Special Offers
ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...
Add to Cart"ಸರ್ ಬಹಳ ದಿನಗಳಿಂದ ಈ ಪ್ರಶ್ನೆಯನ್ನು ಕೇಳ್ಬೇಕು ಅಂತ ಇದ್ದೆ. ಜೊತೆಗಿದು ನನ್ನ ಪರ್ಸನಲ್ ಪ್ರಶ್ನೆ ಕೂಡ 'ಎಂದು ಸಣ್ಣಗೆ ನಕ್ಕ ಶೀತಲ್ ತನ್ನ ಮಾತನ್ನು ಮುಂದುವರೆಸಿನಿಮ್ಮ ಈ ಹಿಂದಿನ ಪ್ರತಿ ಕಾದಂಬರಿಗಳಲ್ಲಿ ಮಿನಿಮಮ್ ಎಂದರೂ ನಾಲೈದು ಕೊಲೆಗಳಾಗಿರುತ್ತವೆ. ಆ ಕೊಲೆಗಳನ್ನು ನೀವು ಸೃಷ್ಟಿಸಿರುವ ಪಾತ್ರಗಳೇ ಮಾಡುತ್ತಿದ್ದರೂ ಆ ಸನ್ನಿವೇಶವನ್ನು ಸೃಷ್ಟಿಸೋದು ನೀವೇ ಆಗಿರ್ತಿರ, ಸೋ ನಿಮಗೇನಾದ್ರು ಇದುವರೆಗೆ ಯಾರನ್ನಾದರೂ ಕೊಲೆ ಮಾಡಬೇಕೆಂದು ಅನಿಸಿದೆಯಾ?? ಅಕಸ್ಮಾತ್ ಅನಿಸಿದ್ರೆ ಯಾರನ್ನು?? "ಎಂದು TV 10ನ ನಿರೂಪಕಿ ಶೀತಲ್ ಕುತೂಹಲದಿಂದ ತನ್ನೆದುರಿಗಿದ್ದ ಖ್ಯಾತ ಥ್ರಿಲ್ಲರ್ ಕಾದ೦ಬರಿಕಾರ ವಿವೇಕ್ ಚಕ್ರವರ್ತಿ ಯನ್ನು ಕೇಳುತ್ತಿದ್ದಂತೆ;"ನೋಡಿ ಶೀತಲ್ ಹೊರ ಜಗತ್ತಿಗೆ ನಾನು ನಾರ್ಮಲ್ ವ್ಯಕ್ತಿಯ ಹಾಗೆ ಕಾಣಿಸುತ್ತೇನಾದರೂ, ನನಗೂ ಬಹಳಷ್ಟು ಸಲ ಕೊಲೆ ಮಾಡಬೇಕೆಂದು ಅನಿಸಿದೆ. ಅದಕ್ಕಾಗಿ ಪ್ಲಾನ್ ಕೂಡ ಮಾಡಿದ್ದೆ!!"ಎಂದು ತಣ್ಣನೆಯ ದನಿಯಲ್ಲಿ ಉತ್ತರಿಸಿದ. ಎದೆಯಾಳದಲ್ಲಿ ಅಪಾರವಾದ ನೋವಿತ್ತು...
Add to Cartಹೊಡೆದಾಟ, ಸಾವು, ಬೆದರಿಕೆ, ಜಾತಿ ವೈಷಮ್ಯ, ದೆವ್ವ ಭೂತಗಳು, ಸುಲಿಗೆ, ಹಾದರ, ಹೀಗೇ ಜನಪ್ರಿಯ ಸಾಹಿತ್ಯದ ಎಲ್ಲ ಅಂಶಗಳನ್ನೂ, ಲಘು ಸಾಹಿತ್ಯದ ಹಾಸ್ಯ, ಹಾರಾಟದಂಥ ಅಂಶಗಳನ್ನೂ ಯಾವ ಸಂಕೋಚವೂ ಇಲ್ಲದೆ ಸಲೀಸಾಗಿ, ಮುಕ್ತವಾಗಿ ಬಳಸಿಕೊಳ್ಳುವ ತೇಜಸ್ವಿ ಅವುಗಳ ಸಕಾಲಿಕ ನಿರಾಕರಣೆಯಲ್ಲಿ ತೋರುವ ಕಲಾತ್ಮಕ ಜಾಣ್ಮೆ ಚಿದಂಬರ ರಹಸ್ಯವನ್ನು ಇತ್ತೀಚಿನ ಅತಿ ಮುಖ್ಯ ಕನ್ನಡದ ಕಾದಂಬರಿಗಳಲ್ಲಿ ಒಂದನ್ನಾಗಿ ಮಾಡಿದೆ..
