ, ಹಾರಾಟದಂಥ ಅಂಶಗಳನ್ನೂ ಯಾವ ಸಂಕೋಚವೂ ಇಲ್ಲದೆ ಸಲೀಸಾಗಿ, ಮುಕ್ತವಾಗಿ ಬಳಸಿಕೊಳ್ಳುವ ತೇಜಸ್ವಿ ಅವುಗಳ ಸಕಾಲಿಕ ನಿರಾಕರಣೆಯಲ್ಲಿ ತೋರುವ ಕಲಾತ್ಮಕ ಜಾಣ್ಮೆ ಚಿದಂಬರ ರಹಸ್ಯವನ್ನು ಇತ್ತೀಚಿನ ಅತಿ ಮುಖ್ಯ ಕನ್ನಡದ ಕಾದಂಬರಿಗಳಲ್ಲಿ ಒಂದನ್ನಾಗಿ ಮಾಡಿದೆ..
Add to Cartಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು...
Add to Cartಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...
Add to Cartಬದುಕಿನಲ್ಲಿ ನಮಗೆ ಎದುರಾಗುವ ಅನೇಕ ನಕಾರಾತ್ಮಕ ಸಂಗತಿಗಳು ಸನ್ನಿವೇಶಗಳಿಂದ ಕೆಲವು, ಸ್ವಯಂಕೃತದಿಂದ ಮತ್ತೆ ಹಲವು ಉಂಟಾಗುತ್ತವೆ.ಇಂತಹ ಮೈನಸ್ ಅಥವಾ ದೌರ್ಬಲ್ಯ ಅಂಶಗಳನ್ನು ಬದುಕಿನಿಂದ ಅಳಿಸಿ, ಅಲ್ಲಿ ಪ್ಲಸ್ ಅಥವಾ ಶಕ್ತಿಯುತ ಅಂಶಗಳನ್ನು ಬಳಸಿದರೆ ಜಯ ನಿಶ್ಚಯ.ನಮ್ಮಲ್ಲಿ ಅಡಗಿರುವ ಅನೇಕ ನಕಾರಾತ್ಮಕ ಅಂಶಗಳನ್ನು ಹುಡುಕಿ ಹೊರಹಾಕಿದರೆ ಜೀವನದಲ್ಲಿ ಗೆಲುವು ಖಂಡಿತ.ಈ ಹೊತ್ತಗೆ ಓದಿದಾಗ, ಅಬ್ಬಾ! ಇಷ್ಟೊಂದು ನೆಗೆಟಿವ್ ಪಾಯಿಂಟುಗಳು ನಮ್ಮೊಳಗೆ ಇವೆಯಾ ಎನಿಸುತ್ತದೆ. ನಮ್ಮಲ್ಲಿನ ಪಾಜ್ಹಿಟಿವ್ ಪಾಯಿಂಟುಗಳನ್ನು ಹೊರತಂದು ಗೆಲ್ಲಬಹುದು...
Add to Cartಸೃಷ್ಟಿಶಕ್ತಿಯಿಂದ ವಿಜೃಂಭಿಸುವ ಜೀವನಪ್ರವೃತ್ತಿ ಮತ್ತು ಆ ಶಕ್ತಿಯನ್ನು ಹತ್ತಿಕ್ಕುವ ಜೀವನಪರಿಸ್ಥಿತಿಯ ತಾಕಲಾಟವೇ ‘ಜಲಪಾತ’ದ ಕಥಾವಸ್ತು. ನೀರು ಮತ್ತು ಮಣ್ಣಿನ ಶಕ್ತಿಯಿಂದ ಕಂಗೊಳಿಸುವ ವನಶ್ರೀ, ಗಂಡು ಹೆಣ್ಣುಗಳ ಮೂಲಶಕ್ತಿಯಾದ ಜೀವನವಿಕಾಸ, ಮತ್ತು ಬೌದ್ಧಿಕಸ್ತರದಲ್ಲಿ ಆವಿರ್ಭವಿಸುವ ಕಲಾಸೌಂದರ್ಯ-ಇವು ಮೂರು, ವಿವಿಧಸ್ತರಗಳಲ್ಲಿ ಪ್ರಕಟವಾಗುವ ಒಂದೇ ಮೂಲಶಕ್ತಿ ಎಂಬುದನ್ನು ಕಾದಂಬರಿಯ ಅಂಗಗಳಾಗಿ ಬೆಳೆದಿರುವ ಪ್ರತೀಕಗಳು ಎತ್ತಿತೋರಿಸುತ್ತವೆ. ಸಂಯೋಗದ ಕರೆ ಮತ್ತು ಕ್ರಿಯೆ, ಗರ್ಭದ ವಿಕಾಸ, ಜನನಕ್ಕೆ ಪೂರ್ವಭಾವಿಯಾದ ನೋವಿನ ಅನುಭವ, ಮೊದಲಾದ ಸೃಷ್ಟಿಯ ಹಲವು ಹಂತಗಳನ್ನು ಅನುಭವದ ಹೊಚ್ಚ ಹೊಸತನದಿಂದ ಭಾಷೆಯಲ್ಲಿ ಹಿಡಿದಿಡಲು ಅನುಕೂಲವಾಗುವಂತೆ ಕಾದಂಬರಿಯ ಕತೆಯು, ಅದರ ಮೂಲ ಪಾತ್ರಗಳಾದ ಒಂದು ಗಂಡು ಮತ್ತು ಅದರ ಹೆಣ್ಣಿನ ಸ್ವಂತ ಅನುಭವದ ವರ್ಣನೆಯ ರೀತಿಯಲ್ಲಿ ಸಾಗುತ್ತದೆ...
Add to Cartಕಳೆದ ಮೂರು ದಶಕಗಳಲ್ಲಿ ಬರೆದ ಕನ್ನಡದ ಕವಿ-ಕಾವ್ಯ, ಕತೆ-ಕಾದಂಬರಿ, ಜೀವ-ಜೀವನದ ಕುರಿತ ಬರಹಗಳ ಮೊದಲ ಕಟ್ಟು ಜಾನಕಿ with Love ಪ್ರಕಾಶಕರು : ಸಪ್ನಾ ಬುಕ್ ಹೌಸ್ಪುಟ- 568..
Add to Cartಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...
Add to Cartಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್A Collection of Humorous Moral Essays written by Gangavathi Pranesh..
Add to Cartಪರಸ್ಪರ ವೈರುಧ್ಯಗಳನ್ನೇ ಅದೃಶ್ಯ ತಂತುಗಳಿಂದ ಸಂಯೋಜಿಸುತ್ತಾ ಸಾಗುವ ಈ ಕಾದಂಬರಿಯೊಂದು ವಿಚಿತ್ರ ಮತ್ತು ಅಸಾಧಾರಣ ಕೃತಿ. ಜೀವನದ ವಿರಾಟ್ ಅರ್ಥಹೀನತೆಯ ಪರಿಧಿಯೊಳಗೇ ಅದರ್ ಆರ್ಥಪೂರ್ಣತೆಯನ್ನು ಅನ್ವೇಷಿಸುತ್ತದೆ. ಅಸಂಗತ ಘಟನಾವಳಿಗಳ ಸರಣಿಯನ್ನೇ ಸುಸಂಗತ ಕಥೆಯನ್ನಾಗಿ ನೇಯುತ್ತದೆ. ಚರಿತ್ರೆಯ ಅಪಹಾಸ್ಯವನ್ನು ತಿಳಿಹಾಸ್ಯ ಮತ್ತು ವಿನೋದಗಳಿಂದ ಪ್ರತಿರೋಧಿಸುತ್ತದೆ. ಶತಮಾನದ ಕಥೆಯನ್ನು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರತಿಮಿಸುತ್ತದೆ. ಜೀವನವನ್ನು ಎದುರಿಸಲು ಆಶಾವಾದ, ನಿರಾಶಾವಾದ ಇವುಗಳೆಲ್ಲವನ್ನೂ ಮೀರಿದ ಗಂಭೀರ ಎದೆಗಾರಿಕೆಯನ್ನು ಇದು ನಮಗೆ ತೋರಿಸಿಕೊಡುತ್ತದೆ...
