“ಮಹಾಕ್ಷತ್ರಿಯ” ಒಂದು ಪೌರಾಣಿಕ ಕಾದಂಬರಿ. ದೇವುದು ಅವರ ಸುವರ್ಣ ಲೇಖನಿಯಿಂದ ರೂಪುತಾಳಿ ನಿಂತ ಅತಿ ಸುಂದರವಾದ ಕಾದಂಬರಿ. ಕನ್ನಡಕ್ಕೆ ಹೊಸತಾದ, ಅಷ್ಟೇ ಏಕೆ, ಭಾರತೀಯ ಸಾಹಿತ್ಯ ಭಂಡಾರಕ್ಕೆ ರತ್ನಪ್ರಾಯವಾದ ಕೃತಿ. ಮಹಾಕ್ಷತ್ರಿಯದಲ್ಲಿ ನಹುಷ ತನ್ನ ದೌರ್ಬಲ್ಯಗಳಿಂದ ಶಾಪಗ್ರಸ್ತನಾಗುತ್ತಾನೆ. ಆದರೆ ದೇವುಡು ಅವರ ನಹುಷ ಎಲ್ಲ ದೌರ್ಬಲ್ಯಗಳನ್ನೂ ಕಳೆದುಕೊಂಡ ಮಹೋನ್ನತ ವ್ಯಕ್ತಿ. ಇವನಲ್ಲಿಗೆ ಬಂದು ಇಂದ್ರಪದವಿಯನ್ನು ಅಲಂಕರಿಸಬೇಕೆಂದು ಆಹ್ವಾನಿಸುತ್ತಾರೆ. ಇಂದ್ರನಾಗಿ ಇವನು ನಡೆದುಕೊಂಡ ರೀತಿಯನ್ನು ಕಂಡ ದೇವತೆಗಳು ಇವನು ಅತೀಂದ್ರನೆಂದೂ ಶ್ಲಾಘಿಸುತ್ತಾರೆ. ಮಹಾಕ್ಷತ್ರಿಯದಲ್ಲಿ ದೇವುಡು ಒಬ್ಬ ಆದರ್ಶಮಾನವನನ್ನು ರೂಪಿಸಿದ್ದಾರೆ. ಕಲ್ಪನೆಯ ಮೂಸೆಯಲ್ಲಿ ಪುಟವಿಟ್ಟು ಪ್ರತಿಭಾಪೂರ್ಣ ಲೇಖನಿಯಿಂದ ಹೊರಬಂದಿರುವ ಈ ಪೌರಾಣಿಕ ಕಾದಂಬರಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ 1962ರಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ.
Author | |
Devudu | |
Publisher | |
Devudu Pratishtana |
Reviews
ಪ್ರತಿಯೊಬ್ವರು ಓದಲೇಬೇಕು