Add to Cartಪರಸ್ಪರ ವೈರುಧ್ಯಗಳನ್ನೇ ಅದೃಶ್ಯ ತಂತುಗಳಿಂದ ಸಂಯೋಜಿಸುತ್ತಾ ಸಾಗುವ ಈ ಕಾದಂಬರಿಯೊಂದು ವಿಚಿತ್ರ ಮತ್ತು ಅಸಾಧಾರಣ ಕೃತಿ. ಜೀವನದ ವಿರಾಟ್ ಅರ್ಥಹೀನತೆಯ ಪರಿಧಿಯೊಳಗೇ ಅದರ್ ಆರ್ಥಪೂರ್ಣತೆಯನ್ನು ಅನ್ವೇಷಿಸುತ್ತದೆ. ಅಸಂಗತ ಘಟನಾವಳಿಗಳ ಸರಣಿಯನ್ನೇ ಸುಸಂಗತ ಕಥೆಯನ್ನಾಗಿ ನೇಯುತ್ತದೆ. ಚರಿತ್ರೆಯ ಅಪಹಾಸ್ಯವನ್ನು ತಿಳಿಹಾಸ್ಯ ಮತ್ತು ವಿನೋದಗಳಿಂದ ಪ್ರತಿರೋಧಿಸುತ್ತದೆ. ಶತಮಾನದ ಕಥೆಯನ್ನು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರತಿಮಿಸುತ್ತದೆ. ಜೀವನವನ್ನು ಎದುರಿಸಲು ಆಶಾವಾದ, ನಿರಾಶಾವಾದ ಇವುಗಳೆಲ್ಲವನ್ನೂ ಮೀರಿದ ಗಂಭೀರ ಎದೆಗಾರಿಕೆಯನ್ನು ಇದು ನಮಗೆ ತೋರಿಸಿಕೊಡುತ್ತದೆ...
Add to Cartಇದೊಂದು ಸಮಕಾಲೀನ ಸಮಸ್ಯೆ ಕುರಿತು ಬರೆದ ಕಾದಂಬರಿ. ‘ಮಯೂರ’ ಮಾಸ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದು ಬಹಳ ಜನಪ್ರಿಯತೆ ಗಳಿಸಿತು...
Add to Cartಆ ಕಾಲ-ವ್ಯಾಪಾರಕ್ಕೆಂದು ಬಂದ ಬ್ರಿಟಿಷರು, ಪೋರ್ಚುಗೀಸರು ಭಾರತೀಯ ರಾಜರುಗಳ ಒಳಜಗಳದ ಸುಸಂಧಿಯನ್ನೇ ಸಾಧಿಸಿ ‘ತಮ್ಮ ರೊಟ್ಟಿ ಜಾರಿ ಎಲ್ಲಿ ಬೆಣ್ಣೆಗೆ ಬೀಳುತ್ತದೆ’ ಎಂದು ಕಾಯುತ್ತಿದ್ದ ಕಾಲ. ದಕ್ಷಿಣದಲ್ಲಿ ಪ್ರಬಲರಾದ ಮರಾಠರು, ಹೈದರಾಬಾದಿನ ನಿಜಾಮ, ಮೈಸೂರು ಸಂಸ್ಥಾನದ ಸರ್ವಾಧಿಕಾರಿ ಹೈದರಾಲಿ-ಇವರ ನಿರಂತರ ಹೋರಾಟದ ಏಳು-ಬೀಳುಗಳನ್ನವಲಂಬಿಸಿ ತಮ್ಮ ಅಳಿವು-ಉಳಿವುಗಳನ್ನು ಕರ್ನಾಟಕದ ಎಲ್ಲ ಪಾಳೆಯಗಾರರು ನಿರ್ಧರಿಸುತ್ತಿದ್ದ ಪರ್ವಕಾಲ.