Add to Cartಇದೊಂದು ಸಮಕಾಲೀನ ಸಮಸ್ಯೆ ಕುರಿತು ಬರೆದ ಕಾದಂಬರಿ. ‘ಮಯೂರ’ ಮಾಸ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದು ಬಹಳ ಜನಪ್ರಿಯತೆ ಗಳಿಸಿತು...
Add to Cartಗುರು ಕನ್ನಡದ ಅತ್ಯಂತ ಕ್ರಿಯಾಶೀಲ ಮನಸ್ಸುಗಳಲ್ಲಿ ಒಂದು. ಇಲ್ಲಿ ಹದಿನೆಂಟು ಬರಹಗಳಿವೆ. ಕೆಲವೊಂದು ಅಪ್ಪಟ ಕಥೆಗಳು. ಕೆಲವು ಅರಗತೆಗಳು, ಇನ್ನು ಕೆಲವು ಜೀವನದಲ್ಲಿ ನಡೆದ ಇಂಟ್ರೆಸ್ಟಿಂಗ್ ಘಟನೆಗಳು ಮತ್ತು ಕೊನೆಯಲ್ಲಿ ಅವರ ಒಂದು ಸಂದರ್ಶನ. ಆದರೆ ಈ ಎಲ್ಲ ಬರಹಗಳ ಮುಖ್ಯ ಲಕ್ಷಣವೆಂದರೆ ಓದಿಸಿಕೊಳ್ಳೋ ಗುಣ... ಹಿಡಿದಿಟ್ಟುಕೊಳ್ಳೋ ಕ್ವಾಲಿಟಿ...! ಹಾಗಂತ ತುಂಬಾ ಗಂಭೀರ ಗುರು ಅಂದ್ಕೋಬೇಡಿ.. ಗುರು ಮಹಾನ್ ತುಂಟ. ಹುಟ್ಟಾತರ್ಲೆ. ಆದರೆ ಈ ತುಂಟತನವೂ, ಈ ತರಲೆಯೂ ಎಲ್ಲರಿಗೂ ಸುಲಭವಾಗಿ ದಕ್ಕುವಂಥದಲ್ಲ.. ಕಾರಣ ಈ ತುಂಟತನದ ಹಿಂದೆ ಪ್ರಬುದ್ಧ ಮನಸ್ಸಿದೆ...
Add to Cartತನ್ನೂರು ಬಸವನಪುರದ ಚನ್ನಕೇಶವ ದೇವಾಲಯದಲ್ಲಿದ್ದ ದೊಡ್ಡ ಸರಸ್ವತಿ ವಿಗ್ರಹವನ್ನು ಕಳ್ಳಸಾಗಾಣೆದಾರರು ಮಾಯ ಮಾಡಿದ್ದಾರೆಂಬ ಸುದ್ದಿ ತಿಳಿದ ಪ್ರತ್ರಿಕಾಸಂಪಾದಕ ರವೀಂದ್ರ ಅಲ್ಲಿಗೆ ಹೋಗುತ್ತಾನೆ .ಅಲ್ಲಿಂದ ಆರಂಭವಾಗಿ ಇಡೀ ಸ್ವಾತಂತ್ರ್ಯೋತ್ತರ ಭಾರತದ ನಾಡಿಯ ಕಥೆಯು ಬೆಳೆಯುತ್ತದೆ. ಬೆಂಗಳೂರು, ಬಸವನಪುರ, ಜೋಗಿ ಹಳ್ಳಿ, ಮೈಸೂರು, ದಿಲ್ಲಿ, ಬನಾರಸ್, ಪಟ್ಣ, ಕಲ್ಕತ್ತಾ…., ಸಂಗೀತ , ಶಿಕ್ಷಣ, ವೃತ್ತಪತ್ರಿಕೆ, ಉದ್ಯಮ, ನಿರ್ಯಾತ, ಮೊದಲಾದ ವ್ಯಾಪ್ತಿಗಳಿಗೆ ಪಾತ್ರಗಳ ಸ್ವಂತ ಅನುಭವದ ಮೂಲಕ ಜೀವ ಕೊಟ್ಟು ಆಕಾರದ ಐಕ್ಯವನ್ನು ಸಾಧಿಸಿ ಈ ಕಾದಂಬರಿಯು ಸಮಕಾಲೀನ ವಸ್ತುವನ್ನು ಕಲೆಯಾಗಿಸುವ ನಿರ್ಲಿಪ್ತಿಯನ್ನು ಪಡೆದಿದೆ...
Add to Cart‘ನೀವೇ ನನ್ನ ಸೃಷ್ಟಿಕರ್ತರು‘ ಅನುಮಾನವೇ ಇಲ್ಲ. ‘ನೀವಿಲ್ಲದೇ ನಾವಿಲ್ಲ‘ ಅದು ಪೂರ್ತಿ ನಿಜವಲ್ಲ ‘ನನ್ನ ಬದುಕಿಗೆ ನೀವೇ ಹೊಣೆ‘ ನನಗೆ ನಾನೇಇಲ್ಲ ನಿನಗೆ ನೀನೇ. ‘ನನಗೋಸ್ಕರ ತ್ಯಾಗ ಮಾಡಿ‘ ಕೋಡಲಾರದ್ದನ್ನು ಕೇಳಬೇಡಿ. ‘ನಾನು ನಿಮ್ಮನ್ನೇ ನಂಬಿದ್ದೆನಲ್ಲ‘ ತಂದೆತಾಯಿ ದೇವರಲ್ಲ ‘ಪೂಜಿಸಿ ಫಲವಿಲ್ಲವೇ‘ ಪ್ರೀತಿಸುವುದೇ ಸರಿಯಲ್ಲವೇ...
Add to Cartಗೋವನ್ನು ಸರ್ವದೇವತೆಗಳ ಸ್ವರೂಪವೆಂದು ಪೂಜಿಸುವ ಕಾಳಿಂಗಜ್ಜ ಮತ್ತು ಅದು ಹಾಲು ಮಾಂಸಗಳನ್ನು ಕೊಡುವ ಪ್ರಾಣಿ ಮಾತ್ರ ಎಂದು ಭಾವಿಸುವ ಆಮೆರಿಕೆಯಿಂದ ಹಿಂತಿರುಗಿದ ಮೊಮ್ಮಗ, ಇವರ ಮೌಲ್ಯಸಂವೇದನೆಗಳ ನಡುವೆ ನಡೆಯುವ ತಿಕ್ಕಾಟವೇ ಈ ಕಾದಂಬರಿಯ ವಸ್ತು.ಪ್ರಾಯಶಃ ಭಾರತದ ಎಲ್ಲ ಭಾಷೆಗಳಲ್ಲೂ ಪ್ರಚಲಿತವಿರುವ ಗೋವಿನ ಹಾಡಿನ ಹಿನ್ನಲೆಯಲ್ಲಿ ಆರಂಭವಾಗುವ ಕಾದಂಬರಿಯು, ಭಾರತೀಯ ಸಂಸ್ಕೃತಿಯ ಮೂಲ ಬೇರುಗಳನ್ನು ಹಿನ್ನಲೆಯಲ್ಲಿ ಕಾಣಿಸುತ್ತದೆ. ಈ ಕೃತಿಯನ್ನಾಧರಿಸಿ ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಿಸಿರುವ ಚಲನ ಚಿತ್ರಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮನ್ನಣೆ ಪಡೆದಿವೆ. ಈ ಕಾದಂಬರಿಯ ಹಿಂದೀ ಅನುವಾದವೂ ಅಪಾರವಾದ ಮೆಚ್ಚುಗೆ ಪಡೆದಿದೆ.ಇದೊಂದು ಉತ್ಕೃಷ್ಟ ಸಾಹಿತ್ಯಕೃತಿ ಎಂದು ಭಾವಿಸುವವರಿರುವಂತೆಯೇ, ಪ್ರಗತಿವಿರೋಧಿ,ಪ್ರತಿಗಾಮಿ ಮೌಲ್ಯಗಳನ್ನು ಪ್ರತಿಪಾದಿಸುವ ತೀರ ಕಳಪೆ ಕಾದಂಬರಿ ಎಂದು ಇದನ್ನು ದೇಷಿಸುವವರೂ ಇದ್ದಾರೆ. ಪ್ರೀತಿ ದ್ವೇಷಗಳೆರಡನ್ನೂ ಪ್ರಚೋದಿಸುವ ಈ ಗುಣವು ಕಾದಂಬರಿಯ ಶಕ್ತಿಯ ಗುರುತಾಗಿದೆ...
