₹245
Ex Tax: ₹245
ಯಶವಂತ ಚಿತ್ತಾಲರ ‘ಶಿಕಾರಿ’ಯ ಕೇಂದ್ರ ಪ್ರತಿಮೆ ಬೇಟೆ. ಇದು ಕಾದಂಬರಿಯ ಉದ್ದಕ್ಕೂ ಅನೇಕ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹಾರಕ್ಕೆ ಸಂಬಂಧಪಟ್ಟ ಬೇಟೆಯ ಕ್ರಿಯೆ ಮನುಷ್ಯನ ಮೂಲಪ್ರವೃತ್ತಿಗಳಿಗೆ ಸಂಬಂಧಪಟ್ಟದ್ದು. ಆದರೆ, ಈ ಕಾದಂಬರಿಯಲ್ಲಿ ನಡೆಯುವ ಬೇಟೆ ಮನುಷ್ಯನಿಂದ ಪಶು, ಪಕ್ಷಿಗಳ ಬೇಟೆಯಾಗಿರದೆ ಇಂದಿನ ಔದ್ಯೋಗೀಕೃತ ನಾಗರೀಕತೆಯಲ್ಲಿ ಎಲ್ಲಿಯೂ ನೋಡಸಿಗುವ ಮನುಷ್ಯನಿಂದ ಮನುಷ್ಯನ ಬೇಟೆ. ‘ಶಿಕಾರಿ’ಯ ಕೇಂದ್ರ ವ್ಯಕ್ತಿ ನಾಗಪ್ಪ ಇಲ್ಲಿ ಬೇಟೆಯ ಗುರಿ. ಸ್ವಾರ್ಥ, ಸ್ವಹಿತ-ರಕ್ಷಣೆಗಳ ಉದ್ದೇಶಗಳಿಂದ ಒಂದಾದ ಬೇಟೆಗಾರರ ತಂಡವೇ ಅವನ ಬೆನ್ನು ಹತ್ತುತ್ತದೆ. ಅವನ ಅಸ್ತಿತ್ವದ ಬೇರುಗಳನ್ನೇ ಅಲುಗಾಡಿಸಿ ಅವನ ನಾಶಕ್ಕಾಗಿ ಹೊಂಚುಹಾಕುತ್ತದೆ. ಇಂಥ ಒಂದು ಸನ್ನಿವೇಶದಲ್ಲಿ ಮನುಷ್ಯನ ಬಾಳಿಗೆ ಅರ್ಥವಿದೆಯೇ? ಇದರಿಂದ ಪಾರಾಗಿ ಬದುಕುವ ಸಾಧ್ಯತೆಗಳಿವೆಯೇ? ಇಂಥ ಸನ್ನಿವೇಶ ಹುಟ್ಟಿತಾದರೂ ಹೇಗೆ? ಅದಕ್ಕೆ ಹೊಣೆಗಾರರು ಯಾರು? ಎನ್ನುವ ಮೂಲಭೂತ ಪ್ರಶ್ನೆಗಳನ್ನು ಎತ್ತುವುದರ ಮೂಲಕ ‘ಶಿಕಾರಿ’ ನಮಗೆ ಅತ್ಯಂತ ಪ್ರಸ್ತುತವಾದ ಕೃತಿಯಾಗಿದೆ...
Add to Cart