ಹೈದರಾಲಿಯ ಬಿರುಗಾಳಿಯ ದಾಳಿಯನ್ನು ಎದುರಿಸಲಾಗದೆ, ತಮ್ಮ ಸರ್ವಸ್ವವನ್ನೂ ಅರ್ಪಿಸಿ ತಮ್ಮ ಪ್ರಾಣರಕ್ಷಣೆ ಮಾಡಿಕೊಳ್ಳುತ್ತಿದ ಪಾಳೆಯಗಾರರಿದ್ದಾಗ ತನ್ನ ಅಪ್ರತಿಮ ಶೌರ್ಯ-ಸಾಹಸಗಳಿಂದ, ಜನತೆಯ ಅಭಿಮಾನಕೋಟೆಯ ರಕ್ಷಾಬಲದಿಮ್ದ ಎಂದೂ ಸೋತು, ಶರಣಾಗದೆ ಸುಮಾರು ಎರಡು ವರ್ಷಗಳ ಕಾಲ ಹೈದರಾಲಿಗೆ ಸವಾಲಾಗಿ ನಿಂತು ಸೆಣಸಿದ ಏಕೈಕ ಗಂಡು ಪಾಳೆಯಗಾರ-ಚಿತ್ರದುರ್ಗದ ಮದಕರಿನಾಯಕ.ಮದಕರಿನಾಯಕನ ದುರಂತ-ಒಂದು ನಾಡಿನ ದುರಂತ; ಆ ಕಥೆಯನ್ನೇ ಹೇಳುವ ಈ ‘ದುರ್ಗಾಸ್ತಮಾನ’-ಆ ಕಾಲದ ಮೌಲ್ಯಗಳ ಅಸ್ತಮಾನವನ್ನೂ ಪರ್ಯಾಯವಾಗಿ ಧ್ವನಿಸುತ್ತದೆ. ಎಂದೋ, ಶತಮಾನಗಳ ಹಿಂದೆ ನಡೆದುಹೋಗಿರಬಹುದಾದ ಇತಿಹಾಸವನ್ನು, ತಮ್ಮ ಪ್ರತಿಭೆಯ ಪರಶುಮಣಿಸ್ಪರ್ಶದಿಂದ ಸುವರ್ಣಾಧ್ಯಾಯವನ್ನಾಗಿಸಿ, ಕಣ್ಣಿಗೆ ಕಟ್ಟುವಂತೆ ಪುನರ್ ಸೃಷ್ಟಿಸಬಲ್ಲ ಕಲ್ಪನಾಶಕ್ತಿ, ಕಲಾಕೌಶಲ ಇರುವುದು-ತ.ರಾ.ಸು. ಒಬ್ಬರಿಗೇ.ಸುಳಿಯಲ್ಲಿ ಸಿಕ್ಕವನಂತೆ ದುರಂತದೆಡೆಗೆ ಸಾಗುವ ಮದಕರಿನಾಯಕನ ಬದುಕಿನ ವಿವಿಧ ಮುಖಗಳು ಬಿಚ್ಚಿಕೊಳ್ಳುವ ಬೃಹತ್ವೇಶ್ಮದ ಮೇಲೆ ಎಲ್ಲ ರಸಗಳ ವರ್ಣಗಳನ್ನೂ ಬಳಸಿ ಚಿತ್ರಿಸುವಾಗ ಅರವತ್ತಮೂರರ ತ.ರಾ.ಸು. ಹದಿಹರೆಯದವರನ್ನೂ ನಾಚಿಸುವ ಬಿಸಿನೆತ್ತರ ಕಾವನ್ನು ಕಾರುತ್ತಿರುವಮ್ತೆ, ಪುಟಪುಟಗಳಲ್ಲೂ ತಮ್ಮ ಮಣ್ಣಿನ ಮೇಲಣ ಅಭಿಮಾನವನ್ನು ಅಭಿವ್ಯಕ್ತಿಸಿದಂತೆ ಕಾಣುತ್ತದೆ; ನೆತ್ತರು ಕುದಿಸುವ ತಮ್ಮ ಎಂದಿನ ಸಿಡಿಲಭಾಷೆಯಲ್ಲಿ, ಕಣ್ಣುಕೋರೈಸುವ ಮಿಂಚಿನ ಶೈಲಿಯಲ್ಲಿ, ಆಳ ಅನುಭವ-ಚಿಂತನಗಳ ರಸಪಾದಕಲ್ಲಿ ಈ ಕೃತಿಯನ್ನೊಂದು ರುದ್ರಾಧ್ಯಾಯವನ್ನಾಗಿಸಿದ್ದಾರೆ...
