L -ಎಲ್(Jogi)
- ₹120
ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್
ಪುಟಗಳು : ೧೩೨
Reviews
There are no reviews for this product.
ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್
ಪುಟಗಳು : ೧೩೨
There are no reviews for this product.
Related Products
ಉರಿಬಿಸಿಲಿನ ಮಧ್ಯಾಹ್ನ ತುಂತುರು ಮಳೆಯಾಗುತ್ತದೆ. ಕರಿಬೆಟ್ಟದ ತಪ್ಪಲಲ್ಲಿ ಬಿಳಿಹೂವುಗಳು ಅರಳುತ್ತವೆ. ಉಬ್ಬುಹಲ್ಲಿನ ಹುಡುಗಿ ಜೀವ ಹಿಂಡುವಂತೆ ಹಾಡುತ್ತಾಳೆ. ಕಪ್ಪಗಿನ ಹುಡುಗ ಚೆಂದದ ಕತೆ ಬರೆಯುತ್ತಾನೆ. ಪ್ರೇಮಿಸಿದ ಹುಡುಗಿಯ ಹೆಸರನ್ನು ಮಗಳಿಗಿಟ್ಟು ಸಂಭ್ರಮಿಸುತ್ತೇವೆ. ಕೈ ಕೊಟ್ಟ ಪ್ರೇಮಿಯನ್ನು ಕಾಲವೇ ಮರೆಸುತ್ತದೆ. ಬತ್ತಿಹೋದ ನದಿಯಲ್ಲೂ ಮತ್ತೆ ನೀರು ಹರಿಯುತ್ತದೆ. ಎತ್ತರದ ಮನೆಯ ಚೆಲುವೆ ಆಕಾಶಕ್ಕೆ ಬಣ್ಣ ಬಳಿಯುತ್ತಾಳೆ. ಟ್ರಾಫಿಕ್ಕು ಕಿಕ್ಕಿರಿದ ರಸ್ತೆಯನ್ನೂ ಪುಟ್ಟ ಮಗು ಕ್ಷೇಮವಾಗಿ ದಾಟಿಹೋಗುತ್ತದೆ. ಮಿಸ್ ಕಾಲಿನ ಆಚೆತುದಿಯಲ್ಲಿ ಮುಗುಳ್ನಗೆಯೊಂದು ಕಾದಿರುತ್ತದೆ. ಮುಂಗಾರು ಮಳೆಯ ಮುಂಜಾನೆ ಬೆಟ್ಟಕ್ಕೆ ಎಳೆಬಿಸಿಲೇ ಹೊದಿಕೆಯಾಗುತ್ತದೆ. ಎಲ್ಲೋ ಕೇಳಿದ ಹಾಡು ಜೀವನಪೂರ್ತಿ ಕಾಯುತ್ತದೆ. ಕತ್ತಲ್ ರಾತ್ರಿಯಲ್ಲಿ ಅವಳ ನಸುನಗೆ ದಾರಿ ತೋರುತ್ತದೆ. ಬಯಲಿನಲ್ಲಿ ಬಿಳಿಹಕ್ಕಿ ಇಳಿದು ಕಾಮನಬಿಲ್ಲನ್ನು ಕಣ್ತುಂಬಿಕೊಳ್ಳುತ್ತವೆ. ಜೋಬಿನಲ್ಲಿ ಬಾಲ್ಯದಲ್ಲಿ ಹೆಕ್ಕಿದ ರೆಂಜೆ ಹೂವು ಹಾಗೆ ಉಳಿದಿರುತ್ತದೆ. ಪ್ರತಿ ಮಧ್ಯಾಹ್ನವೂ ಸವೆದು ಸವೆದು ಅವಳ ನೆನಪಿನಂಥ ಸಂಜೆಯಾಗುತ್ತದೆ. ದೇವರು ದೂರದಲ್ಲೆಲ್ಲೋ ಕೂತು ನೋಡೂತ್ತಿರುತ್ತಾನೆ. ನಮ್ಮ ಎದುರಿಗಿರುವ ತಿಳಿಯಾದ ಸರೋವರವನ್ನು ಅವನು ತಪ್ಪಿಯೂ ಕಲಕುವುದಿಲ್ಲ. ಅದಕ್ಕೇ, ಲೈಫ್ ಈಸ್ ಬ್ಯೂಟಿಫುಲ್...
Add to Cart‘ನೀವೇ ನನ್ನ ಸೃಷ್ಟಿಕರ್ತರು‘ ಅನುಮಾನವೇ ಇಲ್ಲ. ‘ನೀವಿಲ್ಲದೇ ನಾವಿಲ್ಲ‘ ಅದು ಪೂರ್ತಿ ನಿಜವಲ್ಲ ‘ನನ್ನ ಬದುಕಿಗೆ ನೀವೇ ಹೊಣೆ‘ ನನಗೆ ನಾನೇಇಲ್ಲ ನಿನಗೆ ನೀನೇ. ‘ನನಗೋಸ್ಕರ ತ್ಯಾಗ ಮಾಡಿ‘ ಕೋಡಲಾರದ್ದನ್ನು ಕೇಳಬೇಡಿ. ‘ನಾನು ನಿಮ್ಮನ್ನೇ ನಂಬಿದ್ದೆನಲ್ಲ‘ ತಂದೆತಾಯಿ ದೇವರಲ್ಲ ‘ಪೂಜಿಸಿ ಫಲವಿಲ್ಲವೇ‘ ಪ್ರೀತಿಸುವುದೇ ಸರಿಯಲ್ಲವೇ...
