ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

Special Offers

ಕತೆಗಾರರ ಕೈಪಿಡಿ(ಜೋಗಿ) - Kathegarara Kaipidi(Jogi)
₹500₹450 Ex Tax: ₹450

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು: 448..

Add to Cart
ತಂದೆ ತಾಯಿ ದೇವರಲ್ಲ - Tande Taayi Devaralla(Jogi)
₹150₹130 Ex Tax: ₹130

‘ನೀವೇ ನನ್ನ ಸೃಷ್ಟಿಕರ್ತರು‘ ಅನುಮಾನವೇ ಇಲ್ಲ. ‘ನೀವಿಲ್ಲದೇ ನಾವಿಲ್ಲ‘ ಅದು ಪೂರ್ತಿ ನಿಜವಲ್ಲ ‘ನನ್ನ ಬದುಕಿಗೆ ನೀವೇ ಹೊಣೆ‘ ನನಗೆ ನಾನೇಇಲ್ಲ ನಿನಗೆ ನೀನೇ. ‘ನನಗೋಸ್ಕರ ತ್ಯಾಗ ಮಾಡಿ‘ ಕೋಡಲಾರದ್ದನ್ನು ಕೇಳಬೇಡಿ. ‘ನಾನು ನಿಮ್ಮನ್ನೇ ನಂಬಿದ್ದೆನಲ್ಲ‘ ತಂದೆತಾಯಿ ದೇವರಲ್ಲ ‘ಪೂಜಿಸಿ ಫಲವಿಲ್ಲವೇ‘ ಪ್ರೀತಿಸುವುದೇ ಸರಿಯಲ್ಲವೇ...

Add to Cart
ನೆನಪಿನ ಪುಟಗಳು(ಟಿ ಎನ್ ಸೀತಾರಾಮ್) - Nenapina Putagalu(T N Seetharam)
₹550₹480 Ex Tax: ₹480