Add to Cartಸಾಮಾಜಿಕ, ರೋಚಕ, ಐತಿಹಾಸಿಕ ಕಾದಂಬರಿಗಳು ಕನ್ನಡಕ್ಕೆ ಹೊಸತಲ್ಲ. ಈ ಬಗೆಯ ಕಾದಂಬರಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಪರಿ ಮೆಚ್ಚುವಂಥದ್ದು, ಇದೀಗ ವೈಜ್ಞಾನಿಕ ಕಾದಂಬರಿಗಳು ಕನ್ನಡದಲ್ಲಿ ಅಲ್ಲಲ್ಲಿ ಸದ್ದು ಮಾಡುತ್ತಿರುವುದು ಕೂಡ ಸ್ವಾಗತಾರ್ಹ. ಈ ಬಗೆಯ ಕಾದಂಬರಿಗಳು ಕನ್ನಡದಲ್ಲಿ ಹೇರಳವಾಗಿ ಬಂದಷ್ಟು ಹೊಸ ತಲೆಮಾರಿನವರನ್ನು ಓದಿನತ್ತ ಸೆಳೆಯಬಹುದು. ಸದ್ಯಕ್ಕೆ ಈ ಬಗೆಯ ಪುಸ್ತಕಗಳು ಅಪರೂಪದಲ್ಲಿ ಅಪರೂಪ ಎಂಬಂತೆ ಇವೆ. ಆದರೆ ಈ ಕೊರತೆಯನ್ನು ನೀಗಿಸುವ ಒಂದು ಪ್ರಯತ್ನವನ್ನು ಡಾ. ಶಾಂತಲ ಅವರು ಮಾಡಿದ್ದಾರೆ. `ದೇವರಾಗಲು ಮೂರೇ ಗೇಣು' ಒಂದು ಅಪರೂಪದ ವೈಜ್ಞಾನಿಕ ಕಾದಂಬರಿ, ಸುಲಭವಾಗಿ ಓದಿಸಿಕೊಂಡು ಹೋಗುವ, ಕುತೂಹಲವನ್ನು ಕಾಯ್ದುಕೊಳ್ಳುವ, ವಿಜ್ಞಾನದ ಹಿನ್ನೆಲೆ ಇರದ ಸಾಮಾನ್ಯ ಓದುಗನೂ ಸರಳವಾಗಿ ಓದಬಹುದಾದ ಅದ್ಭುತ ಕಾದಂಬರಿ ಇದಾಗಿದೆ. ವಿಷಯವನ್ನಿಟ್ಟುಕೊಂಡು, ಇಷ್ಟೊಂದು ಸರಳವಾಗಿ ಪುಸ್ತಕವೊಂದನ್ನು ಬರೆಯಬಲ್ಲ ಡಾ. ಶಾಂತಲ ಅವರ ಪ್ರತಿಭೆಯನ್ನು ಮೆಚ್ಚಲೇ ಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಐವಿಎಫ್ ತಂತ್ರಜ್ಞಾನವು ಅಗಾಧವಾದ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಈ ಐವಿಎಫ್ ತಂತ್ರಜ್ಞಾನದ ಎಳೆಯನ್ನು ಇಟ್ಟುಕೊಂಡು ಡಾ. ಶಾಂತಲ ಅವರು ಸೊಗಸಾದ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡದಲ್ಲಿ ಹೊಸ ಬಗೆಯ ಕಾದಂಬರಿ ಒಂದನ್ನು ನೀವು ಓದಲು ಬಯಸಿದ್ದರೆ, ಹಾಗೂ ಮೊಟ್ಟ ಮೊದಲಬಾರಿಗೆ ಒಂದು ಪುಸ್ತಕವನ್ನು ಓದಬೇಕು ಎಂದು ಮನಸ್ಸು ಮಾಡಿದ್ದರು ದೇವರಾಗಲು ಮೂರೇ ಗೇಣು ನಿಮಗೆ ಹೇಳಿಮಾಡಿಸಿದ ಪುಸ್ತಕವಾಗಿದೆ...