Add to Cart‘ದಾಟು’ ಜಾತಿ ಸಮಸ್ಯೆಯನ್ನು ಕುರಿತು ಭಾರತೀಯ ಭಾಷೆಗಳಲ್ಲಿ ಬಂದಿರುವ ಕಾದಂಬರಿಗಳಲ್ಲೆಲ್ಲ ವಿಶಿಷ್ಟವಾದ ಕೃತಿ ಎಂದು ಪರಿಗಣಿತವಾಗಿದೆ. ಪಶ್ಚಿಮದಿಂದ ಎರವಲು ಪಡೆದ ಅಥವಾ ಸಮಕಾಲೀನ ರಾಜಕೀಯ ಒತ್ತಡದಿಂದ ಹುಟ್ಟಿದ ಸಿದ್ಧಾಂತಗಳನ್ನವಲಂಬಿಸದೆ ಸಾಂದ್ರವಾದ ಜೀವನಾನುಭವವನ್ನೊಳಗೊಂಡು ಭಾರತೀಯ ಸಾಮಾಜಿಕ ಪರಂಪರೆಯ ತಳಮುಟ್ಟುವ ವಿಶ್ಲೇಷಣೆಯನ್ನು ಸಾಧಿಸಿರುವ ಈ ಕೃತಿಯು ದಲಿತ ವಿಚಾರದ ಮೂಲನೆಲವಾದ ಮಹಾರಾಷ್ಟ್ರದಲ್ಲೂ ಅಪಾರ ಮನ್ನಣೆ ಪಡೆದಿದೆ.ಜೀವಂತ ಪಾತ್ರಗಳು, ಇಡೀ ಇತಿಹಾಸವನ್ನು ಧ್ವನಿಸುವ ಮಿತ್ಗಳ ಕಲಾತ್ಮಕ ಬಳಕೆ ಪರಂಪರೆಯೊಳಗೇ ಇರುವ ಕ್ರಾಂತ ದೃಷ್ಟಿಯ ಆವಿಷ್ಕಾರಗಳಿಂದ ‘ದಾಟು’ವು ಭಾರತೀಯ ಬರವಣಿಗೆಯ ಉತ್ತಮ ಮಾದರಿಯಾಗಿದೆ. ಭಾರತದ ಎಲ್ಲ ಭಾಷೆಗಳಿಗೂ, ಇಂಗ್ಲಿಷಿಗೂ ಅನುವಾದವಾಗಿದೆ...
Add to Cartಇಡೀ ವಿಶ್ವ, ಬ್ರಹ್ಮಾಂಡವೆ ಆಗಲಿ, ಅದರಲ್ಲಿನ ಜೀವ ಪ್ರಪಂಚವೆ ಆಗಲಿ, ಹಾಗೂ ಆ ಜೀವ ಪ್ರಪಂಚದ ಪ್ರಜ್ಞಾವರ್ತನೆಗಳೆ ಆಗಲಿ, ಎಲ್ಲವೂ ಒಂದಾನೊಂದು ರೀತಿಯಲ್ಲಿ ಯಾವುದೋ ಸುಳಿಗೆ ಸಿಕ್ಕಿ ವಿಕಾಸಗೊಂಡ ಪ್ರಕಾರಗಳು. ಹಾಗೆಯೇ, ವಿಜ್ಞಾನ, ಕಲೆ, ಸಾಹಿತ್ಯ, ಧರ್ಮ, ಇವೆಲ್ಲವೂ ಮಾನವನ ಪ್ರಜ್ಞೆಯ ಕೂಸುಗಳೇ ಆದರೂ, ಅವು ಆ ಪ್ರಜ್ಞೆಯನ್ನೇ ತಮ್ಮ ಸಂಕೋಲೆಗಳಲ್ಲಿ ಕಟ್ಟಿಹಾಕಬಲ್ಲ ಶಕ್ತಿ ಸುಳಿಗಳು ಎಂಬ ಕಟುಸತ್ಯವನ್ನು ಲೇಖಕರು ಇಲ್ಲಿ ಪರಿಚಯಿಸುತ್ತಾರೆ. ಜೀವ ಪ್ರಪಂಚದ ಹಲವಾರು ಆಯಾಮಗಳನ್ನು ಅರಿಯಲು ವೈಜ್ಞಾನಿಕ ಅಧ್ಯಯನದಲ್ಲಿ ನಿರತರಾಗಿದ್ದ ಲೇಖಕರು, ಕ್ರಮೇಣ ವಿಜ್ಞಾನದ ಹಾದಿಯಲ್ಲಿಯೇ ಹಲವು ಧಾರ್ಮಿಕ ವಸ್ತು-ವಿಷಯಗಳನ್ನೂ ಅವಲೋಕಿಸಲು ಮುಂದಾದಾಗ ಕಂಡುಕೊಂಡ ದಿವ್ಯಸುಳಿಗಳ ಪರಿಚಯವನ್ನು, ಆ ಪಯಣದ ಹೆಜ್ಜೆಗಳನ್ನೂ ಈ ಹೊತ್ತಿಗೆ ತೆರೆದಿಡುತ್ತದೆ. ಅವರೇ ಹೇಳುವ ಹಾಗೆ ಈ ಹೊತ್ತಿಗೆಯಲ್ಲಿ- ಪುರಾವೆಗಳನ್ನಾಧರಿಸಿದ ವೈಜ್ಞಾನಿಕ ವಿಷಯಗಳಿಂದ- ಕೇವಲ ತರ್ಕಗಳನ್ನೇ ಆಧರಿಸುವ ಶೋಧಗಳವರೆಗೆ ವೈವಿಧ್ಯಮಯ ವಸ್ತುಗಳ ನಡುವಿನ ಪ್ರಯಾಣವಿದೆ. ವಿಜ್ಞಾನ, ಚರಿತ್ರೆ ಹಾಗೂ ಪೌರಾಣಿಕ ವಿಷಯಗಳ ಸುತ್ತ ಕಥೆಕಾದಂಬರಿ ಹೆಣೆಯುವ ಡಾ.ಕೆ.ಎನ್.ಗಣೇಶಯ್ಯ, ದಿವ್ಯಸುಳಿಯಲ್ಲಿ ಅವೆಲ್ಲ ವಿಷಯಗಳ ಅಂತರಾಳದ ಸಂಬಂಧವನ್ನು ಕೆದಕಿ ತೆಗೆಯಲು ಪ್ರಯತ್ನಿಸಿದ್ದಾರೆ...