ಅಗಾಧ ಪ್ರತಿಭೆ, ನಿರಂತರ ಹುಡುಕಾಟ. ಅಚಲ ಶ್ರದ್ಧೆ, ಅವಿರತ ದುಡಿಮೆ, ಉಕ್ಕುವ ಚಿಲುಮೆಯಂಥ ಹುಮ್ಮಸ್ಸಿನ ಟಿ.ಎನ್‌. ಸೀತಾರಾಮ್‌‍, ತಾವು ನಡೆದು ಬಂದ ಹಾದಿಯ ನೆನಪುಗಳನ್ನು ಬರೆಯುತ್ತಾ ಹೋಗಿದ್ದಾರೆ. ಅವರೇ ಕರೆದಿರುವಂತೆ ಇವು ನೆನಪಿನ ಪುಟಗಳು. ಆದರೆ, ಆ ನೆನಪುಗಳು ನಮ್ಮನ್ನು ಕೂಡ ಅವರ ಕಾಲಕ್ಕೆ ಕರೆದೊಯ್ಯುತ್ತದೆ. ಟೈಮ್‌ ಮೆಷೀನಿನಲ್ಲಿ ಹಿಂದಕ್ಕೆ ಹೋಗಿ ಕಾಲಾತೀತರಾಗಿ ಅವರು ಕಂಡದ್ದನ್ನು ನಾವೂ ಕಾಣುತ್ತಾ ಹೋಗುತ್ತೇವೆ. ಹೇಳುವುದಕ್ಕಿಂತ ತೋರಿಸುವುದರಲ್ಲಿ ಸೀತಾರಾಮ್‌ ಅವರಿಗೆ ಆಸಕ್ತಿ.ಈ ನೆನಪಿನ ಪುಟಗಳಿಗೆ ಹಲವು ಬಣ್ಣ. ವಿಷಾದ ಮೆತ್ತಿದ ಹಲವು ಪುಟಗಳು, ತಮಾಷೆ ಲೇಪಿಸಿದ ಅನೇಕ ಪುಟಗಳು, ಬದುಕನ್ನು ಅವಡುಗಚ್ಚಿ ದಿಟ್ಟತನದಿಂದ ಎದುರಿಸಿದ ಪುಟಗಳು, ಪ್ರಯೋಗಶೀಲತೆಯ ಪುಟಗಳು, ಹುಡುಕಾಟದ ಸಾಲುಗಳು, ಅಂತರಂಗದ ಪಿಸುಮಾತು, ಲೋಕಾಂತದ ಹೊಸಿಲಿಗೆ ಹಚ್ಚಿದ ಕಿರುದೀಪ-ಎಲ್ಲವನ್ನು ಟಿಎನ್ನೆಸ್‌ ಸಂತನ ನಿರುಮ್ಮಳ ಧಾಟಿಯಲ್ಲಿ ನಮ್ಮ ಮುಂದಿಟ್ಟಿದ್ದಾರೆ.ಟಿಎನ್ನೆಸ್‌ ಅವರ ಐದು ದಶಕಗಳ ಜೀವನ ಚಿತ್ರಗಳಲ್ಲಿ ನೂರಾರು ಜೀವಗಳ ಕತೆಯಿದೆ, ಇಲ್ಲಿ ನಮಗೆ ಬಹುಮುಖಿ ಟಿಎನ್ನೆಸ್‌ ಸಿಗುತ್ತಾರೆ. ಕೃಷಿಕ, ವಕೀಲ, ಉದ್ಯಮಿ, ನಾಟಕಕಾರ, ನಟ, ನಿರ್ದೇಶಕ, ಸಾಹಿತಿಯಾಗಿ ಅವರನ್ನು ಬಲ್ಲವರಿಗೆ ಮಗ, ತಮ್ಮ, ಅಣ್ಣ, ತಂದೆ, ಗಂಡ, ಗೆಳೆಯ ಟಿಎನ್ನೆಸ್‌ ಕೂಡ ಎದುರಾಗುತ್ತಾರೆ.ಇದು ಟಿಎನ್ನೆಸ್‌ ಒಬ್ಬರ ನೆನಪಿನ ಪುಟಗಳಲ್ಲ, ಒಂದು ಕಾಲಾವಧಿಯ ಜ್ಞಾಪಕ ಚಿತ್ರಶಾಲೆ. ಇದನ್ನು ಓದುತ್ತಾ ನಾನು ಬೆರಗಾಗಿದ್ದೇನೆ, ಮೌನವಾಗಿದ್ದೇನೆ. ತಲ್ಲಣಿಸಿದ್ದೇನೆ, ನಕ್ಕು ಹಗುರಾಗಿದ್ದೇನೆ. ವಿಷಾದದಿಂದ ತೊಯ್ದು ಹೋಗಿದ್ದೇನೆ. ತನ್ನ ಕತೆಯನ್ನು ಮತ್ತೊಬ್ಬರ ಅನುಭವ ಆಗಿಸಲಿಕ್ಕೆ ಪ್ರಾಮಾಣಿಕತೆ ಇದ್ದರೆ ಸಾಕು. ಅದು ಈ ಪುಟಗಳಲ್ಲಿ ದಟ್ಟವಾಗಿದೆ.-ಜೋಗಿ..

Add to Cart
ಪೆರುವಿನ ಪವಿತ್ರ ಕಣಿವೆಯಲ್ಲಿ - Peruvina Pavitra Kanive(Nemichandra)
₹250₹225 Ex Tax: ₹225