Add to Cart.... ನಮ್ಮ ಕನಸುಗಳಿಗೆ ಎಂಥಾ ಅದ್ಭುತ ಶಕ್ತಿ ಇದೆ ! ಕನಸು ಕಾಣಬೇಕಷ್ಟೆ, ಹಾರಲು ರೆಕ್ಕೆಗಳು ಮೊಳೆಯುತ್ತವೆ. ಆರಂಭವಷ್ಟೆ ಕಷ್ಟ, ಮೊದಲ ಹೆಜ್ಜೆ ಇಟ್ಟಂತೆ ಹಾದಿ ಸುಗಮ....ಹೀಗೆ, ಪೆರು ಕಣಿವೆಗೆಂದು ಹೊರಟು, ಪರವಾನಗಿ ಇಲ್ಲದಿದ್ದರೂ ಅಕ್ಕಪಕ್ಕದ ದೇಶಗಳಲ್ಲೂ ಸುಳಿದಾಡಿ, ಪ್ರವಾಸ ಹೋದಾಗ ಎದುರಾಗುವ ಭಾಷೆಯ ಸಮಸ್ಯೆಯನ್ನು ತಮ್ಮದೇ ಕೈ ಬಾಯಿ ಸನ್ನೆಗಳ ಮೂಲಕ ನಿಭಾಯಿಸಿಕೊಂಡು, ಅದೇ ರೀತಿ ಆಹಾರದ ಪ್ರಶ್ನೆಯನ್ನು ಬಗೆಹರಿಸಿಕೊಂಡು, ಹೋದ ಕಡೆ ನಮ್ಮ ಊರಿನದೇ ಪರಿಸ್ಥಿತಿಯನ್ನು, ನಮ್ಮ ಜನರಂತೆಯೇ ಆದರಿಸುವ, ಪ್ರೀತಿಸುವ, ಸ್ನೇಹಭಾವ ತೋರಿಸುವ ಜನರನ್ನು ಭೇಟಿ ಮಾಡಿದ ಅನುಭವಗಳನ್ನು ಲೇಖಕಿ ಇಲ್ಲಿ ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ. ಕನಸುಗಾರ್ತಿ ಗೆಳತಿಯ ಜೊತೆಗೂಡಿ ಬೆಟ್ಟವೇರಿ, ಕಣಿವೆ ಇಳಿದು, ಅಮೆಜಾನ್ ನದಿಯಲ್ಲಿ ರಾತ್ರಿ ದೋಣಿ ಪಯಣ ಮಾಡಿದ ರೋಮಾಂಚಕ ಸನ್ನಿವೇಶಗಳನ್ನು, ಮಹಿಳೆಯರ ಅಪೂರ್ವ ಸಾಧನೆಯನ್ನು ದಾಖಲಿಸುವ ಕೃತಿ. ಪುಸ್ತಕ ಓದಿಯೇ ಇದನ್ನು ತಿಳಿಯಬೇಕು...
Add to Cartಭಾರತದ ಮಹಾಮಾಪನದ ಕತೆಯನ್ನು ಹೇಳುತ್ತಲೇ, ಭಾರತೀಯ ಮನಸ್ಸು, ದೈವಿಕತೆ, ಅಧ್ಯಾತ್ಮವನ್ನು ಹೇಳುವ ಕಾದಂಬರಿ ಪ್ರಮೇಯ, ಇದರ ಹರಹು ಮತ್ತು ಆಳ ನನ್ನನ್ನು ಅಚ್ಚರಿಗೊಳಿಸಿದೆ. ಇದು ಹಿಮಾಲಯವನ್ನು ಅಳೆದ ಕತೆ, ಅಳೆದವರ ಕತೆ, ಅಳೆದು ಉಳಿದವರ ಕತೆ. ವೈಜ್ಞಾನಿಕ ಜಗತ್ತು ಭಾರತದ ಮಹಾಮಾಪನವನ್ನು ಗ್ರೇಟ್ ಟ್ರಿಗ್ನೋಮೆಟ್ರಿಕ್ ಸರ್ವೆ ಎಂದು ಕರೆಯಿತು. ಆ ಯೋಜನೆಯನ್ನು ಮುನ್ನಡೆಸಿದ ಕರ್ನಲ್ ಲ್ಯಾಂಬ್ಟನ್, ಜಾರ್ಜ್ ಎವರೆಸ್ಟ್, ಆಂಡ್ರ್ಯೂವಾ, ಥಾಮಸ್ ಜಾರ್ಜ್ ಮಾಂಟ್ಗೊಮರಿ ಮತ್ತು ನೈನ್ ಸಿಂಗರ ಕಷ್ಟಸುಖದ ಕತೆಯನ್ನು ಹೇಳುತ್ತಲೇ ಭಾರತದ ಕತೆಯನ್ನೂ ಗಜಾನನ ಶರ್ಮರು ಹೇಳುತ್ತಾರೆ.ಇಂಥದೊಂದು ವಸ್ತುವನ್ನು ಆಧರಿಸಿದ ಮೊದಲ ಭಾರತೀಯ ಕಾದಂಬರಿ ಇದು. ಚರಿತ್ರೆ ಮತ್ತು ಕಲ್ಪನೆ ಎರಡನ್ನೂ ಹದವಾಗಿ ಬೆರೆಸುತ್ತಾ, ಚಾರಿತ್ರಿಕ ವಿವರಗಳಿಗೆ ಅಪಚಾರ ಆಗದಂತೆ, ಕಲಾನುಭವಕ್ಕೆ ಕುಂದಾಗದಂತೆ ಈ ಕತೆಯನ್ನು ಗಜಾನನ ಶರ್ಮ ಕಟ್ಟಿದ್ದಾರೆ. ಕ್ಲುಪ್ತ ವಿವರ, ಸ್ಪಷ್ಟ ಮಾಹಿತಿ, ಸಮರ್ಪಕ ಕ್ಷೇತ್ರಾಧ್ಯಯನ, ಅನುಪಮ ಶ್ರದ್ಧೆ ಮತ್ತು ಸರಳ ಭಾಷೆ ಹುರಿಗಟ್ಟಿರುವ ಕಾದಂಬರಿ ಇದು. ನಮಗೆ ಗೊತ್ತಿಲ್ಲದೆ ಹೊರಜಗತ್ತು ಮತ್ತು ಒಳಜಗತ್ತನ್ನು ಈ ಕಾದಂಬರಿ ಅನಾವರಣ ಮಾಡುತ್ತದೆ.