Add to Cartಆ ಕಾಲ-ವ್ಯಾಪಾರಕ್ಕೆಂದು ಬಂದ ಬ್ರಿಟಿಷರು, ಪೋರ್ಚುಗೀಸರು ಭಾರತೀಯ ರಾಜರುಗಳ ಒಳಜಗಳದ ಸುಸಂಧಿಯನ್ನೇ ಸಾಧಿಸಿ ‘ತಮ್ಮ ರೊಟ್ಟಿ ಜಾರಿ ಎಲ್ಲಿ ಬೆಣ್ಣೆಗೆ ಬೀಳುತ್ತದೆ’ ಎಂದು ಕಾಯುತ್ತಿದ್ದ ಕಾಲ. ದಕ್ಷಿಣದಲ್ಲಿ ಪ್ರಬಲರಾದ ಮರಾಠರು, ಹೈದರಾಬಾದಿನ ನಿಜಾಮ, ಮೈಸೂರು ಸಂಸ್ಥಾನದ ಸರ್ವಾಧಿಕಾರಿ ಹೈದರಾಲಿ-ಇವರ ನಿರಂತರ ಹೋರಾಟದ ಏಳು-ಬೀಳುಗಳನ್ನವಲಂಬಿಸಿ ತಮ್ಮ ಅಳಿವು-ಉಳಿವುಗಳನ್ನು ಕರ್ನಾಟಕದ ಎಲ್ಲ ಪಾಳೆಯಗಾರರು ನಿರ್ಧರಿಸುತ್ತಿದ್ದ ಪರ್ವಕಾಲ.ಹೈದರಾಲಿಯ ಬಿರುಗಾಳಿಯ ದಾಳಿಯನ್ನು ಎದುರಿಸಲಾಗದೆ, ತಮ್ಮ ಸರ್ವಸ್ವವನ್ನೂ ಅರ್ಪಿಸಿ ತಮ್ಮ ಪ್ರಾಣರಕ್ಷಣೆ ಮಾಡಿಕೊಳ್ಳುತ್ತಿದ ಪಾಳೆಯಗಾರರಿದ್ದಾಗ ತನ್ನ ಅಪ್ರತಿಮ ಶೌರ್ಯ-ಸಾಹಸಗಳಿಂದ, ಜನತೆಯ ಅಭಿಮಾನಕೋಟೆಯ ರಕ್ಷಾಬಲದಿಮ್ದ ಎಂದೂ ಸೋತು, ಶರಣಾಗದೆ ಸುಮಾರು ಎರಡು ವರ್ಷಗಳ ಕಾಲ ಹೈದರಾಲಿಗೆ ಸವಾಲಾಗಿ ನಿಂತು ಸೆಣಸಿದ ಏಕೈಕ ಗಂಡು ಪಾಳೆಯಗಾರ-ಚಿತ್ರದುರ್ಗದ ಮದಕರಿನಾಯಕ.ಮದಕರಿನಾಯಕನ ದುರಂತ-ಒಂದು ನಾಡಿನ ದುರಂತ; ಆ ಕಥೆಯನ್ನೇ ಹೇಳುವ ಈ ‘ದುರ್ಗಾಸ್ತಮಾನ’-ಆ ಕಾಲದ ಮೌಲ್ಯಗಳ ಅಸ್ತಮಾನವನ್ನೂ ಪರ್ಯಾಯವಾಗಿ ಧ್ವನಿಸುತ್ತದೆ. ಎಂದೋ, ಶತಮಾನಗಳ ಹಿಂದೆ ನಡೆದುಹೋಗಿರಬಹುದಾದ ಇತಿಹಾಸವನ್ನು, ತಮ್ಮ ಪ್ರತಿಭೆಯ ಪರಶುಮಣಿಸ್ಪರ್ಶದಿಂದ ಸುವರ್ಣಾಧ್ಯಾಯವನ್ನಾಗಿಸಿ, ಕಣ್ಣಿಗೆ ಕಟ್ಟುವಂತೆ ಪುನರ್ ಸೃಷ್ಟಿಸಬಲ್ಲ ಕಲ್ಪನಾಶಕ್ತಿ, ಕಲಾಕೌಶಲ ಇರುವುದು-ತ.ರಾ.ಸು. ಒಬ್ಬರಿಗೇ.ಸುಳಿಯಲ್ಲಿ ಸಿಕ್ಕವನಂತೆ ದುರಂತದೆಡೆಗೆ ಸಾಗುವ ಮದಕರಿನಾಯಕನ ಬದುಕಿನ ವಿವಿಧ ಮುಖಗಳು ಬಿಚ್ಚಿಕೊಳ್ಳುವ ಬೃಹತ್ವೇಶ್ಮದ ಮೇಲೆ ಎಲ್ಲ ರಸಗಳ ವರ್ಣಗಳನ್ನೂ ಬಳಸಿ ಚಿತ್ರಿಸುವಾಗ ಅರವತ್ತಮೂರರ ತ.ರಾ.ಸು. ಹದಿಹರೆಯದವರನ್ನೂ ನಾಚಿಸುವ ಬಿಸಿನೆತ್ತರ ಕಾವನ್ನು ಕಾರುತ್ತಿರುವಮ್ತೆ, ಪುಟಪುಟಗಳಲ್ಲೂ ತಮ್ಮ ಮಣ್ಣಿನ ಮೇಲಣ ಅಭಿಮಾನವನ್ನು ಅಭಿವ್ಯಕ್ತಿಸಿದಂತೆ ಕಾಣುತ್ತದೆ; ನೆತ್ತರು ಕುದಿಸುವ ತಮ್ಮ ಎಂದಿನ ಸಿಡಿಲಭಾಷೆಯಲ್ಲಿ, ಕಣ್ಣುಕೋರೈಸುವ ಮಿಂಚಿನ ಶೈಲಿಯಲ್ಲಿ, ಆಳ ಅನುಭವ-ಚಿಂತನಗಳ ರಸಪಾದಕಲ್ಲಿ ಈ ಕೃತಿಯನ್ನೊಂದು ರುದ್ರಾಧ್ಯಾಯವನ್ನಾಗಿಸಿದ್ದಾರೆ...
Add to Cartಗಂಡುಹೆಣ್ಣಿನ ಸಂಬಂಧದ ವಿಶ್ಲೇಷಣೆಯು ಪ್ರಪಂಚದ ಎಲ್ಲ ಪ್ರಮುಖ ಸಾಹಿತ್ಯ ಕೃತಿಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.ನಲವತ್ತೆಂಟು ವರ್ಷ ಕಳೆದರೂ ಪದೇ ಪದೇ ಮರುಮುದ್ರಣ ಕಾಣುತ್ತಾ ಸಾಗಿರುವ ಈ ಕೃತಿಯ ಸಶಕ್ತ ಸನ್ನಿವೇಶ, ಜೀವಂತ ಪಾತ್ರಚಿತ್ರಣ ಮೊದಲಾದ ಗುಣಗಳಿಂದ ನಮ್ಮನ್ನು ನೆನಪಿನಲ್ಲಿ ಮುಳುಗಿಸುತ್ತದೆ...
Add to Cartಸಾಮಾಜಿಕ, ರೋಚಕ, ಐತಿಹಾಸಿಕ ಕಾದಂಬರಿಗಳು ಕನ್ನಡಕ್ಕೆ ಹೊಸತಲ್ಲ. ಈ ಬಗೆಯ ಕಾದಂಬರಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಪರಿ ಮೆಚ್ಚುವಂಥದ್ದು, ಇದೀಗ ವೈಜ್ಞಾನಿಕ ಕಾದಂಬರಿಗಳು ಕನ್ನಡದಲ್ಲಿ ಅಲ್ಲಲ್ಲಿ ಸದ್ದು ಮಾಡುತ್ತಿರುವುದು ಕೂಡ ಸ್ವಾಗತಾರ್ಹ. ಈ ಬಗೆಯ ಕಾದಂಬರಿಗಳು ಕನ್ನಡದಲ್ಲಿ ಹೇರಳವಾಗಿ ಬಂದಷ್ಟು ಹೊಸ ತಲೆಮಾರಿನವರನ್ನು ಓದಿನತ್ತ ಸೆಳೆಯಬಹುದು. ಸದ್ಯಕ್ಕೆ ಈ ಬಗೆಯ ಪುಸ್ತಕಗಳು ಅಪರೂಪದಲ್ಲಿ ಅಪರೂಪ ಎಂಬಂತೆ ಇವೆ. ಆದರೆ ಈ ಕೊರತೆಯನ್ನು ನೀಗಿಸುವ ಒಂದು ಪ್ರಯತ್ನವನ್ನು ಡಾ. ಶಾಂತಲ ಅವರು ಮಾಡಿದ್ದಾರೆ. `ದೇವರಾಗಲು ಮೂರೇ ಗೇಣು' ಒಂದು ಅಪರೂಪದ ವೈಜ್ಞಾನಿಕ ಕಾದಂಬರಿ, ಸುಲಭವಾಗಿ ಓದಿಸಿಕೊಂಡು ಹೋಗುವ, ಕುತೂಹಲವನ್ನು ಕಾಯ್ದುಕೊಳ್ಳುವ, ವಿಜ್ಞಾನದ ಹಿನ್ನೆಲೆ ಇರದ ಸಾಮಾನ್ಯ ಓದುಗನೂ ಸರಳವಾಗಿ ಓದಬಹುದಾದ ಅದ್ಭುತ ಕಾದಂಬರಿ ಇದಾಗಿದೆ. ವಿಷಯವನ್ನಿಟ್ಟುಕೊಂಡು, ಇಷ್ಟೊಂದು ಸರಳವಾಗಿ ಪುಸ್ತಕವೊಂದನ್ನು ಬರೆಯಬಲ್ಲ ಡಾ. ಶಾಂತಲ ಅವರ ಪ್ರತಿಭೆಯನ್ನು ಮೆಚ್ಚಲೇ ಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಐವಿಎಫ್ ತಂತ್ರಜ್ಞಾನವು ಅಗಾಧವಾದ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಈ ಐವಿಎಫ್ ತಂತ್ರಜ್ಞಾನದ ಎಳೆಯನ್ನು ಇಟ್ಟುಕೊಂಡು ಡಾ. ಶಾಂತಲ ಅವರು ಸೊಗಸಾದ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡದಲ್ಲಿ ಹೊಸ ಬಗೆಯ ಕಾದಂಬರಿ ಒಂದನ್ನು ನೀವು ಓದಲು ಬಯಸಿದ್ದರೆ, ಹಾಗೂ ಮೊಟ್ಟ ಮೊದಲಬಾರಿಗೆ ಒಂದು ಪುಸ್ತಕವನ್ನು ಓದಬೇಕು ಎಂದು ಮನಸ್ಸು ಮಾಡಿದ್ದರು ದೇವರಾಗಲು ಮೂರೇ ಗೇಣು ನಿಮಗೆ ಹೇಳಿಮಾಡಿಸಿದ ಪುಸ್ತಕವಾಗಿದೆ...