.... ನಮ್ಮ ಕನಸುಗಳಿಗೆ ಎಂಥಾ ಅದ್ಭುತ ಶಕ್ತಿ ಇದೆ ! ಕನಸು ಕಾಣಬೇಕಷ್ಟೆ, ಹಾರಲು ರೆಕ್ಕೆಗಳು ಮೊಳೆಯುತ್ತವೆ. ಆರಂಭವಷ್ಟೆ ಕಷ್ಟ, ಮೊದಲ ಹೆಜ್ಜೆ ಇಟ್ಟಂತೆ ಹಾದಿ ಸುಗಮ....ಹೀಗೆ, ಪೆರು ಕಣಿವೆಗೆಂದು ಹೊರಟು, ಪರವಾನಗಿ ಇಲ್ಲದಿದ್ದರೂ ಅಕ್ಕಪಕ್ಕದ ದೇಶಗಳಲ್ಲೂ ಸುಳಿದಾಡಿ, ಪ್ರವಾಸ ಹೋದಾಗ ಎದುರಾಗುವ ಭಾಷೆಯ ಸಮಸ್ಯೆಯನ್ನು ತಮ್ಮದೇ ಕೈ ಬಾಯಿ ಸನ್ನೆಗಳ ಮೂಲಕ ನಿಭಾಯಿಸಿಕೊಂಡು, ಅದೇ ರೀತಿ ಆಹಾರದ ಪ್ರಶ್ನೆಯನ್ನು ಬಗೆಹರಿಸಿಕೊಂಡು, ಹೋದ ಕಡೆ ನಮ್ಮ ಊರಿನದೇ ಪರಿಸ್ಥಿತಿಯನ್ನು, ನಮ್ಮ ಜನರಂತೆಯೇ ಆದರಿಸುವ, ಪ್ರೀತಿಸುವ, ಸ್ನೇಹಭಾವ ತೋರಿಸುವ ಜನರನ್ನು ಭೇಟಿ ಮಾಡಿದ ಅನುಭವಗಳನ್ನು ಲೇಖಕಿ ಇಲ್ಲಿ ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ. ಕನಸುಗಾರ್ತಿ ಗೆಳತಿಯ ಜೊತೆಗೂಡಿ ಬೆಟ್ಟವೇರಿ, ಕಣಿವೆ ಇಳಿದು, ಅಮೆಜಾನ್ ನದಿಯಲ್ಲಿ ರಾತ್ರಿ ದೋಣಿ ಪಯಣ ಮಾಡಿದ ರೋಮಾಂಚಕ ಸನ್ನಿವೇಶಗಳನ್ನು, ಮಹಿಳೆಯರ ಅಪೂರ್ವ ಸಾಧನೆಯನ್ನು ದಾಖಲಿಸುವ ಕೃತಿ. ಪುಸ್ತಕ ಓದಿಯೇ ಇದನ್ನು ತಿಳಿಯಬೇಕು...

Add to Cart
ಮರೆತು ಹೋದ ಮೈಸೂರಿನ ಪುಟಗಳು - Maretu Hoda Mysorina Putagalu(Dharmendra Kumar)
₹125₹112 Ex Tax: ₹112

ಪ್ರಕಾಶಕರು  ಗೋಮಿನಿ ಪ್ರಕಾಶನ ಮರೆತು ಹೋದ ಮೈಸೂರಿನ ಪುಟಗಳು - ಪುಸ್ತಕ ವಿಮರ್ಶೆ..

Add to Cart
ಮಾಟಗಾತಿ - Maatagathi(Ravi Belagere)
₹375₹360 Ex Tax: ₹360

ದೈವ ಶಕ್ತಿ ಮತ್ತು ದುಷ್ಟ ಶಕ್ತಿಗಳ ನಡುವೆ ನಡೆಯುವ ಕಾಡಾಟವೇ ಮಾಟಗಾತಿ. ..

Add to Cart
ವೈ ಎನ್ ಕೆ unlimited (ಜೋಗಿ) - YNK Unlimited(Jogi)
₹250₹225 Ex Tax: ₹225

ಪ್ರಕಾಶಕರು :  ಅಂಕಿತ ಪುಸ್ತಕ..

Add to Cart
ಸಾರಮತಿ(ಸಾಯಿಗಣೇಶ್. ಎನ್.ಪಿ) - Saaramathi(Sai Ganesh N P)
-10% Sold out
ಸಾರಮತಿ(ಸಾಯಿಗಣೇಶ್. ಎನ್.ಪಿ) - Saaramathi(Sai Ganesh N P)
₹150₹135 Ex Tax: ₹135

ಸಂಗೀತ ಚಿಂತನ ಬರಹಗಳು ಪ್ರಕಾಶನ : ಶ್ರಾವಣ ಪ್ರಕಾಶನ..

Sold out
ಸೌಂದರ್ಯ ಸಮೀಕ್ಷೆ - Soundarya Sameekshe(Shivarudrappa G S)
₹500₹450 Ex Tax: ₹450

ಪ್ರಕಾಶಕರು:ಕಾಮಧೇನು ಪುಸ್ತಕ ಭವನ..

Add to Cart
ಹುಚ್ಚು ಮನಸ್ಸಿನ ಹತ್ತು ಮುಖಗಳು - Huchchu Manasina Nooru Mukhagalu(Shivarama Karantha K)
--814%
ಹುಚ್ಚು ಮನಸ್ಸಿನ ಹತ್ತು ಮುಖಗಳು - Huchchu Manasina Nooru Mukhagalu(Shivarama Karantha K)
₹580₹5,300 Ex Tax: ₹5,300

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
Showing 1 to 13 of 13 (1 Pages)