ಈಗಾಗಲೇ ಪುನರ್ವಸು ಮತ್ತು ಚೆನ್ನಭೈರಾದೇವಿ ಕಾದಂಬರಿಗಳ ಮೂಲಕ ಕನ್ನಡದ ಬಹುಮುಖ್ಯ ಕಾದಂಬರಿಕಾರ ಎಂದೆನಿಸಿಕೊಂಡಿರುವ ಗಜಾನನ ಶರ್ಮರು ಈ ಕಾದಂಬರಿಯಲ್ಲಿ ಮತ್ತೊಂದು ಎತ್ತರವನ್ನು ತಲುಪಿದ್ದಾರೆ. ಈ ಕಾದಂಬರಿಯು ಓದು ನನ್ನನ್ನು ಜ್ಞಾನವಂತನನ್ನಾಗಿಯೂ ಹೃದಯವಂತನನ್ನಾಗಿ ಮಾಡಿದೆ. ಓದಿದ ನಿಮಗೂ ಅದೇ ಆಗಲಿದೆ ಎಂದು ಕಾದಂಬರಿ ಕುರಿತು ಲೇಖಕ ಜೋಗಿ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ...
Add to Cartಜನಿಸಿದ್ದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಯಿತನಹಳ್ಳಿ. ಓದಿದ್ದು ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಬಿ.ಇ. ಆಟೋಮೊಬೈಲ್. ಒಲಿದಿದ್ದು ಪತ್ರಿಕೋದ್ಯಮ. ಮೊದಲು ಹಾಯ್ ಬೆಂಗಳೂರ್, ನಂತರ ಸಂಯುಕ್ತ ಕರ್ನಾಟಕ, ಆನಂತರ ವಿಜಯ ಕರ್ನಾಟಕದಲ್ಲಿ ನೌಕರಿ. ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದ, ‘ಉಭಯ ಕುಶಲೋಪರಿ ಸಾಂಪ್ರತ’, ‘ಹಾಡು ಹುಟ್ಟಿದ ಸಮಯ’, ‘ಮರೆಯಲಿ ಹ್ಯಾಂಗ’, ‘ಈ ಗುಲಾಬಿಯು ನಿನಗಾಗಿ’ ಅಂಕಣಗಳು ಸಕಲೆಂಟು ಮಂದಿಯ ಮೆಚ್ಚುಗೆಗೆ ಪಾತ್ರವಾದವು. ಪ್ರಸ್ತುತ, ಕನ್ನಡಪ್ರಭದಲ್ಲಿ ಮುಖ್ಯ ಉಪಸಂಪಾದಕ. ‘ಭಾವತೀರಯಾನ’ ಎಂಬ ಅಂಕಣದ ಲೇಖಕ. ಪ್ರಕಟವಾಗಿರುವ ಪುಸ್ತಕಗಳು ನಾಲ್ಕು. ಈ ಪೈಕಿ ‘ಹಾಡು ಹುಟ್ಟಿದ ಸಮಯ’ ಮತ್ತು ‘ಈ ಗುಲಾಬಿಯು ನಿನಗಾಗಿ’ ಪುಸ್ತಕಗಳು ತಲಾ ನಾಲ್ಕು ಮುದ್ರಣಗಳನ್ನು ಕಂಡಿವೆ. ‘ಅಪ್ಪ ಅಂದ್ರೆ ಆಕಾಶ’ ಪುಸ್ತಕದ 20,000 ಪ್ರತಿಗಳು ಕೇವಲ 13 ತಿಂಗಳ ಅವಧಿಯಲ್ಲಿ ಮಾರಾಟವಾಗಿವೆ. ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ 60 ತಿಂಗಳಲ್ಲಿ 60,000 ಪ್ರತಿಗಳು ಮಾರಾಟವಾಗಿ ದಾಖಲೆ ಸ್ಥಾಪಿಸಿರುವ ಪುಸ್ತಕ. ಈ ಪುಸ್ತಕಕ್ಕೆ ಸೇಡಂನ ಅಮ್ಮ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿದೆ...