Add to Cartಈ ಶತಮಾನ ಸಂಧ್ಯೆ ಹತ್ತಿರ ಹತ್ತಿರವಾಗುತ್ತಿದೆ. ಈ ಶತಮಾನದ ವಿಶೇಷವೇನೆಂದರೆ ಕ್ರಿಸ್ತ ಹುಟ್ಟಿದ ತರುವಾಯ ಶತಮಾನದೊಂದಿಗೆ ಮುಗಿಯುತ್ತಿರುವ ಎರಡನೆ ಮಿಲನಿಯಮ್. ಈ ಶತಮಾನದ ಅಂತ್ಯದಲ್ಲಿ ನಿಂತು ಇಪ್ಪತ್ತನೆಯ ಶತಮಾನವನ್ನು ಪರಿಭಾವಿಸಿದಾಗ ಕಂಡ, ಕೇಳಿದ, ಓದಿದ, ನೋಡಿದ ಕುತೂಹಲಕರ ರೋಮಾಂಚನ ವಿಚಾರಗಳನ್ನು ತೇಜಸ್ವಿಯವರು ನೆನಪಿನ ಲಹರಿಯ ಅಲೆದಾಟಕ್ಕನುಸಾರವಾಗಿ ಇಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಅವರು ಇಲ್ಲಿ ಪ್ರಸ್ತುತ ಪಡಿಸಿರುವ ವಿಷಯಗಳ ಬೇರುಗಳೂ ಬಿಳಲುಗಳೂ ಈ ಶತಮಾನವನ್ನು ಮೀರಿ ಮಿಲನಿಯಮ್ ವರೆಗೂ ವ್ಯಾಪಿಸಿರುವುದರಿಂದ ಈ ಸರಣಿಯ ದೇಶವಿದೇಶ - ೧ ಕೃತಿಯನ್ನು ಮಿಲನಿಯಮ್-೯ ಎಂದು ಕರೆದಿದ್ದೇವೆ...
Add to Cartಈ ಶತಮಾನ ಸಂಧ್ಯೆ ಹತ್ತಿರ ಹತ್ತಿರವಾಗುತ್ತಿದೆ. ಈ ಶತಮಾನದ ವಿಶೇಷವೇನೆಂದರೆ ಕ್ರಿಸ್ತ ಹುಟ್ಟಿದ ತರುವಾಯ ಶತಮಾನದೊಂದಿಗೆ ಮುಗಿಯುತ್ತಿರುವ ಎರಡನೆ ಮಿಲನಿಯಮ್. ಈ ಶತಮಾನದ ಅಂತ್ಯದಲ್ಲಿ ನಿಂತು ಇಪ್ಪತ್ತನೆಯ ಶತಮಾನವನ್ನು ಪರಿಭಾವಿಸಿದಾಗ ಕಂಡ, ಕೇಳಿದ, ಓದಿದ, ನೋಡಿದ ಕುತೂಹಲಕರ ರೋಮಾಂಚನ ವಿಚಾರಗಳನ್ನು ತೇಜಸ್ವಿಯವರು ನೆನಪಿನ ಲಹರಿಯ ಅಲೆದಾಟಕ್ಕನುಸಾರವಾಗಿ ಇಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಅವರು ಇಲ್ಲಿ ಪ್ರಸ್ತುತ ಪಡಿಸಿರುವ ವಿಷಯಗಳ ಬೇರುಗಳೂ ಬಿಳಲುಗಳೂ ಈ ಶತಮಾನವನ್ನು ಮೀರಿ ಮಿಲನಿಯಮ್ ವರೆಗೂ ವ್ಯಾಪಿಸಿರುವುದರಿಂದ ಈ ಸರಣಿಯ ದೇಶವಿದೇಶ - ೧ ಕೃತಿಯನ್ನು ಮಿಲನಿಯಮ್-೯ ಎಂದು ಕರೆದಿದ್ದೇವೆ...
Add to Cartಈ ಶತಮಾನ ಸಂಧ್ಯೆ ಹತ್ತಿರ ಹತ್ತಿರವಾಗುತ್ತಿದೆ. ಈ ಶತಮಾನದ ವಿಶೇಷವೇನೆಂದರೆ ಕ್ರಿಸ್ತ ಹುಟ್ಟಿದ ತರುವಾಯ ಶತಮಾನದೊಂದಿಗೆ ಮುಗಿಯುತ್ತಿರುವ ಎರಡನೆ ಮಿಲನಿಯಮ್. ಈ ಶತಮಾನದ ಅಂತ್ಯದಲ್ಲಿ ನಿಂತು ಇಪ್ಪತ್ತನೆಯ ಶತಮಾನವನ್ನು ಪರಿಭಾವಿಸಿದಾಗ ಕಂಡ, ಕೇಳಿದ, ಓದಿದ, ನೋಡಿದ ಕುತೂಹಲಕರ ರೋಮಾಂಚನ ವಿಚಾರಗಳನ್ನು ತೇಜಸ್ವಿಯವರು ನೆನಪಿನ ಲಹರಿಯ ಅಲೆದಾಟಕ್ಕನುಸಾರವಾಗಿ ಇಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಅವರು ಇಲ್ಲಿ ಪ್ರಸ್ತುತ ಪಡಿಸಿರುವ ವಿಷಯಗಳ ಬೇರುಗಳೂ ಬಿಳಲುಗಳೂ ಈ ಶತಮಾನವನ್ನು ಮೀರಿ ಮಿಲನಿಯಮ್ ವರೆಗೂ ವ್ಯಾಪಿಸಿರುವುದರಿಂದ ಈ ಸರಣಿಯ ದೇಶವಿದೇಶ - ೧ ಕೃತಿಯನ್ನು ಮಿಲನಿಯಮ್-೯ ಎಂದು ಕರೆದಿದ್ದೇವೆ...
