ನುಡಿ ಪಡಿ(ಗಂಗಾವತಿ ಪ್ರಾಣೇಶ್) - Nudi Padi(Gangavathi Pranesh)
- ₹180
ಗಂಗಾವತಿ ಬೀಚಿ ಎಂದೇ ಖ್ಯಾತರಾದ ಗೆಳೆಯ ಪ್ರಾಣೇಶ್ `ನುಡಿ ಪಡಿ'ಯಲ್ಲಿ ಸತ್ಯಕ್ಕೇ ಹೆಚ್ಚು ಒತ್ತು ನೀಡಿರುವುದು ಕಟ್ಟೆಯ ಕಲ್ಲು ಕಟ್ಟೆಗೆ ಸೇರಿದಂತಾಗಿದೆ.
“ಮಾತೆಂಬುದು ಜ್ಯೋತಿರ್ಲಿಂಗ” ಎಂದರು ಜಗಜ್ಯೋತಿ ಬಸವಣ್ಣನವರು. ಮಾತು ಜ್ಯೋತಿರ್ಲಿಂಗವಾಗಬೇಕಾದರೆ ಆಲೋಚನೆಗಳ ಹಣತೆಯಲ್ಲಿ ಅಧ್ಯಯನದ ತೈಲವನ್ನೆರೆದು ಸುಜ್ಞಾನದ ಬತ್ತಿಯನ್ನಿರಿಸಿ ಸುಬೋಧೆಯ ಕಿಡಿಯನ್ನು ತಾಗಿಸಿದರೆ ಮಾತ್ರ ಸಾಧ್ಯ.
ಪ್ರಾಣೇಶರ ಈ ಪುಸ್ತಕದಲ್ಲಿ ಹಲವಾರು ಪ್ರಖರ ವಿಷಯಗಳನ್ನು ಕುರಿತಾದ ಲೇಖನಗಳಿವೆ. ಇಂದಿನ ಜನಜೀವನದ `ಅತಿ'ಗಳನ್ನು ಹಿಂದಿನ ಕಾಲಘಟ್ಟದ `ಹಿತ'ಕ್ಕೆ ಹೋಲಿಸುವ ಪರಿಯು ಹಿಂದಿನ ಪೀಳಿಗೆಗೆ ಮುದವನ್ನೂ, ಇಂದಿನ ಪೀಳಿಗೆಗೆ ಎಚ್ಚರಿಕೆಯನ್ನೂ, ಮುಂದಿನ ಪೀಳಿಗೆಗೆ ಗತವೈಭವದ ಮೆಲುಕನ್ನೂ ನೀಡುವಲ್ಲಿ ಈ ಲೇಖನಗಳು ಸಲವಾಗಿವೆ.
“ನುಡಿ ಪಡಿ” ಪುಸ್ತಕದ ಹೆಸರೇ ಸೂಚಿಸುವಂತೆ ಇದು ನುಡಿಗಳ ಸೋಪಾನ. ಮಧ್ವರ ಬೋಧನೆಗಳಿಂದ ಹಿಡಿದು ಹೊರದೇಶದ ಆಚಾರ-ವಿಚಾರಗಳವರೆಗೆ ಹಬ್ಬಿರುವ ಈ ಸೋಪಾನದ ಮೆಟ್ಟಿಲುಗಳಲ್ಲಿ ಅನೇಕ ಬೋಧಪ್ರದ ವಿಷಯಗಳಿವೆ. ಹಳೆಯ ಚಿತ್ರಗೀತೆಗಳ ಸುಮಧುರ ಜಾಡಿನಲ್ಲಿ ದೊರಕುವ ಆನಂದದ ಪಲುಕುಗಳಿವೆ. ಪ್ರಾಣೇಶನೆಂಬ ಮಾಗಿದ ಮರವು ಬಿಟ್ಟಿರುವ ಈ “ನುಡಿ ಪಡಿ” ಎಂಬ ಲವು ರುಚಿಕರವಾಗಿದೆ, ಮೆಲ್ಲಲು ಯೋಗ್ಯವಾಗಿದೆ, ಚರ್ವಿತಚರ್ವಣಕ್ಕೆ ಗ್ರಾಸವಾಗಲು ಶಕ್ತವಾಗಿದೆ.
-ಎನ್. ರಾಮನಾಥ್
Reviews
There are no reviews for this product.