Add to Cartಪ್ರಕಾಶಕರು ಗೋಮಿನಿ ಪ್ರಕಾಶನ ಮರೆತು ಹೋದ ಮೈಸೂರಿನ ಪುಟಗಳು - ಪುಸ್ತಕ ವಿಮರ್ಶೆ..
Add to Cartಇವತ್ತಿನ ಸಂತೋಷದ ಕ್ಷಣಗಳು, ಅನುಭವಿಸುತ್ತಿರಬಹುದಾದ ದುಃಖದ ತೀವ್ರತೆ ನಾಳೆಯೂ ಇರುವುದಿಲ್ಲ ಅಂತ ಗೊತ್ತಾದಾಗ ನಾವು ದೊಡ್ಡವರಾಗಿರುತ್ತೇವೆ. ಆದರೆ ಸಂತೋಷ, ಕಣ್ಣೀರು, ಒಂಟಿತನ, ಭಯ, ಬೆರಗು ಈ ಎಲ್ಲಾ ಭಾವಗಳಿಗೆ ನಿನ್ನೆ ನಾಳೆಗಳ ಹಂಗಿಲ್ಲ, ಆ ಕ್ಷಣವೇ ಶಾಶ್ವತ ಅಂತ ಅನ್ನಿಸುವುದು ಬಾಲ್ಯದಲ್ಲಿ ಮಾತ್ರ. ಅಂತಹ ಕ್ಷಣಗಳಿಗೇ ನಾವು ತೀವ್ರವಾಗಿ ಸ್ಪಂದಿಸುವುದರಿಂದ ಮನಸ್ಸಲ್ಲಿ ಮೂಡಿದ ಆ ಬಾಲ್ಯದ ಚಿತ್ರಗಳ ಬಣ್ಣ ಯಾವತ್ತಿಗೂ ಮಾಸುವುದಿಲ್ಲ. ವಿಕಾಸ್ ನೇಗಿಲೋಣಿಯವರ 'ರಥಬೀದಿ ಎಕ್ಸ್ಪ್ರೆಸ್' ಓದಿದಾಗ ಅಂತಹ ನೂರಾರು ಪೇಯಿಂಟಿಂಗಳ ಚಿತ್ರಸಂತೆಯ ನಡುವೆ ಕಳೆದು ಹೋದ ಅನುಭವವಾಗುತ್ತದೆ. ಪ್ರತಿಯೊಂದು ಚಿತ್ರದಲ್ಲೂ ನಮ್ಮ ಬಾಲ್ಯದ ಒಂದೊಂದು ತುಣುಕು ಕಂಡು ಮನಸ್ಸು ಮತ್ತೆ ಬಾಲ್ಯಕ್ಕಾಗಿ ತುಡಿಯುತ್ತದೆ. ಈ ಪುಸ್ತಕ ಬಾಲ್ಯದಲ್ಲೇ ಊರು ಬಿಟ್ಟು ವಲಸೆ ಹೋಗಿ, ಯಾರದೋ ಮುಲಾಜಿನಲ್ಲಿ ಬದುಕುತ್ತಾ, ಮನೆಯ ದಾರಿಯ ಮೇಲೆ ಮತ್ತೆ ನಮ್ಮ ಹೆಜ್ಜೆ ಮೂಡುವ ದಿನಕ್ಕೆ ಕಾಯುತ್ತಾ, ಆಟಪಾಠಗಳಲ್ಲಿ ಸಂಕಟ ಮರೆಯುತ್ತಾ, ಸರಿರಾತ್ರಿ ಸವಿದ ಮಳೆಯ ಸದ್ದಿಗೆ ಎಚ್ಚರಾಗಿ ಮಲಗಿರುವುದು ಮನೆಯ ಜಗಲಿಯ ಮೇಲೋ ಹಾಸ್ಟೇಲಿನ ಕಬ್ಬಿಣದ ಮಂಚದ ಮೇಲೋ ಅಂತ ಗಲಿಬಿಲಿಗೊಳ್ಳುತ್ತಾ, ಮತ್ತೆ ಹನಿಗಣ್ಣಲ್ಲೇ ನಿದ್ದೆಗೆ ಜಾರುತ್ತಾ ಬಾಲ್ಯ ಕಳೆದ ಎಲ್ಲ ಹುಡುಗರ ಆಟೋಬಯಾಗ್ರಫಿ. ಈ ಪುಸ್ತಕದ ಮೂಲಕ ದೊಡ್ಡವರಾಗಿದ್ದೆ ದೊಡ್ಡ ತಪ್ಪು ಅನ್ನಿಸುವಂತೆ ಮಾಡಿ, ಕೈಹಿಡಿದು ಬಾಲ್ಯದಲ್ಲಿ ನಡೆದಾಡಿದ್ದ ದಾರಿಗಳಲ್ಲಿ ಮತ್ತೆ ನಡೆದಾಡಿಸಿದ ವಿಕಾಸ್ ನೇಗಿಲೋಣಿಯವರಿಗೆ ಪ್ರೀತಿ ಮತ್ತು ಅಕ್ಕರೆ...