Add to Cartಈ ಶತಮಾನ ಸಂಧ್ಯೆ ಹತ್ತಿರ ಹತ್ತಿರವಾಗುತ್ತಿದೆ. ಈ ಶತಮಾನದ ವಿಶೇಷವೇನೆಂದರೆ ಕ್ರಿಸ್ತ ಹುಟ್ಟಿದ ತರುವಾಯ ಶತಮಾನದೊಂದಿಗೆ ಮುಗಿಯುತ್ತಿರುವ ಎರಡನೆ ಮಿಲನಿಯಮ್. ಈ ಶತಮಾನದ ಅಂತ್ಯದಲ್ಲಿ ನಿಂತು ಇಪ್ಪತ್ತನೆಯ ಶತಮಾನವನ್ನು ಪರಿಭಾವಿಸಿದಾಗ ಕಂಡ, ಕೇಳಿದ, ಓದಿದ, ನೋಡಿದ ಕುತೂಹಲಕರ ರೋಮಾಂಚನ ವಿಚಾರಗಳನ್ನು ತೇಜಸ್ವಿಯವರು ನೆನಪಿನ ಲಹರಿಯ ಅಲೆದಾಟಕ್ಕನುಸಾರವಾಗಿ ಇಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಅವರು ಇಲ್ಲಿ ಪ್ರಸ್ತುತ ಪಡಿಸಿರುವ ವಿಷಯಗಳ ಬೇರುಗಳೂ ಬಿಳಲುಗಳೂ ಈ ಶತಮಾನವನ್ನು ಮೀರಿ ಮಿಲನಿಯಮ್ ವರೆಗೂ ವ್ಯಾಪಿಸಿರುವುದರಿಂದ ಈ ಸರಣಿಯ ದೇಶವಿದೇಶ - ೧ ಕೃತಿಯನ್ನು ಮಿಲನಿಯಮ್-೯ ಎಂದು ಕರೆದಿದ್ದೇವೆ...
Add to Cartಮನುಷ್ಯ ಮೂಲತಃ ಅಹಂಕಾರಿ. ತನ್ನ ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬ ಹಮ್ಮು.ತನ್ನನ್ನು ತಾನು ಬುದ್ಧಿವಂತ ಮಾನವ ಎಂದು ಕರೆದುಕೊಳ್ಳುವ ಆತ್ಮವಿಶ್ವಾಸ. ಆದರೆ ಇವನು ತನ್ನ ಕಣ್ಣಿಗೆ ಕಾಣುವುದಷ್ಟೇ ಸತ್ಯ ಎಂದು ಭಾವಿಸಿದ್ದ. ಕಾಲಕ್ರಮೇಣ ತನ್ನ ಬರಿಗಣ್ಣಿಗೆ ಕಾಣುವ ಜಗತ್ತಿಗಿಂತ ಭಿನ್ನವಾದ ಅದೃಶ್ಯ ಲೋಕವೊಂದಿದೆ ಎಂಬ ಮಾಹಿತಿ ಇವನನ್ನು ಆಶ್ಚರ್ಯಚಕಿತನನ್ನಾಗಿಸಿತು. ಇಲ್ಲಿರುವ ಅಗೋಚರ ಜೀವಿಗಳು, ಈ ಅಗೋಚರ ಜೀವಿಯು ಮನುಷ್ಯನಿಗೆ ಅವನಿಗರಿವಿಲ್ಲದಂತೆಯೇ ನೆರವು ನೀಡುತ್ತಾ ಸಹಬಾಳ್ವೆ ನಡೆಸುವ ರೀತಿ ಇವನನ್ನು ದಂಗುಬಡಿಸಿತು! ಎಲ್ಲಕ್ಕಿಂತಲೂ ಮಹತ್ವದ ವಿಷಯವೆಂದರೆ ತನಗೆ ಬರುವ ಸೋಂಕು ರೋಗಗಳಿಗೆ ದೇವರ ಕೋಪ ಇಲ್ಲವೇ ದೆವ್ವದ ಶಾಪ ಕಾರಣವಲ್ಲ; ನಮ್ಮ ಬರಿಗಣ್ಣಿಗೆ ಕಾಣದ ಅಗೋಚರ ಜೀವಿಗಳು ಎಂಬ ಮಾಹಿತಿ, ಇವನ ಬದುಕುವ ದಿಕ್ಕನ್ನೇ ಬದಲಿಸಿತು. ಮನುಷ್ಯನು ತನ್ನ ಸಂಘಟನಾ ಶಕ್ತಿಯಿಂದ ಸಿಡುಬನ್ನು ನಿರ್ಮೂಲನ ಮಾಡಿದನು. ಹಾಗೆಯೇ ಇತರ ಜೀವಿಗಳನ್ನೂ ನಿರ್ನಾಮ ಮಾಡಬಲ್ಲೆ ಎಂದು ಗರ್ವದಿಂದ ಹೇಳಿದನು. ಆದರೆ ಮಲೇರಿಯ, ಟೈಫಾಯ್ಡ್, ಕ್ಷಯ ಮುಂತಾದ ರೋಗಕಾರಕಗಳು ತಿರುಗಿ ಬಿದ್ದು ಇವನ ಅಹಂಕಾರಕ್ಕೆ ತಕ್ಕ ಪಾಠವನ್ನು ಕಲಿಸುತ್ತಿವೆ. ಇದೊಂದು ಹೋರಾಟ... ನಿರಂತರ ಹೋರಾಟ... ಎಂದೆಂದಿಗೂ ಮುಗಿಯದ ಕುರುಕ್ಷೇತ್ರ! ಮನುಷ್ಯನ ಕಣ್ಣಿಗೆ ಕಾಣುವ ಜಗತ್ತಿಗಿಂತ ಭಿನ್ನವಾದ ಅದೃಶ್ಯ ಲೋಕವೊಂದಿದೆ, ಇಲ್ಲಿರುವ ಅಗೋಚರ ಜೀವಿಗಳು ಮನುಷ್ಯನಿಗೆ ಅರಿವಿಲ್ಲದಂತೆಯೇ ನೆರೆವು ನೀಡುತ್ತಾ ಸಹಬಾಳ್ವೆ ನಡೆಸುವ ರೀತಿ ಮತ್ತು ಇತರೇ ವಿಷಯಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ...
Add to Cartಖಂಡವಿದೆಕೋ ಮಾಂಸವಿದೆಕೋ ಎನ್ನುತ್ತ ತಮ್ಮ ಕಥೆಗಳನ್ನು ಕನ್ನಡಿಗರಿಗೆ ಕೊಟ್ಟವರು ದೇವನೂರ ಮಹಾದೇವ. ಅಲ್ಲಿಂದ ಕೆಲಕಾಲ ಕಳೆದ ಮೇಲೆ ‘ಒಡಲಾಳ’ ಎಂಬೊಂದು ಕಥೆ ಬರೆದರು. ಓದಿದವರಿಗೆ ಗಂಗು ಹಿಡಿಸುವ ಕಥೆ. ಸಾಕವ್ವ ಅವಳ ಮಕ್ಕಳು ಮೊಮ್ಮಕ್ಕಳು ಕನ್ನಡ ಪ್ರಜ್ಞೆಯೊಳಗೆ ಬಂದು ಕುಳಿತರು. ಸಾಕವ್ವ ಹೇಳುವ ಯಮದವರ ಕತೆಗಾಗಿ ಜಾನಪದ ಪಂಡಿತರು, ಪುಟಗೌರಿ ನವಿಲಿನ ಚಿತ್ರಕ್ಕಾಗಿ ಕಲೆಗಾರರು, ದುಷ್ಟಿಕಮೀಷನರಿಗಾಗಿ ಸಾಹಿತ್ಯ ವಿಮರ್ಶಕರು, ಕತ್ತಲ ಲೋಕದಲ್ಲಿ ಪಳಾರನೆ ಗಡಿಯಾರದ ಮಿಂಚು ಮಿಂಚಿಸುವ ಗುರುಸಿದ್ಧನಿಗಾಗಿ ಬಂಡಾಯಗಾರರು ಹುಡುಕಾಟ ಮುಂದುವರೆಸಿದ್ದಾರೆ. ಒಡಲಾಳದ ಶಿವು ಈಗ ಈ ಕತೆಯನ್ನು ಓದುತ್ತಿರಬಹುದು. ಆ ಕತೆಯಲ್ಲಿ ತನ್ನ ಮಾದರಿಯನ್ನು ಕಂಡುಕೊಳ್ಳುತ್ತಿರಬಹುದು. ಒಡಲಾಳದಂತಹ ಕೃತಿಗಳು ಮಾತ್ರವೇ ಒಂದು ಸಂಸ್ಕೃತಿಯಲ್ಲಿ ಕ್ರಿಯಾವರ್ತನೆಗಳನ್ನು ಹುಟ್ಟಿಹಾಕಬಲ್ಲವು. ಕೃತಿಯನ್ನು ಅರಿಯಲು ಲೋಕದ ಮಾನದಂಡವಗಳನ್ನು ಹುಡುಕುವ ನಮಗೆ ‘ಅಯ್ಯಾ ಹಾಗಲ್ಲ ಈ ಕೃತಿಯ ಮೂಲಕ ಲೋಕವನ್ನು ಅರಿಯಲು ಸಾಧ್ಯವೇ ನೋಡು’ ಎಂದು ಇಂಥ ಕೃತಿಗಳು ಕೇಳುತ್ತವೆ...