Add to Cartಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರ ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹುಟ್ಟಿದ್ದು ನವೆಂಬರ್ ೧೬. ೧೯೬೫. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ, ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರಸ್ತುತ ಪುರವಣಿ ಸಂಪಾದಕರಾಗಿದ್ದಾರೆ...
Add to Cart"ಏಕಕಾಲಕ್ಕೆ ಐವರು ಪ್ರೇಯಸಿಯರು ಇರಬೇಕು ಅಂತ ಆಸೆಪಟ್ಟೆ. ಒಬ್ಬಳು ಕೈ ಕೊಟ್ಟರೆ ಸಮಾಧಾನಿಸಲು ಮತ್ತೊಬ್ಬಳಾದರೂ ಇರುತ್ತಾಳೆ ಅನ್ನುವುದು ನನ್ನ ಲೆಕ್ಕಾಚಾರ ಆಗಿತ್ತು.ಇಂಥದ್ದೊಂದು ಇಮೋಷನಲ್ ಇನ್ಶೂರೆನ್ಸ್ ಪಾಲಿಸಿ ಇಲ್ಲದೇ ಬದುಕುವುದಾದರೂ ಹೇಗೆ?ಹಾಗಂತ ಬರೆದುಕೊಂಡ ಅಮೆರಿಕನ್ ನಟ ಮರ್ಲನ್ ಬ್ರಾಂಡೋನನ್ನು ಒಂದು ಮಧ್ಯಾಹ್ನ ನನಗೆ ಪರಿಚಯ ಮಾಡಿಕೊಟ್ಟವರು ಪಿ. ಲಂಕೇಶ್. ಆಮೇಲೆ ಅವನ ಜೀವನಚರಿತ್ರೆ ಓದಿದೆ. ಅವನು ಮುಟ್ಟಿದರೆ ಕರಗಿಹೋಗುವ ಮಂಜಿನ ಹನಿಯಂತಿದ್ದ. ಯಾವ ಹೆಣ್ಣನ್ನೂ ನಂಬುತ್ತಿರಲಿಲ್ಲ. ಅವರನ್ನು ದ್ವೇಷಿಸುತ್ತಲೇ ಪ್ರೀತಿಸುವಂತೆ ನಟಿಸುತ್ತಿದ್ದ. ನಟನೆಯೆಂಬುದು ಮತ್ತೊಬ್ಬರನ್ನು ನಂಬಿಸಲು ಹೆಣಗಾಡುವ ಮನುಷ್ಯನಿಗೆ ಸಿಕ್ಕ ಶಾಪ. ನಾವೆಷ್ಟೇ ಚೆನ್ನಾಗಿ ನಟಿಸಿದರೂ ಯಾರಲ್ಲೂ ನಂಬಿಕೆ ಹುಟ್ಟಿಸಲಾರೆವು. ಸಹಜ ಪ್ರತಿಕ್ರಿಯೆಗಳುನಟನೆಯಂತೆಯೂ ನಟನೆ ಸಹಜವಾಗಿಯೂ ಕಾಣುವ ಸನ್ನಿವೇಶದಲ್ಲಿ ಚಿರಂಜೀವಿಯಾದ ಅಶ್ವತ್ಥಾಮ ಸತ್ತ ಅನ್ನುವ ಸುದ್ದಿಯನ್ನು ದ್ರೋಣ ನಂಬುವುದು ಎಂಥ ದುರಂತ. ಪ್ರೀತಿಯೂ ಅಂಥದ್ದೇ. ಅದು ಸಾಯಿಸುತ್ತದೆ ಅಂತ ಗೊತ್ತಿದ್ದರೂ ನಮ್ಮ ಜೀವ ಕೊಟ್ಟು ಅದನ್ನು ಬದುಕಿಸುತ್ತಲೇ ಇರುತ್ತೇವೆ. ಈ ಕಾದಂಬರಿಯಲ್ಲಿ ಅಶ್ವತ್ಥಾಮ ಪ್ರೀತಿಗಾಗಿ ಹಂಬಲಿಸಿ ಸೋತ ಕ್ಷಣಗಳಿವೆ."..
Add to Cartನನ್ನಮ್ಮ ಹೇಳಿದ ಬಡತನದ ಕಥೆಗಳುಶ್ರೀಮಂತರಾದ ಮೇಲಿನ ಕತೆಗಳಲ್ಲಿ ಯಾರೆಲ್ಲ ಬರುತ್ತಾರೋ ಗೊತ್ತಿಲ್ಲ. ಆದರೆ ಬಡತನದ ಕತೆಗಳ ನಾಯಕಿ ಮಾತ್ರ ಅಮ್ಮನೇ...
Add to Cartkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034