Add to Cartಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು 16 ಕಾವ್ಯ ಕೃತಿಗಳು. ಕಾದಂಬರಿ-ಧರ್ಮಚಕ್ರವರ್ತಿ ಅಶೋಕ, ಔರಂಗಜೇಬ, ಕುಮಾರರಾಮ, ಚಾಣಕ್ಯ, ಸರ್ವಜ್ಞ, ಚಾರುದತ್ತ, ಬಣ್ಣದ ಹಕ್ಕಿ, ಸ್ವಪ್ನಗಾನ, ರಾಧಾರಜನಿ, ಮಣ್ಣಿನ ಋಣ ಹೀಗೆ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳು ಸೇರಿ 30 ಕೃತಿ ರಚಿಸಿದ್ದು, ಮಕ್ಕಳ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ...
Add to Cartರಾಮಾಯಣವೆಂದರೆ ಸ್ಫೂರ್ತಿಯ ದೇವಗಂಗೆ, ಪ್ರೇರಣೆಯ ಕಾಮಧೇನು, ಆಪ್ತ ಸಲಹೆಯ ಕಲ್ಪವೃಕ್ಷ. ಅಲ್ಲಿ ಎಲ್ಲಿ ಮುಟ್ಟಿದರೂ ಬದುಕಿನ ಬುತ್ತಿ ಲಭ್ಯ. ಸಹಸ್ರಸಹಸ್ರ ಸಂವತ್ಸರಗಳಿಂದ ಅದು ಮನುಷ್ಯಜೀವನವನ್ನು ಪ್ರಭಾವಿಸಿದ್ದು ಇದೇ ಕಾರಣಕ್ಕೆ. * * * ಬಾಲ್ಯವೆಂದರೆ ಬದುಕಿನ ಬುನಾದಿ. ಬಾಲ್ಯವೆಂಬ ಬೇರಿನ ಮೇಲೆಯೇ ಬದುಕಿನ ವೃಕ್ಷದ ಅಸ್ತಿತ್ವ. ರಾಮಾಯಣದ ಬಾಲ್ಯ-ರಾಮನ ಬಾಲ್ಯ ಎರಡೂ ಆಗಿರುವ ಬಾಲಕಾಂಡ, ನಮ್ಮ ಬದುಕಿನ ಬೇರಿಗೆ ಎರೆಯುವ ನೀರು ಜೀವದ್ರಸ. * * * ಇಲ್ಲಿದೆ ಆ ಅಮೃತದ ಕೆಲವು ಹನಿಗಳು. ಅಮೃತದ ಹನಿಯೂ ಸಾಕು ಬದುಕಿನ ವಿಷ ಕಳೆಯಲು...
Add to Cartರಂಜನಿ ರಾಘವನ್ ಅವರು ಮೂಲತಃ ಬೆಂಗಳೂರಿನವರು. ಬರಹಗಾರ್ತಿ, ನಟಿ, ಸೃಜನಶೀಲ ನಿರ್ದೇಶಕಿಯೂ ಆಗಿದ್ದಾರೆ. ಪ್ರಸ್ತುತ ಕಲರ್ಸ್ ಕನ್ನಡದ ಕನ್ನಡತಿ ಧಾರವಾಹಿಯಲ್ಲಿ ನಟಿಯಾಗಿದ್ದಾರೆ. ಧಾರವಾಹಿಗಳು: ಪುಟ್ಟ ಗೌರಿ ಮದುವೆ (2014-2018), ಪೌರ್ಣಮಿ ತಿಂಗಳ್(2019), ಇಷ್ಟ ದೇವತೆ (2019-2020), ಕನ್ನಡತಿ(2020). ಸಿನಿಮಾಗಳು: ರಾಜಹಂಸ(2017), ತಕ್ಕರ್(2018), ಸತ್ಯಂ(2019), ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ(2021), ಹಾಕೂನ ಬಟಟ(2021). ಕೃತಿಗಳು: ಕತೆ ಡಬ್ಬಿ, ಸ್ವೈಪ್ ರೈಟ್ (ನಿನ್ನ ಬೆರಳಂಚಲಿ ನಾನು)..
Add to Cart