Add to Cartಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...
Add to Cartಹಿಂದೂಸ್ಥಾನಕ್ಕೆ ಹೊರಗಿನಿಂದ ಅಲೆಯಲೆಯಾಗಿ ಬಂದ ಜನಕ್ಕೆ ಲೆಕ್ಕವಿಲ್ಲವಾದರೂ ಅವರಲ್ಲಿ ಬಹುಭಾಗ ಜನರು ಸಾಂಸ್ಕೃತಿಕವಾಗಿ ಇಲ್ಲಿಯವರೇ ಆದರು. ರಾಷ್ಟ್ರಕ್ಕೆ ಹೊರಗಿನಿಂದ ಬಂದ ಮತಪ್ರಚಾರಕರು ಮಾತ್ರ ಇಲ್ಲಿಯ ಸಂಸ್ಕೃತಿಗೆ ತದ್ವಿರುದ್ಧವಾದ ಬೇರೊಂದು ಸಂಸ್ಕೃತಿಯನ್ನು ಬಿತ್ತಲು ಪ್ರಯತ್ನಿಸಿದರು. ಮತಾಂತರವು ಕೆಲವು ವ್ಯಕ್ತಿಗಳ ಜೀವನದಲ್ಲಿ ಕ್ವಚಿತ್ತಾಗಿ ನಡೆಯುವ ಘಟನೆಯಲ್ಲ. ಅದೊಂದು ಸಾಂಸ್ಕೃತಿಕ ಘರ್ಷಣೆ. ಭಾರತೀಯ ಪರಂಪರೆಯಲ್ಲಿ ಧರ್ಮ, ಸಂಸ್ಕೃತಿ, ಎರಡೂ ಅವಿಭಿನ್ನವಾದ ರೂಪಗಳು. ಮತಾಂತರದಿಂದ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಯ ಸ್ವರೂಪವೆಂತಹುದು ಎಂಬುದೇ ‘ಧರ್ಮಶ್ರೀ’ಯ ವಸ್ತು. ನಾಯಕನ ಜೀವನ ಮತ್ತು ಸಮಸ್ಯೆ , ಎರಡೂ ಒಂದೇ ಆಗಿವೆ...
Add to Cartಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...
Add to Cartಕೈಲಾಸಂರ ಮಾತು, ಜೀವನದಲ್ಲಿ ನಡೆಯೋ ಘಟನೆಗಳನ್ನ ವಕ್ರದೃಷ್ಟಿಯಿಂದ ನೋಡಿದರೆ ಹಾಸ್ಯ ಹುಟ್ಟುತ್ತೆ, ಜೀವನವನ್ನೇ ವಕ್ರದೃಷ್ಟಿಯಿಂದ ನೋಡಿದರೆ ಆಧ್ಯಾತ್ಮ ಹುಟ್ಟುತ್ತೆ... “ನಗ್ತಾ ನಲಿ ಅಳ್ತಾ ಕಲಿ" ಈ ಮಾತನ್ನು ನೆನಪಿಸುತ್ತೆ. ಪ್ರಾಣೇಶರ ಪಂಚುಗಳು ಅವು ಹಾಸ್ಯವೇ ಆಗಿರಲಿ, ಜೀವನ ದರ್ಶನವೇ ಆಗಿರಲಿ, ಅವರಿಗೆ ದಕ್ಕಿರುವುದು ಅವರ ಜೀವನಾನುಭವ, ಪರಿಸರ ಮತ್ತು ದೇಶವಿದೇಶಗಳ ಸುತ್ತಾಟಗಳಿಂದ.ಹಾಗೆ ಕಲಿತ ಪಾಠಗಳನ್ನು ಪಾಕ ಮಾಡಿ, ಭಟ್ಟಿ ಇಳಿಸಿಕೊಂಡು ಗುಳಿಗೆ ಗುಳಿಗೆಯಾಗಿ ತಮ್ಮ ಹಾಸ್ಯಕಾರ್ಯಕ್ರಮಗಳ ಮೂಲಕ ಮತ್ತು ಲೇಖನಗಳ ಮೂಲಕ ಹಂಚಿಕೊಂಡು ತಾನು ಸವಿದ ಸವಿಯನ್ನು ಇತರರಿಗೂ ಹಂಚುವ ಕೈಂಕರ್ಯ ಹುಬ್ಬೇರಿಸುತ್ತದೆ.“ನೋಡಿದ್ದು ನೆನಪಿರುವುದಿಲ್ಲ, ಕೇಳಿದ್ದು ಕರುಳಿಗೆ ತಟ್ಟುತ್ತದೆ."“ಪ್ರಶ್ನೆಗೆ ಉತ್ತರ ಯಾರನ್ನೂ ಕೇಳಬಾರದು; ಹುಡುಕಿಕೊಳ್ಳಬೇಕು."“ಕಾಲಿಗೆ ಮೆಟ್ಟಿಲ್ಲದಿದ್ದರೂ, ಕೈನಲ್ಲಿರೋ ಮೊಬೈಲಿಗೆ ನೆಟ್ ಇಲ್ಲವೆಂದು ಮುಳ್ಳಿನ ಹಾದಿಯಲ್ಲಿ ನಡೆಯುವವರು"“ನಗ್ತಾ ನಲಿ ಅಳ್ತಾ ಕಲಿ" ಕೃತಿಯಲ್ಲಿ ಬರುವ ಇಂತಹ ಅನೇಕ ಮಾತುಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.ನಗುವೇ ಅಂತಿಮವಲ್ಲ ಮಗುವೇ, ನಗುವಿನ ನಂತರದ ಚಿಂತನೆ ಮುಖ್ಯ ಎಂಬ ಸಂದೇಶವನ್ನು ವಾಚ್ಯವಾಗಲ್ಲದೆ ಸೂಚ್ಯವಾಗಿ ತಿಳಿಸುವ ಕೃತಿ...
Add to Cartಪ್ರಥಮಾರ್ಧ ಅಲಾಸ್ಕ ಯಾತ್ರೆಯೂ, ದ್ವಿತೀಯಾರ್ಧ ವ್ಯಕ್ತಿ ಚಿತ್ರಗಳೂ, ತೃತೀಯಾರ್ಧ ಉಪಯುಕ್ತ ಬಿಡಿಬರಹಗಳೂ ಇರುವ ಅಂಕಣ ಮಾಲೆ. ಪಶ್ಚಿಮದ ಚಾಪ್ಲಿನ್, ಡಾರ್ವಿನ್; ಪೂರ್ವದ ಲೋಹಿಯಾ, ಅಂಬೇಡ್ಕರ್, ಸಿಜಿಕೆ, ಬಿ.ಎಂ.ಶ್ರೀ ಎಲ್ಲರನ್ನೂ ಬೆಸೆಯುವ ಸರಮಾಲೆ ಈ ಅಂಕಣಮಾಲೆ...
Add to Cartಕಾದ೦ಬರಿಯ ವಸ್ತು ಮೇಲ್ನೋಟಕ್ಕೆ 'ನನ್' ಒಬ್ಬಳ ಸತ್ಯಾನ್ವೇಷಣೆಯ೦ತೆ ಕ೦ಡರೂ, ಇದರ ವಸ್ತು ಮನುಷ್ಯನ ಮೂಲ ಪ್ರವೃತ್ತಿಯ ಹುಡುಕಾಟವಾಗಿದೆ. ಸಮಕಾಲೀನವಲ್ಲದ, ಒ೦ದು ಪ್ರದೇಶದ ಸೀಮಿತ ವಸ್ತುವನ್ನು ಒಳಗೊಳ್ಳದ, ವಿಸ್ತಾರವಾಗಿ ಹರಡಿಕೊ೦ಡಿರುವ ಕಥಾವಸ್ತುವಿನಲ್ಲಿ, ಪ್ರತಿ ಪಾತ್ರವೂ 'ಸತ್ಯ ಎ೦ದರೆ ಸೂರ್ಯನಿದ್ದ೦ತೆ. ಹತ್ತಿರ ಹೋದರೂ ಸಾವು, ದೂರ ಹೋದರೂ ಸಾವು ಎ೦ಬುದನ್ನು ನಿರೀಕ್ಷಿಸುತ್ತದೆ. ವಸ್ತು, ಸಾಮಗ್ರಿ, ರಸಸೃಷ್ಟಿ, ಅಭಿವ್ಯಕ್ತಿ ಇವೆಲ್ಲದರ ಒಟ೦ದದ ಕಲಾಕೃತಿಯೇ 'ನನಿ'..
Add to Cartಮಾಸ್ತಿ ವೆಂಕಟೇಶ ಅಯ್ಯಂಗಾರ್ (ಜೂನ್ 6, 1891 - ಜೂನ್ 7, 1986) ಅವರು ಕನ್ನಡದ ಅಣ್ಣ! ವಿನಾಯಕ ಕೃಷ್ಣ ಗೋಕಾಕರು ಮಾಸ್ತಿಯವರನ್ನು ಕನ್ನಡದ ಆಸ್ತಿ ಎಂದು ಕರೆದರು. ಕುವೆಂಪು ಅವರು ‘ಮಾಸ್ತಿಯವರ ಸಾಹಿತ್ಯ ದೊಡ್ಡದು; ಅವರು ಅದಕ್ಕಿಂತಲೂ ದೊಡ್ಡವರೆಂದು ನನ್ನ ಭಾವನೆ‘ ಎಂದಿರುವ ಮಾತು ಅಕ್ಷರಶಃ ನಿಜ. ಮಾಸ್ತಿಯವರು ಬದುಕಿದ್ದು 95 ವರ್ಷಗಳು! ಇದರಲ್ಲಿ 65 ವರ್ಷಗಳ ಕಾಲ ಅವರು ಕನ್ನಡದಲ್ಲಿ ಬರೆದರು! ಇತರ ಸಾಹಿತಿಗಳಿಂದ ಕನ್ನಡ ಸಾಹಿತ್ಯ ಕೃತಿಗಳನ್ನು ಬರೆಯಿಸಿದರು. ಅನೇಕ ಜನರ ಪುಸ್ತಕಗಳು ಪ್ರಕಟವಾಗಲು ಹಣ ಸಹಾಯ ಮಾಡಿದರು ಇಲ್ಲವೇ ತಮ್ಮ ಸ್ವಂತ ಹಣದಿಂದ ಪ್ರಕಟಿಸಿದರು. ‘ಜೀವನ‘ ದಂತಹ ಮಾಸಪತ್ರಿಕೆಯನ್ನು 21 ವರ್ಷಗಳ ಕಾಲ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಕರ್ನಾಟಕದಲ್ಲಿ ಕನ್ನಡ ಜಾಗೃತಿಯನ್ನುಂಟು ಮಾಡಿದರು. ಮಾಸ್ತಿಯವರು ಸುಮಾರು 15,000 ಪುಟಗಳ ಸಾಹಿತ್ಯವನ್ನು ಕನ್ನಡಿಗರಿಗೆ ಬಿಟ್ಟುಹೋಗಿದ್ದಾರೆ ಎಂದರೆ ಅವರ ಪ್ರತಿಭೆ ಎಂತಹ ದೈತ್ಯ ಸ್ವರೂಪದ್ದಾಗಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು. ಅವರ ಗದ್ಯ ಶೈಲಿ ಎಷ್ಟು ಸರಳವಾಗಿದೆ, ಎಷ್ಟು ಆಕರ್ಷಕವಾಗಿದೆ ಎಂದರೆ, ಅಂತಹ ಶೈಲಿಯನ್ನು ರೂಪಿಸಿಕೊಂಡ ಮತ್ತೊಬ್ಬ ಸಾಹಿತಿ ಅಪರೂಪ. ಮಾಸ್ತಿಯವರ ಬದುಕನ್ನು ಶ್ರೀ ಟಿ.ಎಸ್.ಗೋಪಾಲ್ ಅವರು ಈ ಪುಸ್ತಕದಲ್ಲಿ ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ...
Sold outದತ್ತಾತ್ರೇಯ ರಾಮಚಂದ್ರ ಬೇಂದ್ರೆ (ಜನವರಿ 31, 1986- ಅಕ್ಟೋಬರ್ 26, 1981) ಕನ್ನಡ ಸಾಹಿತ್ಯದ ನವೋದಯ ಕವಿ. ವರಕವಿ. ಮೊದಲ ಬಾರಿಗೆ ಕನ್ನಡಕ್ಕೆ ಪೂರ್ಣ ಪ್ರಮಾಣದ ಜ್ಞಾನಪೀಠವನ್ನು ತಂದವರು. ಕನ್ನಡ ಕಾವ್ಯಕ್ಕೆ ನಿಜವಾದ ಅರ್ಥದಲ್ಲಿ ಗೇಯತೆಯನ್ನು, ಲಾಲಿತ್ಯವನ್ನು, ಮಾಧುರ್ಯವನ್ನು ಬೇಂದ್ರೆಯವರು ತಂದರು. ಜನಸಾಮಾನ್ಯರ ಪದಗಳನ್ನು ಆರಿಸಿಕೊಂಡು, ಅವುಗಳನ್ನು ಅಧ್ಯಾತ್ಮದ ಔನ್ನತ್ಯಕ್ಕೆ ಏರಿಸಿದರು. ತಮ್ಮ ಜೀವಮಾನದ ಕೊನೆದಿನಗಳಲ್ಲಿ ಸಂಖ್ಯಾಶಾಸ್ತ್ರದ ಮೋಡಿಗೊಳಗಾಗಿ ಅವರು ಬರೆದ ಪದ್ಯಗಳು ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾದವು ಎನ್ನುವುದು ನಿಜ. ಬೇಂದ್ರೆಯವರು ಒಂದು ಬಹು ದೊಡ್ಡ `ದೌರ್ಬಲ್ಯ`ವೆಂದರೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದ ಉಕ್ಕಿ ಹರಿಯುತ್ತಿದ್ದ ತಮ್ಮ ಭಾವನೆಗಳಿಗೆ ಒಂದು ಒಡ್ಡನ್ನು ಹಾಕಲು ಅಸಮರ್ಥರಾದದ್ದು. ಹಾಗಾಗಿಯೇ ಬೇಂದ್ರೆಯವರು ಯಾವುದೇ `ಮಹಾಕಾವ್ಯ`ವನ್ನು ಬರೆಯಲು ಹೋಗಲಿಲ್ಲ. ಅವರ ಬದುಕೇ ಯಾವ ಮಹಾಕಾವ್ಯಕ್ಕೂ ಕಡಿಮೆಯಿಲ್ಲ ಎನ್ನುವುದು ಬೇರೆಯ ಮಾತು. ಬೇಂದ್ರೆಯವರ ಕುರಿತ ಈ ಕೃತಿಯನ್ನು ಶ್ರೀ ಟಿ.ಎಸ್. ಗೋಪಾಲ್ ರಚಿಸಿದ್ದಾರೆ...
Add to Cart